ಹೀರುತ್ತಿರುವುದು ಇಂಧನವಲ್ಲ

ಹೀರುತ್ತಿರುವುದು ಇಂಧನವಲ್ಲ
ಪ್ರಕೃತಿ ಮಾತೆಯ ರಕ್ತ
ಕುಸಿದರೆ ತಾಯಿ ನಮಗಿನ್ನಾರು
ಅರಿಯಲು ಆಗೊ ನೀ ಶಕ್ತ ; ಗೆಳೆಯ
ಅರಿಯಲು ಆಗೊ ನೀ ಶಕ್ತ /ಪ//

ಸಾಲದೆ ಹೊಂಗೆ ಸಾಲದೆ ಬೇವು
ಸಾಲದೆ ಹಿಪ್ಪೆ ಸಾಲು
ಎಷ್ಟು ಬೇಕೊ ತೈಲವು ನಿನಗೆ
ಕಣ್ತೆರೆದಿಂದು ಹೇಳು
ತಾಯಿ ಉರಿದರೆ ಧಗಧಗ ಎಂದು
ನಿನ್ನಯ ಹೊಟ್ಟೆ ತಂಪೆ?
ಕೆನ್ನೆಗೆ ಬಿದ್ದ ಏಟು ಸುನಾಮಿ
ಅರಿಯದೆ ಯಾಕೆ ಕುಳಿತೆ ; ಗೆಳೆಯ
ಅರಿಯದೆ ಯಾಕೆ ಕುಳಿತೆ? /೧/

ನೂರು ಹಸಿರು ನೂರು ಉಸಿರು
ಅರಿಯೋ ಅದು ಬಂಗಾರ
ಅದರ ತಾಳಕೆ ಹಾಕು ಹೆಜ್ಜೆ
ಮಾಡಿಕೊ ಬದುಕು ಸಿಂಗಾರ
ತಾಯಿಯ ಪ್ರೀತಿ ಶಾಶ್ವತವಿರಲಿ
ಚಿಮ್ಮದಿರಲಿ ಜಠರಾಗ್ನಿ
ಗತ ಕಾಲದ ನಡೆ ಮುನ್ನಡೆಯಾಗಲಿ
ಹೊಮ್ಮಲಿಂದು ಹಸಿರಗ್ನಿ ; ಗೆಳೆಯ
ತಂಪಾಗಲಿ ಬಡಬಾಗ್ನಿ /೨/
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಷ ಕನ್ಯ
Next post ಆಕಳ ಹಾಡು

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…