ನಮ್ಮೂರ ಹೋಳಿ ಹಾಡು – ೮

ರತಿ ದೇವಿ ಕಾಂತನ ನೆನಸಿ
ಅಳುತ ಬಿಡುವಳು ಬಾಯ |
ನೀ ಬಿಡುವುದೇ ಕೈಯಾ ||ಪ||

ಸುರರೆಲ್ಲರು ಕಲೆತು ನಿನಗೆ
ಮಾಡಿದರಲ್ಲೋ ಅಪಜಯ
ಎನ್ನ ಮೋಹದ ರಾಯ ||೧||

ತಾರಕರ ಬಾಧೆಗೆ ತಾಳದೆ
ಮಾಡಿದರುಪಾಯ?
ದೇವತಾ ಗುರುರಾಯ ||೨||

ನನಗೆ ನಿನಗೆ ಕಂಕಣ ಕಟ್ಟಿ
ಮಾಡಿ ಮದುವೆಯಾ
ಎರೆದಾರೋ ಧಾರೆಯಾ? ||೩||

ಮರೆ-ಮೋಸ ಮಾಡಿ
ನಿನ್ನ ಪ್ರಾಣ ಕಳೆದರೋ ಪ್ರಿಯಾ?
ಹೇ ಚೆನ್ನಿಗರಾಯ ||೪||

ಹರಿದಿತ್ತು ಕನಸಿನೊಳಗೆ
ಕರಿಮಣಿಯು ತಾಳಿಯಾ!
ಮುರಿದಿತ್ತು ಮೂಗುತಿಯಾ ||೫||

ನಾ ಕನಸ ಕಂಡೆ ನಿದ್ರೆಯೊಳಗೆ
ನಿನ್ನಯ ತಲೆಯಾ!
ಯಮದೂತರ ಕೈಯಾ ||೬||

ತಲೆ ಇದ್ದಿಲ್ಲ? ನಾ ಕಂಡೆ!!
ಬರೀ ಡಿಂಬದ ಬಾಯಾ!
ಇದೆಂಥ ಆಶ್ಚರ್ಯ ||೭||

ಮೆರೆಸಿದ್ದರು ನಿನ್ನಾನೆಯ ಮೇಲೆ
ಬೀದಿಯಲಾ ಕೊರಳಿಗೆ
ಹೂವಿನ ಮಾಲೆಯಾ ||೮||

ಸಿರಿ ಸೆಟ್ಟಿ ಮಾಡಿದಂಥ
ಪದದ ಗಗರಿಯಾ
ಜಂಭಕಿಕ್ಕಿದ್ದು ಸರಿಯಾ? ||೯||

ಶಾಸನವನೆ ಬರೆದು ಬಿಟ್ಟನು
ಅವ ಕೊಂಡು ಉಕ್ಕಿನ ಮಳೆಯಾ ?
ಹೋ ಮನ್ಮಥರಾಯ ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ನಾಡ ಕಟ್ಟುವ ಕಲಿಗಳು
Next post ಪಂಪ್ಕಿನ್ ಗಾಡಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…