ಅರವಿಂದ

ಅರವಿಂದ ಅರವಿಂದ ನಂದನದ ಕಂದ
ಎಲ್ಲರೆದೆ ಬೆಳಗಿಸುವ ಹೃದಯಾರವಿಂದ

ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ
ಯೌವನವು ಬೆಳಗಿದ್ದು ಭಾರತಕೆ ಮರಳಿ

ಚಿಕ್ಕಂದಿನಿಂದಲೇ ಮೇಧಾವಿತನವು
ಅಚ್ಚರಿಯ ಮೂಡಿಸಿತು ಅಂತಃಚೇತನವು

ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ
ಎರಡು ಸಂಸ್ಕೃತಿಗಳನು ಉಂಡಿತೀ ಜ್ಯೋತಿ

ಕೆಸರಿನಲ್ಲಿದ್ದರೂ ಕಮಲ ಕಮಲವೇ ಹೌದು
ಲಂಡನ್ನಿನಲ್ಲಿಯೇ ತಾಯ್ನಾಡ ಓದು

ಎನಿತೊ ಭಾಷಗಳನ್ನು ಕರಗತವ ಗೈದು
ಸಂಸ್ಕೃತದ ತಿರುಳೆಲ್ಲ ಮೈಗೊಂಡ ಸಾಥು

ಸ್ಥಾತಂತ್ರ್ಯ ಸಂಗ್ರಾಮ ಸೆರೆಮನೆಗೆ ಕಳಿಸಿತ್ತು
ಆತ್ಮಶಕ್ತಿಯ ಪಡೆಯೆ ಗರಡಿ ಮನೆಯಾಯ್ತು

ನಲವತ್ತು ವರ್ಷಗಳ ಏಕಾಂತ ತಪಿಸಿ
ಪೂರ್ಣಯೋಗವ ಕಂಡನಾ ಗುರುಮಹರ್ಷಿ

ದೇಶಸೇವೆಯ ದೀಕ್ಷೆ ತೊಟ್ಟು ಸ್ಥಾತಂತ್ರ್ಯಕ್ಕೆ
ದುಡಿಯುತ್ತ ದಿವ್ಯಾತ್ಮ ಒಳ್ಳೆ ಹಣ್ಣಾಯ್ತು

ಕೊನೆಗೆ ಪಾಂಡೀಚೆರಿಯು ಆತ್ಮಸಂಧಾನಕ್ಕೆ
ಎಲೆಮನೆಯ ಶಾಂತಿಯ ಪುಣ್ಯನೆಲೆಯಾಯ್ತು

ಅನ್ನಮಯ ಪ್ರಾಣಮಯ ಮನೋಮಯ ದಾಟಿ
ವಿಜ್ಜಾನ ಮಯದಿಂದ ಆನಂದ ಗುರಿಗೆ

ಮಾನವನು ದೇವಮಾನವನಾಗುವ ವಿಕಾಸ
ಪ್ರೇಮ ಶಕ್ತಿ ಜ್ಞಾನ ಬಾಳ ಮುಪ್ಪರಿಗೆ

ಎಂಬ ತತ್ವವ ಸಾರಿ ಆಧ್ಯಾತ್ಮ ಸಿರಿಯ
ಜಗಕೆಲ್ಲ ಬೀರಿದರು, ಭಾರತವ ಬೆಳಗಿ

ಆರೊವಿಲ್ಲಾಗಿರುವ ವಿಶ್ವಚೇತನ ಕೇಂದ್ರ
ಮಾನವರ ನಡೆಸುತಿದೆ ಹೊಸ ತೂರ್ಯ ಮೊಳಗಿ
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾಮಿ ವಿವೇಕಾನಂದ-ವಿಶ್ವಸನ್ಯಾಸಿ’
Next post ಉಣಿಸು-ತಿನಿಸು

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…