ಎಲ್ಲದಾನವ್ನು ಮನಸ್ಯಾ

ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು
ಕೆಲವು ಕಾಗದಾ ತಿಂಬೋ ಕತ್ತೆಗ್ಳು
ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು
ಕೆಲವು ಹೆಣಾತಿನ್ನೋ ಹದ್ದುಗಳು
ಕೆಲವು ಮಾಂಸಾ ಮೂಸೋ ನಾಯಿಗಳು
ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹಂದಿಗ್ಳು

ಕೆಲವೋ ಸತ್ತೋರ ಗೋರಿಗೆ ಬಟ್ಟೆ ಸುತ್ತಿ
ಸುತ್ತಿ ಬಳಸೋ ಮರುಳುಗುಳು
ಕೆಲವು ಗುಡಾಣಗಳಾದರೆ ಕೆಲವು ಗುಬ್ಬಚ್ಚಿ ಗೂಡುಗಳು
ಕೆಲವು ಕಿವಿಯಿಲ್ಲದ ಸೋರೆಬಾಯಿಗ್ಳು
ಕೆಲವು ಬಣ್ಣ ಬಣ್ಣ ಬದಲಸೋ ಊಸರವಳ್ಳಿಗುಳು
ಕೆಲವು ಸಣ್ಣ ಸಣ್ಣ ಪ್ರಾಣಿ ತಿನ್ನೋ ದಾಸರಹಾವುಗಳು

ಕೆಲವು ಹೊಟ್ಟೇನ ಕೈಯಾಗಿಟ್ಟುಗೊಂಡು
ಚಾಚಿರೊ ತಟ್ಟೆಗಳು

ಕೆಲವು ಕುಂಡಿ ತೊಳಿಯೊ ನೀರ್ನೆ ತೀರ್ಥಾಂತ
ಕುಡಿಯೊ ಕಿಲುಬು ಸೌಟುಗ್ಳು
ಕೆಲವು ಚಿಗುರೋದೂ ಬ್ಯಾಡಾ ಬಗ್ಗೋದೂ ಬ್ಯಾಡಾ
ಅಂಬೋ ಮೋಟುಗುಳು
ಕೆಲವು ತಲಿಯಿಲ್ದೆ ಆಡ್ಡಾದಿಡ್ಡಿ ನಡೆಯೊ ಮುಂಡುಗ್ಳು
ಕೆಲವು ಬಾಯ್ಬಾಯ್ಬಡಕೊಳ್ಳೊ, ಕೈಕಾಲಿಲ್ಲದ ರುಂಡುಗ್ಳು
ಹೃದಯಾನ ಬಾಯಾಗೆ ಹಿಂಡಿ ಹಾಡೋವು ಕೆಲವು
ಅದನ್ನೆ ಎಲುಬಿಂದ ಚುಚ್ಚಿ ರಕ್ತ ತಗದು
ಬಿಳಿಕರಿಮಾಡೋವು ಕೆಲವು

ವಾತಾ ಪಿತ್ಥ ಕಫ ನೆಣ ನರಾ ಏನೇನೋ ಕಾರಿಕೊಂಡು
ಸ್ವಚ್ಛನೆಲ್ಲ ಕೆಡಿಸಿ ಕಲೆಕಲೆ ಮಾಡೋವು ಕೆಲವು
ಕೆಲವು ಹೂವಿನಿಂದ ಕಲ್ಲನ್ನು ಕುಟ್ಟಿಕುಟ್ಟಿ ನಾಳಿನ
ಮೂರ್ತಿಗಳ ಮಾಡ್ತೀವಿ
ಅಂಬೋ ಬೆಪ್ಪುಗಳು

ಹೀಗೆ ಎಲ್ಲಿ ನೋಡಿದ್ರೂ ವಿರೂಪ ವಿಕೃತ ವೇಷಗಳು
ಇಂಥಾ ಗಲ್ಯಾಗೆ ಎಲ್ಲದಾನವ್ನು ಮನಸ್ಯಾ
ಕೈಕಾಲು ತಲೆ ಎದೆ ಬಟ್ಟೆ ರಟ್ಟೆ ಬಾಯಿ ಬೆಳ್ಳು ಕಳ್ಳು ಕಣ್ಣು
ಎಲ್ಲಾ ಸರಿಯಾಗಿರೋ ಮನಸ್ಯಾ
*****
(೨೧-೯-೭೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಜ
Next post ತಾಯಿ ಮಗನಿಗೆ ಹೇಳಿದ್ದು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys