ರೋಗಣ್ಣ

ಆಗಾಗ ಬರ್ತೀರು ರೋಗಣ್ಣಾ
ನಿಜವಾದ ಗುರುವೆ ನೀನಾಗಣ್ಣಾ

ಜೀವದಾಗ ಭಯವನ್ನು ಹುಟ್ಸೀ
ಮನಸ್ಸನ್ನು ದೇವ್ರಕಡೆ ಮುಟ್ಸೀ

ಮೈಯನ್ನು ಮೆತ್ತಗೆ ಮಾಡ್ತಾ
ಮತಿಯನ್ನ ಜೊತೆಯಲ್ಲಿ ಕಾಡ್ತಾ

ಹಮ್ಮನ್ನ ಬಿಮ್ಮನ್ನ ಕಳದೂ
ಮನಸ್ಸಾಗೆ ಜೀವಸೂತ್ರ ಹೊಳದು

ಮುಂದೋಡೋ ವೇಗವ ಕೆಡಿಸಿ
ಕುಳ್ಡಾದ ಕಣ್ಣುಗಳ ಬಿಡಿಸಿ

ಆಗಾಗ ಕರಿಯಣ್ಣ ಮುಂದೆ
ಕರ್ರಗೆ ನಿತ್ಕೊಂಡ ಅಂದ್ರೆ

ಪಾಪಗಳ ಸಾಲಕ್ಕೆ ಬಡ್ಡಿ
ಕೇಳ್ತಾನೆ ಪ್ರಾಣಾನೇ ಒಡ್ಡಿ

ಸಂಕ್ಟ ಬಂದ್ರೆ ವೆಂಕ್ಟ್ರಮಣ ನಿಜವೇ
ಇಲ್ಲಿದ್ರೆ ಮನುಷ್ಯಂದೆ ಮಜವೆ
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದ್ವೈತ ಮತ್ತು ಶಂಕರ
Next post ಮರಣವೇ ಮಾನವಮಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys