Home / ಲೇಖನ / ವಿಜ್ಞಾನ / ಆಕರ್ಷಕ ಮರದ ಟೆಲಿಫೋನ್ ಮಾರುಕಟ್ಟೆಗೆ

ಆಕರ್ಷಕ ಮರದ ಟೆಲಿಫೋನ್ ಮಾರುಕಟ್ಟೆಗೆ

ಇದುವರೆಗೆ ಪೈಬರ್ ಮತ್ತು ಪ್ಲಾಸ್ಟಿಕ್‌ನ ಫೋನ್‌ಗಳು ಚಾಲ್ತಿಯಲ್ಲಿದ್ದವು. ಇದರಲ್ಲಿ ವಿದ್ಯುತ್ ಸರ್ಕ್ಯುಟ್ ಅಪಾಯ ಮತ್ತು ವಿದ್ಯುಶಾಖ ಹೊಡೆಯುವುದು ಆಗುತ್ತಿತ್ತು ಈದೀಗ ಗಂಟೆ ಬಾರಿಸುವ ಮರದ ಟೆಲಿಫೋನ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆಕ್ಕರ ಗ್ರಾಮದ ಉದ್ಯಮಿ ಕೃಷ್ಣಭಟ್ ಅವರು ತಯಾರಿಸಿದ್ದಾರೆ. ಇದು ಇಂದಿನ ತಾಂತ್ರಿಕ ಯುಗದಲ್ಲಿ ಟೆಲಿಫೋನ್ ಜಗತ್ತಿಗೆ ಪೈಪೋಟಿ ನಡೆಸುತ್ತದೆ. ‘ಉಡ್‌ಬೆಲ್’ ಎಂದು ಕರೆಯುವ ಇದನ್ನು ಕೃಷ್ಣಭಟ್ ಅವರು ಆಕರ್ಷಕವಾಗಿ ತಯಾರಿಸಿದ್ದು ಎಲ್ಲಕಾಲದಲ್ಲಿಯೂ ಇದರೊಳಗಿನ ಇಲೆಕ್ಟ್ರಾನಿಕ್ಸ್ ಪದಾರ್ಥಗಳು ಸುರಕ್ಷಿತವಾಗಿ ಕಾರ್ಯಶೀಲಗೊಳ್ಳುತ್ತವೆ ಎಂದು ತಯಾರಕರ ಅಭಿಪ್ರಾಯ. ಒಳ್ಳೆಯ ‘ಧ್ವನಿತರಂಗ’ ಮಾಡವುದಲ್ಲದೇ ಯಾವುದೇ ವಿಧದ ಶಾಖಗಳು ಇಲ್ಲದೇ ಅಂದದ ಮನೆಗಳಿಗೊಂದು ಕಲಾಕೃತಿಯಂತಾಗುತ್ತದೆ.

ಈ ದೂರವಾಣಿಯನ್ನು ಬೀಟೆ ಮತ್ತು ತೇಗದ ಮರದಿಂದ ತಯಾರಿಸಲಾಗಿದ್ದು ಈ ಮಾದರಿಯನ್ನು ಪೇಟೆಂಟ್ ಮಾಡಿಸುವ ಪ್ರಯತ್ನ ಸಾಗಿದೆ. ತಿಂಗಳಿಗೆ ಒಂದೂವರೆ ಸಾವಿರೆದಷ್ಟು ಸೆಟ್‌ಗಳನ್ನು ನಿರ್ಮಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಎರಡು ಮಾದರಿಯಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಮುಂದೆ ಇದೇ ರೀತಿಯಾಗಿ ಕಾರ್ಡ್‌ಲೆಸ್ ಮತ್ತು ಮೊಬೈಲ್ ಫೋನ್‌ಗಳನ್ನು ಸಹ ತಯಾರಿಸುವ ಯೋಜನೆ ಹೊಂದಲಾಗಿದೆ. ಎಂದು ತಯಾರಕರು ತಿಳಿಸುತ್ತಾರೆ.
******

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...