ಎತ್ತಿನ ಹಾಡು

ಮಾಗಿಽಯ ಹೊಡಿಯಾಗ
ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ
ನಾ ಹೋಗಿ ಒಂದ
ತೆನಿಧಂಟ ತಿಂದರ
ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ
ಕೈಲಾಸಕ ||೧||

ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ
ನಾ ಹೋಗಿ ಒಂದ
ಹೊಡೆಧಂಟ ತಿಂದರ
ಬಡಬಡಗಿಲೆ ಹೊಡೆದ್ಯೊ | ನಮ ಜೀವ ಹೋದಾವೊ
ಕೈಲಾಸಕ ||೨||

ಹೆತ್ತಿಕಾಳೆ ಕುಡು ಅಂದ್ರಽ
ನಿನ ಮಡದಿ ಅತ್ತ ಮಾರಿ ತಿರುವ್ಯಾಳ
ಹತ್ತಗೊಳಗ ತಿನ್ನಂದ್ರ
ಖಂಡಽಗ ತಿನ್ನುವ
ತುಂಡಿನಽ ತಂದ್ಹೊಡೊ | ಜೀವ ಹೋದಾವೊ
ಕೈಲಾಸಕ ||೩||

ಹಿಂಡಿಽಯ ಕುಡು ಅಂದಽ
ನಿನ ಮಡದಿ ಮೂಗನೆ ಮುರದಾಳ
ಖಂಡಽಗ ತಿನ್ನಂದ್ರ
ಇಖ್ಖಂಡ್ಗ ತಿನ್ನಂಥ
ತುಂಡಿನಽ ತಂದ್ಹೊಡೊ | ನಮ ಜೀವ ಹೋದಾವೊ
ಕೈಲಾಸಕ ||೪||

ಇಕ್ಕಿದರ ಹೆಂಡಿನಾದಿನಽ | ಹಚ್ಚಿದರ ಕುಳ್ಳ ನಾದಿನಽ
ದೇವಽರ ಮುಂದಿಽನ
ಪರಸಾದ ನಾ ಆದ
ಮತ್ತ್ಯಾತಕಾದೇನಽ | ನಮ ಜೀನ ಹೋದಾವ
ಕೈಲಾಸಕ ||೫||

ಸತ್ತರ ತೊಗಲಾದೆನಽ | ಮೆಟ್ಟಿದರ ಕೆರವಾದೆನಽ |
ಹೆಗಲ ಮ್ಯಾಲಾಡಂತ
ಬಾರಕೋಲ ನಾ ಆದ
ಮತ್ತ್ಯಾತಕಾದೇನ | ನಮ ಜೀವ ಹೋದಾವ
ಕೈಲಾಸಕ ||೬||
*****

ಎತ್ತಿನ ಕಡೆಯಿಂದ ಅಡವಿಯಲ್ಲಿ ಬೇಕುಬೇಕಾದಷ್ಟು ಕೆಲಸವನ್ನು ಮಾಡಿಸಿಕೊಂಡು ಅದರ ಸುಖದ ಕಡೆಗೆ ಮಾತ್ರ ಅಲಕ್ಷ್ಯವನ್ನು ಮಾಡಿದರೆ ಅದಕ್ಕೆ ಎಷ್ಟು ದುಃಖವಾಗಬೇಡ! ತಮ್ಮ ಕೆಲಸಗಳನ್ನು ಮಂದಿಯ ಕಡೆಯಿಂದ ಬೇಕಾದ ಹಾಗೆ ಮಾಡಿಸಿಕೊಂಡು, ಅವರ ಅನುವು-ಆಪತ್ತುಗಳ ಕಡೆಗೆ ನೋಡುವ ಪ್ರಸಂಗ ಬಂದಾಗ ಮೋರೆ ತಿರುವುವ ಸ್ವಭಾವವು ಬಹು ಜನರಲ್ಲಿರುತ್ತದೆ. ಅಂಥರಿಗೆ ಚುಚ್ಚುವಂತೆ ಈ ಹಾಡು ಇದೆ. ಇದಲ್ಲದೆ ಒಕ್ಕಲಿಗರ ಮನೆಯಲ್ಲಿ ದನ-ಕರುಗಳ ನೀರು-ಮೇವುಗಳ ಚಿಂತೆಯು ಮನೆಯ ಒಡತಿಗೆ ಇಲ್ಲದೆ ಹೋಗಬಾರದೆಂಬುದಕ್ಕೂ ಈ ಹಾಡು ಉಸಯುಕ್ತವಾಗಿದೆಯೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿಯ ಜಾತಿಗೆ ಸೇರಿದ್ದು.

ಶಬ್ದ ಪ್ರಯೋಗಗಳು:— ಮಾಗಿ=ಮಾಗಿಯ ಕಾಲದ ಎಂದರೆ ಮಾಘ ಮಾಸದ ನೇಗಿಲು ಗೆಲಸ. ಮಾಯದಿಂದ=ಪ್ರೀತಿಯಿಂದ. ಧಂಟಿ=ದಂಟು. ತುಂಡೀನ=ಸೊಕ್ಕಿದವಳನ್ನು. ಹೆಂಡಿ=ಸೆಗಣಿ. ಕುಳ್ಳ=ಬರಣಿ. ಪರಸಾದ=ಧೂಪದ ಬೂದಿ (ಪ್ರಸಾದ). ಬಾರಕೋಲ=ಚಬಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋದ ವರ್‍ಷ ಬಂದ ಹಬ್ಬ
Next post ಇನ್ನು ರೋಬೊಟ್‌ಗಳ ಕೆಲಸ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…