ಚುಮು ಚುಮು ನಸಕು
ಸುಂಯ್ಗುಡುವ ಅಶೋಕ ವೃಕ್ಷಗಳು
ರಾತ್ರಿಯಿಡೀ ಎಣ್ಣೆಯಲಿ
ಮಿಂದೆದ್ದ ಗಿಡ ಗಂಟೆ, ಗದ್ದೆ
ಮಲ್ಲಿಗೆ ಸಂಪಿಗೆ ಗುಲಾಬಿಗಳು
ಕೊರಡು ಕೊನರುವಿಕೆಯೆ ಸಾಲುಗಳು….
ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ
ಕನಸು ಹೋದಿತೆನ್ನುವ ಬೇಸರ
ತಿರು ತಿರುಗಿ ರಗ್ಗೆಳೆದು ನಿದ್ರಿಸುವ
ನಿದ್ರಾಪ್ರಿಯರು
ಬೆಳಗಿನ ಚಹ ಬೇಕೆನ್ನುವ
ಸಮಯ ಪ್ರಜ್ಞಾಪ್ರಿಯರು ಇರುವಾಗ-
ಆಯತಪ್ಪಿ ಆಗೀಗೊಮ್ಮೆ
ಕಿಡಕಿಗೆ ಹೊಡೆವ ಮಳೆ
ನಸುಕಿಗೆ ಕಚಗುಳಿಯಿಟ್ಟು
ಎಬ್ಬಿಸುವಾಗ
ಸೂರ್ಯರಶ್ಮಿ ತಲೆದಿಂಬಿಗೆ ತೆಕ್ಕಯಾಗುತ್ತದೆ –
ಅನಾಮಿಕ ಹಕ್ಕಿ ಕಿಡಕಿಯ ಹೊರಗಡೆ
ತಂತಿಯ ಮೇಲೆ ರಕ್ಕೆ ಬಡಿಯುತ್ತ
ಜೀಕಾಡುತ್ತ ಹಾಡುತ್ತದೆ.
ಬಣ್ಣದ ಚಿಟ್ಟೆ ವಾಯುದೂತಾಗಿ
ಹೂ ಗಿಡ ಬಳ್ಳಿ ಕಂದರಗಳಲ್ಲಿ ಹಾಯ್ದು
ಮತ್ತೆ ಸದ್ದಿಲ್ಲದೆ ತಿರುಗಿ ಬಂದು
ನಿಶ್ಶಬ್ದದಲ್ಲಿ ಕರಗಿ ಬಿಡುವನು.
*****
Related Post
ಸಣ್ಣ ಕತೆ
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…