ನಗೆ ಡಂಗುರ – ೧೮೧

ಕಾರು ತುಂಬಾ ವೇಗವಾಗಿ ಅಂದರೆ ೬೦ಕಿಮಿಗೂ ಹೆಚ್ಚು ವೇಗವಾಗಿ ಓಡುತ್ತಿತ್ತು. ಪೋಲೀಸಿನವ ಬೆನ್ನಟ್ಟಿ ಆ ಕಾರನ್ನು ನಿಲ್ಲಿಸಿ ದ್ರೈವರ್‍ನನ್ನು ತರಾಟೆಗೆ ತೆಗೆದುಕೊಂಡರು. “ನಿಮ್ಮ ಮೇಲೆ ಅತಿವೇಗದ ಕಾರಣ ಕೇಸ್‍ಹಾಕುತ್ತಿದ್ದೇನೆ. ನಿಮ್ಮಹೆಸರು ಹೇಳಿ” ಎಂದೆನ್ನುತ್ತಾ ತನ್ನ ಡೈರಿಯನ್ನು ತೆಗೆದು ಹೆಸರು ಬರೆದುಕೊಳ್ಳಲು ಮುಂದಾದ.
‘ಹೆಸರು ತಾನೆ ನಿಮಗೆ ಬೇಕಾಗಿರೋದು? ಬರೆದುಕೊಳ್ಳಿ’ ಎಂದೆನ್ನುತ್ತಾ ತನ್ನ ಹೆಸರು ಹೀಗೆ ಹೇಳಿದ ಆ ಡ್ರೈವರ್ ಮಹಾಶಯಃ
“ಗೋಪಿ ಕುಚಮರ್ದನ ಗೋಪಾಲದಾಸ ಹುಚ್ಚಾಚಾರ್, ಕಡಲ ಮಂಡಲಗೀ ತರದಿ ಹಣಮಂತ ಎಂಕಣ್ಣ”-
ಪೋಲೀಸಿನವ ತಬ್ಬಿಬ್ಬಾಗಿ ಬೆವತು ಹೆಸರು ಬರೆದು ಕೊಳ್ಳಲಾಗದ ಸ್ಥಿತಿ ತಲುಪಿ “ನೋಡಿ, ಸುಮ್ಮನೆ ಜಾಗ ಖಾಲಿ ಮಾಡಿ ಹೊರಡಿ ಇನ್ನು ಮುಂದೆ ಇಷ್ಟೊಂದು ವೇಗವಾಗಿ ಹೋಗಬೇಡಿ.” ಎಂದು ಬಿಟ್ಟ!
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೬೧
Next post ರಾತ್ರಿ ಹಗಲು ಎರಡೂನು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…