ಗರ್ಭವೈಚಿತ್ರ್ಯ ?

ಅದಾವ ಲೀಲಾಜಾಲ ಮಾಯೆ ಮುಸುಕು!
ಬಲೆಯೋ, ಭವಣೆಯೋ, ಬಣ್ಣ ಜೀವನ ವರ್ಣವೈಚಿತ್ರ್ಯವೋ ?
ಕನಸು ನನಸಿನ ನೋಟ; ಮಿಂಚದಾ ಬದುಕು!
ಇಹ-ಪರ ಪಾತಾಳಗಳ ಬಗೆಯು ಅರಿಯಲಸದಳವೋ ?

ಭುವಿಯನೇ ಹೆತ್ತು, ನೀರು ಜೀವವ ಇತ್ತು
ಅನಿಲ ಅನಲರ ತೆತ್ತು; ನಮ್ಮ ನಿತ್ತ ತಂದೆ ಇರುವರಾರು ?
ವಿಶ್ವಗರ್ಭವೈಚಿತ್ರ್ಯವಾವಿರ್ಭವಿಸಿದಾರ ಸೊತ್ತು?
ಸುತ್ತುತಿದೆ ಸರ್ವಸ್ವ, ಸರಿಯುತಿದೆ ಸಮಯ; ಹಿರಿಯರಿದಕಾರು?

ಆಚಿನಾಚೆಯ ದಿಶೆಯ ಉರಿಯ ರವಿಯಾರು?
ಏನಿದೀ ಒಳಸಂಚು. ಅರ್ಥ ಅರಿಯದ ನೀಲಿವ್ಯೋಮವು !
ಕೈಚಳಕವೆನಿತು ? ಸೂತ್ರವಿಡಿದವರಾರು ?
ಬೇರು ಇಲ್ಲದ ಕಾಂಡ, ಮೂಲವಿಲ್ಲದ ಶಾಖ ಜಗದೊಳಾವು ?

ಹಗಲಿರುಳು ಯುಗ ಯುಗಕೆ ಮುಗಿಯದೇ
ತಿರುಗುತಿಹನದೊ ತಿಂಗಳನು! ತಿರುಗಿ ಮಾಡುವನೇನು?
ಹೆಣೆದು ನಿಂತಿಹವು ಚುಕ್ಕೆಗಳು ಬಾಡದೇ!
ಅದ್ಭುತ ಬ್ರಹ್ಮಾಂಡ ಭ್ರಮೆಯೋ ನೈಜವೋ, ತಿಳಿಯದೇನು

ಜೀವರಾಶಿಯ ನಾಟ್ಯ ಸಾವಕಂಟಿಹುದು
ನಾವಳಿದು ಮುಂದೇನು? ಜನ್ಮ ಕಲ್ಪನೆಯಾಟ ನನಸೇನು?
ಏನಿದಗಮ್ಯನಾ ಕರ್ತನ ಕುಸಿರಹುದು!
ಸಾಸಿರ ವರ್ಣ ರಂಧ್ರದೀ ಕುಸುರು; ಅತೀತ ಅವ್ಯಕ್ತ ಉಸಿರೇನು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪನ್ನು
Next post ಚುಟುಕುಗಳೆಂದರೆ – ೧

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys