Home / ಕವನ / ಕವಿತೆ / ಪದವೊಂದ ಹಾಡ್ತೀನಿ

ಪದವೊಂದ ಹಾಡ್ತೀನಿ

ಪದವೊಂದು ಹಾಡ್ತೀನಿ
ಎದೆಯ ಕದ ತೆರೆದು ಕೇಳು
ನೋವುಂಡ ಸ್ವರ ತೇಲಿ ಬಂದಾವ,
ನೀಡಲಾರವು ಮುದವ
ತುಟಿತನ ಬಂದು ಹರಳುಗಟ್ಟಾವ,
ಹಗುರವಾಗಲಿ ಎದೆ ಅಂತ
ಪದವೊಂದು ಹಾಡ್ತೀನಿ…

ನಡೆಯುತ್ತ ನಡೆಯುತ್ತ
ದಾರಿ ಸವೆಯಲಿ ಎಂದು
ಮುಳ್ಳು ಬೇಲಿಯ ಹಾದಿ,
ಕಲ್ಲುಗಳು ಬಹಳ
ಅಂಗಾಲ ಗಾಯಕ್ಕೆ
ಬಾಮು ಸವರಲು ನಾನು
ಪದವೊಂದ ಹಾಡ್ತೀನಿ…

ಕವಿದ ಕತ್ತಲೆಯೊಳಗ ಬೆಳಕು
ಮೂಡೀತೆಂಬ ಹುಚ್ಚು ಭರವಸೆಯಲ್ಲಿ
ಕಿವಿಯಲ್ಲಿ ನಿನ್ನ ಹೆಜ್ಜೆಯ
ತಾಳ ತಪ್ಪದೇ ಇರಲೆಂದು…
ತಿರುಗಿ ನೋಡದೆ ತಿರುವಿನೊಳಗ
ನೀ ಜಾರಿ ಹೋಗುವ ಮುನ್ನ
ಪದವೊಂದ ಹಾಡ್ತೀನಿ…

ಗಾಳಿಯಲಿ ತೇಲಿದ ಪದಗಳ
ಅಲಿಗಳ ಮ್ಯಾಲೆ ಸವಾರಿ ಮಾಡಿ
ಬದಲಾದಾಗ ನಮ್ಮ ದಿಕ್ಕು
ನಾನೊಂದು ಬದಿ ನೀನೊಂದು ಬದಿ
ನಡುವ ಹರದೈತಿ ಸಮಯದಾ ನದಿ
ಆದರೂ ತಾಳದೆ ಎದೆಗುದಿ
ನಾನು ಪದವೊಂದ…

ಅರಿವು ಮರೆವಿನ ನಡುವಣ
ಗೆರೆಯು ತಾ ಬಲು ತೆಳುವು
ಧಾಟಿ ಮರೆಯುವ ಮುನ್ನ
ಎಲ್ಲರೂ ಬಲ್ಲರು
ಕಲ್ಲು ಕರಗದು ಎಂದು
ಹುಲ್ಲು ಚಿಗುರೀತೆಂದು
ಹುಂಬ ಭರವಸೆಯಿಂದ
ಪದವೊಂದು…

ನಾನು ನಾನಾಗಿರದೆ
ನಾನೆ ಪದವಾಗುವ ತನಕ
ಬಾನ ಕಿರಣದ ತಂತಿಯ ಮೀಟಿ
ಭುವಿಯ ಮದ್ದಳೆಯ
ತಕಧಿಮಿಗೆ ಕುಣಿಯುತ್ತಾ
ನಿಮ್ಮ ಕರಣ ಸೇರುವ ತನಕ
ಪದವೊಂದ ಹಾಡ್ತೀನಿ,
ನಾನು ಪದವೊಂದ ಹಾಡ್ತೀನಿ…
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...