Home / ಕವನ / ಕವಿತೆ / ಅರವಿಂದ

ಅರವಿಂದ

ಅರವಿಂದ ಅರವಿಂದ ನಂದನದ ಕಂದ
ಎಲ್ಲರೆದೆ ಬೆಳಗಿಸುವ ಹೃದಯಾರವಿಂದ

ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ
ಯೌವನವು ಬೆಳಗಿದ್ದು ಭಾರತಕೆ ಮರಳಿ

ಚಿಕ್ಕಂದಿನಿಂದಲೇ ಮೇಧಾವಿತನವು
ಅಚ್ಚರಿಯ ಮೂಡಿಸಿತು ಅಂತಃಚೇತನವು

ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ
ಎರಡು ಸಂಸ್ಕೃತಿಗಳನು ಉಂಡಿತೀ ಜ್ಯೋತಿ

ಕೆಸರಿನಲ್ಲಿದ್ದರೂ ಕಮಲ ಕಮಲವೇ ಹೌದು
ಲಂಡನ್ನಿನಲ್ಲಿಯೇ ತಾಯ್ನಾಡ ಓದು

ಎನಿತೊ ಭಾಷಗಳನ್ನು ಕರಗತವ ಗೈದು
ಸಂಸ್ಕೃತದ ತಿರುಳೆಲ್ಲ ಮೈಗೊಂಡ ಸಾಥು

ಸ್ಥಾತಂತ್ರ್ಯ ಸಂಗ್ರಾಮ ಸೆರೆಮನೆಗೆ ಕಳಿಸಿತ್ತು
ಆತ್ಮಶಕ್ತಿಯ ಪಡೆಯೆ ಗರಡಿ ಮನೆಯಾಯ್ತು

ನಲವತ್ತು ವರ್ಷಗಳ ಏಕಾಂತ ತಪಿಸಿ
ಪೂರ್ಣಯೋಗವ ಕಂಡನಾ ಗುರುಮಹರ್ಷಿ

ದೇಶಸೇವೆಯ ದೀಕ್ಷೆ ತೊಟ್ಟು ಸ್ಥಾತಂತ್ರ್ಯಕ್ಕೆ
ದುಡಿಯುತ್ತ ದಿವ್ಯಾತ್ಮ ಒಳ್ಳೆ ಹಣ್ಣಾಯ್ತು

ಕೊನೆಗೆ ಪಾಂಡೀಚೆರಿಯು ಆತ್ಮಸಂಧಾನಕ್ಕೆ
ಎಲೆಮನೆಯ ಶಾಂತಿಯ ಪುಣ್ಯನೆಲೆಯಾಯ್ತು

ಅನ್ನಮಯ ಪ್ರಾಣಮಯ ಮನೋಮಯ ದಾಟಿ
ವಿಜ್ಜಾನ ಮಯದಿಂದ ಆನಂದ ಗುರಿಗೆ

ಮಾನವನು ದೇವಮಾನವನಾಗುವ ವಿಕಾಸ
ಪ್ರೇಮ ಶಕ್ತಿ ಜ್ಞಾನ ಬಾಳ ಮುಪ್ಪರಿಗೆ

ಎಂಬ ತತ್ವವ ಸಾರಿ ಆಧ್ಯಾತ್ಮ ಸಿರಿಯ
ಜಗಕೆಲ್ಲ ಬೀರಿದರು, ಭಾರತವ ಬೆಳಗಿ

ಆರೊವಿಲ್ಲಾಗಿರುವ ವಿಶ್ವಚೇತನ ಕೇಂದ್ರ
ಮಾನವರ ನಡೆಸುತಿದೆ ಹೊಸ ತೂರ್ಯ ಮೊಳಗಿ
***

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...