ಸೋಲು

ನೆಲಮುಗಿಲಿನೆತ್ತರಕು ನಿಂತಿದೆ ಭೂತ
ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ
ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ
ಪಂಜರದಿಂದ ಹೊರಬಂದ ಪಕ್ಷಿ
ಹಾರಲಾರದೆ ಹೊಯ್ದಾಡಿದಂತೆ ಸೋತಿದೆ
ನಂದನವನದಲ್ಲಿ ಕಣ್ಣೀರ ಹೊಳೆ
ಹೊದರಲ್ಲಡಗಿ ಹರಿಯುತ್ತದೆ ಗಳಗಳ
ಕೃಷ್ಣನ ಕೊಳಲಲ್ಲಿ ಕಂಸನುಸಿರು ಬಿಡುತ್ತಿದ್ದಾನೆ
ಹುಡುಕುತ್ತಿದ್ದ ಬಳ್ಳಿ ಕಾಲ್ತೊಡಕಿದಾಗ
ಹರಕೊಂಡು ತಿಂದರೆ
ಬಾಯೆಲ್ಲ ವಿಷವಾಯ್ತು
ಕಾವೇರಿಗೆ ಕಟ್ಟಿದಾಣೆಕಟ್ಟು
ಕಟ್ಟುವ ಮುನ್ನವೇ
ವಿಶ್ವೇಶ್ಚರಯ್ಯನಣಕಿಸಿ
ಹೊಲಹಳ್ಳಿಗಳಲ್ಲೆಲ್ಲ ನುಗ್ಗಿತು
ಸಮುದ್ರಕ್ಕೆ ನೀರು ಕುಡಿಯಲು ಬಿಟ್ಟಂತೆ
ಭಕ್ಷ್ಯ ರಾಶಿಯ ಬಾಚಿ ತಬ್ಬಿ ಉಪವಾಸ ನರಳಿದಂತೆ
ಪಟ್ಟೆ ಪೀತಾಂಬರದ ಮೇಲೆ ಬೆತ್ತಲೆ ಹೊರಳಾಡಿದಂತೆ
ತನ್ನರಮನೆಯಂಗಳದಲ್ಲಿ ನಿಂತು ತಾ ತಿರಿದುಂಡಂತೆ
ಚಿಕ್ಕೆಗಳನೆಣಿಸಲು ಕೋತಿ
ಮರದಿಂದ ಕೆಳಬಿದ್ದು ಹಲ್ಲುಕಿರಿದಂತೆ
ತೆಕ್ಕೆಗೆ ಅಮರದ ಬೊಡ್ಡೆ ಹಿಡಿದೇರಿ
ಬಾಯ್ತೆರೆದು ಬಿದ್ದಾಗ
ಯಾರಾದರೂ ನೋಡಿದರೇನೋ
ಎಂದು ಸುತ್ತ ನೋಡುವ ದುಸ್ಥಿತಿ
(೨೭-೧೨-೭೬)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖಾಲಿ ಶೀಷೆ
Next post ಶಿಸ್ತಿನ ಸಿಪಾಯಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys