Home / ಕಥೆ / ಕಿರು ಕಥೆ / ಪರೀಕ್ಷೆ

ಪರೀಕ್ಷೆ

ಒಮ್ಮೆ ಗುರುಗಳು ತಮ್ಮ ಇಬ್ಬರು ಆಪ್ತ ಶಿಷ್ಯರನ್ನು ಕರೆದು ಒಂದು ಪರೀಕ್ಷೆಗೆ ಒಳಪಡಿಸಿದರು.

“ಶಿಷ್ಯಂದಿರೆ! ನೀವು ಝೆನ್‌ನನ್ನು ಬಹಳದಿನದಿಂದಲೂ ಕಲಿಯುತ್ತಿದ್ದೀರಿ. ನಿಮಗೆ ಈ ಪರೀಕ್ಷೆ ಎದುರಾಗಿದೆ. ಝೆನ್‌ನಲ್ಲಿ ನಿಮ್ಮ ಹೃದಯ ಎಷ್ಟು ಒಂದಾಗಿದೆ ಎಂದು ತಿಳಿಯಬೇಕು. ಈಗ ಒಂದು ಪ್ರಶ್ನೆ ನಿಮ್ಮ ಮುಂದಿಡುತ್ತೇನೆ. ನೀವು ಕೆಲವು ದಿನಗಳಾದ ನಂತರ ಬಂದು ನನಗೆ ಉತ್ತರಕೊಡಬೇಕು” ಅಂದರು.

ಶಿಷ್ಯಂದಿರು “ಹಾಗೇ ಆಗಲಿ ಗುರುಗಳೇ” ಎಂದು ಒಪ್ಪಿಕೊಂಡರು.

“ನೀವು ಎರಡು ಕೈ ಚಪ್ಪಾಳೆ ಕೇಳಿದ್ದೀರಿ ಅಲ್ಲವೇ?”

“ಹೌದು ಗುರುಗಳೇ?”

“ಈಗ ಅದಕ್ಕೆ ವಿರುದ್ಧವಾಗಿ ಎರಡೂ ಕೈ ಸೇರದ ಚಪ್ಪಾಳೆ ಬಗ್ಗೆ ನೀವು ತಿಳಿದು ಬರಬೇಕು” ಎಂದರು ಗುರುಗಳು.

“ಎರಡು ಕೈ ಸೇರದಿರುವಾಗ ಚಪ್ಪಾಳೆ ಎಲ್ಲಿ ಬಂತು? ಗುರುಗಳೇ?”- ಎಂದರು ಶಿಷ್ಯಂದಿರು.

“ನೀವು ತಿಳಿಯಬೇಕಾದದು ಅದೇ. ನೀವು ಕಾರ್‍ಯೋನ್ಮುಖರಾಗಿ ಶೋಧನೆಗೆ ಅಗಮ್ಯ ಯಾವುದೂ ಇಲ್ಲ” ಎಂದರು ಗುರುಗಳು.

ಇಬ್ಬರು ಶಿಷ್ಯರು ದೂರದ ಕಾಡಿಗೆ ಹೋದರು. ಅಲ್ಲಿ ಬೆಟ್ಟಗುಡ್ಡದ ಎದರು ನಿಂತರು, ಹರಿಯುವನದಿ, ಜಲಪಾತಗಳ ಸದ್ದು ಕೇಳಿಸಿಕೊಂಡರು. ವೃಕ್ಷದ ಕೆಳಗೆ ನಿಂತರು. ಎಲೆಗಳ ಮರ್‍ಮರ ಕೇಳಿಸಿಕೊಂಡರು. ಯಾವ ಸುಳಹು ಮೂಡಲಿಲ್ಲ. ಮತ್ತೆ ಧ್ಯಾನ ಭಂಗಿಯಲ್ಲಿ ಕುಳಿತು ಅಂತರ ಮುಖಿಗಳಾದರು. ಎದೆಯ ಢಬಡಬನಾದ ಕೇಳತೊಡಗಿತು. ಆತ್ಮ ನಿರತರಾಗಿ ಕೈಸೇರದ ಚಪ್ಪಾಳೆಯ ನಾದ ಕೇಳುತ್ತಾ ತನ್ಮಯರಾದರು. ಪ್ರಕೃತಿಯಲ್ಲಿ ಎಲ್ಲೆಲ್ಲೂ ಕೇಳುವ ಸಪ್ಪಳ ನದಿಯಲ್ಲಿ, ಝರಿಯಲ್ಲಿ, ಜಲಪಾತದಲ್ಲಿ, ಗಿಡಮರದಲ್ಲಿ ಮಹಾವೃಕ್ಷಗಳಲ್ಲಿ, ಕೈ ಇರದ ಚಪ್ಪಾಳೆಯು ಮಹಾ ಮೌನದ ಆಂತರ್ಯದಲ್ಲಿ ಸ್ಪುಟಗೊಂಡಿತು.

ಇಬ್ಬರೂ, ಗುರುಗಳಲ್ಲಿಗೆ ಬಂದು ತನಗಾದ ಒಂದೇ ಅನುಭವವನ್ನು ತಿಳಿಸಿದರು. ಮಹಾ ಮೌನದಲ್ಲಿ ನೀವು ಒಂದು ಕೈ ಚಪ್ಪಾಳೆಯ ಕೇಳಲು ಸಾಧ್ಯವಿರುವಾಗ, ಅದೇ ಮೌನದಲ್ಲಿ ಎರಡು ಕೈ ಇಲ್ಲದ ಚಪ್ಪಾಳೆಯನ್ನು ಕೇಳಿದರೆ ಅಚ್ಚರಿ ಏನು? ಝೆನ್ ಅಧ್ಯಯನ ನಿಮಗೆ ಇತ್ತ ವರವಲ್ಲವೇ ಇದು” ಎಂದರು ಗುರುಗಳು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...