Home / ಬಾಲ ಚಿಲುಮೆ / ಕವಿತೆ / ಎಲ್ಲದಾನವ್ನು ಮನಸ್ಯಾ

ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು
ಕೆಲವು ಕಾಗದಾ ತಿಂಬೋ ಕತ್ತೆಗ್ಳು
ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು
ಕೆಲವು ಹೆಣಾತಿನ್ನೋ ಹದ್ದುಗಳು
ಕೆಲವು ಮಾಂಸಾ ಮೂಸೋ ನಾಯಿಗಳು
ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹಂದಿಗ್ಳು

ಕೆಲವೋ ಸತ್ತೋರ ಗೋರಿಗೆ ಬಟ್ಟೆ ಸುತ್ತಿ
ಸುತ್ತಿ ಬಳಸೋ ಮರುಳುಗುಳು
ಕೆಲವು ಗುಡಾಣಗಳಾದರೆ ಕೆಲವು ಗುಬ್ಬಚ್ಚಿ ಗೂಡುಗಳು
ಕೆಲವು ಕಿವಿಯಿಲ್ಲದ ಸೋರೆಬಾಯಿಗ್ಳು
ಕೆಲವು ಬಣ್ಣ ಬಣ್ಣ ಬದಲಸೋ ಊಸರವಳ್ಳಿಗುಳು
ಕೆಲವು ಸಣ್ಣ ಸಣ್ಣ ಪ್ರಾಣಿ ತಿನ್ನೋ ದಾಸರಹಾವುಗಳು

ಕೆಲವು ಹೊಟ್ಟೇನ ಕೈಯಾಗಿಟ್ಟುಗೊಂಡು
ಚಾಚಿರೊ ತಟ್ಟೆಗಳು

ಕೆಲವು ಕುಂಡಿ ತೊಳಿಯೊ ನೀರ್ನೆ ತೀರ್ಥಾಂತ
ಕುಡಿಯೊ ಕಿಲುಬು ಸೌಟುಗ್ಳು
ಕೆಲವು ಚಿಗುರೋದೂ ಬ್ಯಾಡಾ ಬಗ್ಗೋದೂ ಬ್ಯಾಡಾ
ಅಂಬೋ ಮೋಟುಗುಳು
ಕೆಲವು ತಲಿಯಿಲ್ದೆ ಆಡ್ಡಾದಿಡ್ಡಿ ನಡೆಯೊ ಮುಂಡುಗ್ಳು
ಕೆಲವು ಬಾಯ್ಬಾಯ್ಬಡಕೊಳ್ಳೊ, ಕೈಕಾಲಿಲ್ಲದ ರುಂಡುಗ್ಳು
ಹೃದಯಾನ ಬಾಯಾಗೆ ಹಿಂಡಿ ಹಾಡೋವು ಕೆಲವು
ಅದನ್ನೆ ಎಲುಬಿಂದ ಚುಚ್ಚಿ ರಕ್ತ ತಗದು
ಬಿಳಿಕರಿಮಾಡೋವು ಕೆಲವು

ವಾತಾ ಪಿತ್ಥ ಕಫ ನೆಣ ನರಾ ಏನೇನೋ ಕಾರಿಕೊಂಡು
ಸ್ವಚ್ಛನೆಲ್ಲ ಕೆಡಿಸಿ ಕಲೆಕಲೆ ಮಾಡೋವು ಕೆಲವು
ಕೆಲವು ಹೂವಿನಿಂದ ಕಲ್ಲನ್ನು ಕುಟ್ಟಿಕುಟ್ಟಿ ನಾಳಿನ
ಮೂರ್ತಿಗಳ ಮಾಡ್ತೀವಿ
ಅಂಬೋ ಬೆಪ್ಪುಗಳು

ಹೀಗೆ ಎಲ್ಲಿ ನೋಡಿದ್ರೂ ವಿರೂಪ ವಿಕೃತ ವೇಷಗಳು
ಇಂಥಾ ಗಲ್ಯಾಗೆ ಎಲ್ಲದಾನವ್ನು ಮನಸ್ಯಾ
ಕೈಕಾಲು ತಲೆ ಎದೆ ಬಟ್ಟೆ ರಟ್ಟೆ ಬಾಯಿ ಬೆಳ್ಳು ಕಳ್ಳು ಕಣ್ಣು
ಎಲ್ಲಾ ಸರಿಯಾಗಿರೋ ಮನಸ್ಯಾ
*****
(೨೧-೯-೭೭)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...