Home / ಬಾಲ ಚಿಲುಮೆ / ಕವಿತೆ / ಎಲ್ಲದಾನವ್ನು ಮನಸ್ಯಾ

ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು
ಕೆಲವು ಕಾಗದಾ ತಿಂಬೋ ಕತ್ತೆಗ್ಳು
ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು
ಕೆಲವು ಹೆಣಾತಿನ್ನೋ ಹದ್ದುಗಳು
ಕೆಲವು ಮಾಂಸಾ ಮೂಸೋ ನಾಯಿಗಳು
ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹಂದಿಗ್ಳು

ಕೆಲವೋ ಸತ್ತೋರ ಗೋರಿಗೆ ಬಟ್ಟೆ ಸುತ್ತಿ
ಸುತ್ತಿ ಬಳಸೋ ಮರುಳುಗುಳು
ಕೆಲವು ಗುಡಾಣಗಳಾದರೆ ಕೆಲವು ಗುಬ್ಬಚ್ಚಿ ಗೂಡುಗಳು
ಕೆಲವು ಕಿವಿಯಿಲ್ಲದ ಸೋರೆಬಾಯಿಗ್ಳು
ಕೆಲವು ಬಣ್ಣ ಬಣ್ಣ ಬದಲಸೋ ಊಸರವಳ್ಳಿಗುಳು
ಕೆಲವು ಸಣ್ಣ ಸಣ್ಣ ಪ್ರಾಣಿ ತಿನ್ನೋ ದಾಸರಹಾವುಗಳು

ಕೆಲವು ಹೊಟ್ಟೇನ ಕೈಯಾಗಿಟ್ಟುಗೊಂಡು
ಚಾಚಿರೊ ತಟ್ಟೆಗಳು

ಕೆಲವು ಕುಂಡಿ ತೊಳಿಯೊ ನೀರ್ನೆ ತೀರ್ಥಾಂತ
ಕುಡಿಯೊ ಕಿಲುಬು ಸೌಟುಗ್ಳು
ಕೆಲವು ಚಿಗುರೋದೂ ಬ್ಯಾಡಾ ಬಗ್ಗೋದೂ ಬ್ಯಾಡಾ
ಅಂಬೋ ಮೋಟುಗುಳು
ಕೆಲವು ತಲಿಯಿಲ್ದೆ ಆಡ್ಡಾದಿಡ್ಡಿ ನಡೆಯೊ ಮುಂಡುಗ್ಳು
ಕೆಲವು ಬಾಯ್ಬಾಯ್ಬಡಕೊಳ್ಳೊ, ಕೈಕಾಲಿಲ್ಲದ ರುಂಡುಗ್ಳು
ಹೃದಯಾನ ಬಾಯಾಗೆ ಹಿಂಡಿ ಹಾಡೋವು ಕೆಲವು
ಅದನ್ನೆ ಎಲುಬಿಂದ ಚುಚ್ಚಿ ರಕ್ತ ತಗದು
ಬಿಳಿಕರಿಮಾಡೋವು ಕೆಲವು

ವಾತಾ ಪಿತ್ಥ ಕಫ ನೆಣ ನರಾ ಏನೇನೋ ಕಾರಿಕೊಂಡು
ಸ್ವಚ್ಛನೆಲ್ಲ ಕೆಡಿಸಿ ಕಲೆಕಲೆ ಮಾಡೋವು ಕೆಲವು
ಕೆಲವು ಹೂವಿನಿಂದ ಕಲ್ಲನ್ನು ಕುಟ್ಟಿಕುಟ್ಟಿ ನಾಳಿನ
ಮೂರ್ತಿಗಳ ಮಾಡ್ತೀವಿ
ಅಂಬೋ ಬೆಪ್ಪುಗಳು

ಹೀಗೆ ಎಲ್ಲಿ ನೋಡಿದ್ರೂ ವಿರೂಪ ವಿಕೃತ ವೇಷಗಳು
ಇಂಥಾ ಗಲ್ಯಾಗೆ ಎಲ್ಲದಾನವ್ನು ಮನಸ್ಯಾ
ಕೈಕಾಲು ತಲೆ ಎದೆ ಬಟ್ಟೆ ರಟ್ಟೆ ಬಾಯಿ ಬೆಳ್ಳು ಕಳ್ಳು ಕಣ್ಣು
ಎಲ್ಲಾ ಸರಿಯಾಗಿರೋ ಮನಸ್ಯಾ
*****
(೨೧-೯-೭೭)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...