ನಮ್ಮೂರ ಹೋಳಿ ಹಾಡು – ೮

ರತಿ ದೇವಿ ಕಾಂತನ ನೆನಸಿ
ಅಳುತ ಬಿಡುವಳು ಬಾಯ |
ನೀ ಬಿಡುವುದೇ ಕೈಯಾ ||ಪ||

ಸುರರೆಲ್ಲರು ಕಲೆತು ನಿನಗೆ
ಮಾಡಿದರಲ್ಲೋ ಅಪಜಯ
ಎನ್ನ ಮೋಹದ ರಾಯ ||೧||

ತಾರಕರ ಬಾಧೆಗೆ ತಾಳದೆ
ಮಾಡಿದರುಪಾಯ?
ದೇವತಾ ಗುರುರಾಯ ||೨||

ನನಗೆ ನಿನಗೆ ಕಂಕಣ ಕಟ್ಟಿ
ಮಾಡಿ ಮದುವೆಯಾ
ಎರೆದಾರೋ ಧಾರೆಯಾ? ||೩||

ಮರೆ-ಮೋಸ ಮಾಡಿ
ನಿನ್ನ ಪ್ರಾಣ ಕಳೆದರೋ ಪ್ರಿಯಾ?
ಹೇ ಚೆನ್ನಿಗರಾಯ ||೪||

ಹರಿದಿತ್ತು ಕನಸಿನೊಳಗೆ
ಕರಿಮಣಿಯು ತಾಳಿಯಾ!
ಮುರಿದಿತ್ತು ಮೂಗುತಿಯಾ ||೫||

ನಾ ಕನಸ ಕಂಡೆ ನಿದ್ರೆಯೊಳಗೆ
ನಿನ್ನಯ ತಲೆಯಾ!
ಯಮದೂತರ ಕೈಯಾ ||೬||

ತಲೆ ಇದ್ದಿಲ್ಲ? ನಾ ಕಂಡೆ!!
ಬರೀ ಡಿಂಬದ ಬಾಯಾ!
ಇದೆಂಥ ಆಶ್ಚರ್ಯ ||೭||

ಮೆರೆಸಿದ್ದರು ನಿನ್ನಾನೆಯ ಮೇಲೆ
ಬೀದಿಯಲಾ ಕೊರಳಿಗೆ
ಹೂವಿನ ಮಾಲೆಯಾ ||೮||

ಸಿರಿ ಸೆಟ್ಟಿ ಮಾಡಿದಂಥ
ಪದದ ಗಗರಿಯಾ
ಜಂಭಕಿಕ್ಕಿದ್ದು ಸರಿಯಾ? ||೯||

ಶಾಸನವನೆ ಬರೆದು ಬಿಟ್ಟನು
ಅವ ಕೊಂಡು ಉಕ್ಕಿನ ಮಳೆಯಾ ?
ಹೋ ಮನ್ಮಥರಾಯ ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ನಾಡ ಕಟ್ಟುವ ಕಲಿಗಳು
Next post ಪಂಪ್ಕಿನ್ ಗಾಡಿ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…