Home / ಕವನ / ಕವಿತೆ / ಅರವಿಂದ

ಅರವಿಂದ

ಅರವಿಂದ ಅರವಿಂದ ನಂದನದ ಕಂದ
ಎಲ್ಲರೆದೆ ಬೆಳಗಿಸುವ ಹೃದಯಾರವಿಂದ

ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ
ಯೌವನವು ಬೆಳಗಿದ್ದು ಭಾರತಕೆ ಮರಳಿ

ಚಿಕ್ಕಂದಿನಿಂದಲೇ ಮೇಧಾವಿತನವು
ಅಚ್ಚರಿಯ ಮೂಡಿಸಿತು ಅಂತಃಚೇತನವು

ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ
ಎರಡು ಸಂಸ್ಕೃತಿಗಳನು ಉಂಡಿತೀ ಜ್ಯೋತಿ

ಕೆಸರಿನಲ್ಲಿದ್ದರೂ ಕಮಲ ಕಮಲವೇ ಹೌದು
ಲಂಡನ್ನಿನಲ್ಲಿಯೇ ತಾಯ್ನಾಡ ಓದು

ಎನಿತೊ ಭಾಷಗಳನ್ನು ಕರಗತವ ಗೈದು
ಸಂಸ್ಕೃತದ ತಿರುಳೆಲ್ಲ ಮೈಗೊಂಡ ಸಾಥು

ಸ್ಥಾತಂತ್ರ್ಯ ಸಂಗ್ರಾಮ ಸೆರೆಮನೆಗೆ ಕಳಿಸಿತ್ತು
ಆತ್ಮಶಕ್ತಿಯ ಪಡೆಯೆ ಗರಡಿ ಮನೆಯಾಯ್ತು

ನಲವತ್ತು ವರ್ಷಗಳ ಏಕಾಂತ ತಪಿಸಿ
ಪೂರ್ಣಯೋಗವ ಕಂಡನಾ ಗುರುಮಹರ್ಷಿ

ದೇಶಸೇವೆಯ ದೀಕ್ಷೆ ತೊಟ್ಟು ಸ್ಥಾತಂತ್ರ್ಯಕ್ಕೆ
ದುಡಿಯುತ್ತ ದಿವ್ಯಾತ್ಮ ಒಳ್ಳೆ ಹಣ್ಣಾಯ್ತು

ಕೊನೆಗೆ ಪಾಂಡೀಚೆರಿಯು ಆತ್ಮಸಂಧಾನಕ್ಕೆ
ಎಲೆಮನೆಯ ಶಾಂತಿಯ ಪುಣ್ಯನೆಲೆಯಾಯ್ತು

ಅನ್ನಮಯ ಪ್ರಾಣಮಯ ಮನೋಮಯ ದಾಟಿ
ವಿಜ್ಜಾನ ಮಯದಿಂದ ಆನಂದ ಗುರಿಗೆ

ಮಾನವನು ದೇವಮಾನವನಾಗುವ ವಿಕಾಸ
ಪ್ರೇಮ ಶಕ್ತಿ ಜ್ಞಾನ ಬಾಳ ಮುಪ್ಪರಿಗೆ

ಎಂಬ ತತ್ವವ ಸಾರಿ ಆಧ್ಯಾತ್ಮ ಸಿರಿಯ
ಜಗಕೆಲ್ಲ ಬೀರಿದರು, ಭಾರತವ ಬೆಳಗಿ

ಆರೊವಿಲ್ಲಾಗಿರುವ ವಿಶ್ವಚೇತನ ಕೇಂದ್ರ
ಮಾನವರ ನಡೆಸುತಿದೆ ಹೊಸ ತೂರ್ಯ ಮೊಳಗಿ
***

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...