Home / ಬಾಲ ಚಿಲುಮೆ / ಕಥೆ / ಹುಲಿಯಾಗಿದ್ದ ಕತ್ತೆಯ ಕಥೆ

ಹುಲಿಯಾಗಿದ್ದ ಕತ್ತೆಯ ಕಥೆ

ಒಂದಾನೊಂದು ಊರಿನಲ್ಲಿ ಶುದ್ಧ ಪಟನೆಂಬ ಅಗಸನು ಇದ್ದನು. ಅವನಿಗೆ ಒಂದು ಕತ್ತೆಯಿತ್ತು. ಅದು ಹೊಟ್ಟೆಗಿಲ್ಲದೆ ಬಹಳ ಇಳಿದುಹೋಗಿ ನಿಶ್ಶಕ್ತಿಯಾಗಿತ್ತು. ಆ ಅಗಸನು ಒ೦ದು ದಿನ ಎಲ್ಲಿಯೋ ಹೋಗಿ ಬರುತ್ತಿದ್ದಾಗ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿಯೊಂದನ್ನು ಕಂಡನು. ಅಹಾ, ಇದರ ಚರ್ಮವನ್ನು “ತಗೆದು ಕೊಂಡು ಹೋಗಿ ನಮ್ಮ ಕತ್ತೆಗೆ ಹೊದಿಸಿ ಹೊಲಗಳಲ್ಲಿ ಬಿಟ್ಟು ಬಿಟ್ಟರೆ, ಕಾವಲುಗಾರರು ಹುಲಿಯೆಂದುಕೊಳ್ಳುವರು; ಇದನ್ನು ಯಾರೂ ಓಡಿಸುವುದಿಲ್ಲ. ಹಾಗೆ ಆದಕ್ಕೆ, ಕತ್ತೆಯು ಚೆನ್ನಾಗಿ ಮೇದು ಬಲವಾಗುವುದು” ಎಂದು ಯೋಚನೆ ಬಂತು. ಅವನು ಹಾಗೆಯೇ ಮಾಡಿದನು. ರಾತ್ರಿಯೆಲ್ಲವೂ ಕತ್ತೆಯು ಬೆಳೆದ ಹೊಲದಲ್ಲಿ ಮೇಯುವುದು.  ಬೆಳಗಾಗುವುದಕ್ಕೆ ಮುಂಚೆಯೇ ಅಗಸನು ಬಂದು ಅದನ್ನು ಹೊಡೆದುಕೊಂಡು ಹೋಗುವನು.
“ಹೀಗೆಯೇ ಕೆಲವು ಕಾಲ ನಡೆಯಲು ಕತ್ತೆಯು ಚೆನ್ನಾಯಿತು. ಅವನ್ನು ಹಿಡಿಯುವುದೇ ಕಷ್ಟವಾಯಿತು. ಹೀಗಿರಲು ಒಂದು ದಿನ ಹೊಲದಲ್ಲಿ ಮೇಯುತ್ತಿದ್ದ ಕತ್ತೆಯು ದೂರದಲ್ಲಿ ಎಲ್ಲಿಯೋ ಇನ್ನೊ೦ದು ಕತ್ತೆಯು ಕೂಗಿದುದನ್ನು ಕೇಳಿತು. ಅದು ಹೆಣ್ಣು ಕತ್ತೆಯೆಂದುಕೊಂಡು‌ ತಾನೂ ಕೂಗುವುದಕ್ಕೆ ಆರಂಭಿಸಿತು.
ಕೂಡಲೇ ಕಾವಲುಗಾರರು “ಎಲೆಲಾ ಇದು ಹುಲಿಯಲ್ಲ. ಹುಲಿಯ ಚರ್ಮ ಹೊದ್ದ ಕತ್ತೆ” ಎಂದು ತಿಳಿದುಕೊಂಡು ಬಂದು ಕಲ್ಲು ದೊಣ್ಣೆ ಮುಂತಾದವುಗಳಿಂದ ಹೊಡೆದು ಕೊಂದರು.
ಅದರಿಂದ ಹೇಳಿದೆನು. “ಕತ್ತೆಗಂದು ಕೂಗಿಕೊಂಡುದೆ ಮೃತ್ಯುವಾಯ್ತು ಎಂದು” ಎಂದು ಕಪಿಯು ಕಥೆಯನ್ನು ಮುಗಿಸುತ್ತಿದ್ದ ಹಾಗೆಯೇ ಒಂದು ಜಲಚರವು (ನೀರಿನ ಪ್ರಾಣಿ) ಬಂದು “ಎಲೆ ಮೊಸಳೆ ನಿನ್ನ ಹೆಂಡತಿಯು ನೀನು ಬರಲಿಲ್ಲವೆಂದು ಉಪವಾಸಮಾಡಿ ಬಿಟ್ಟಳು? ಎಂದು ಹೇಳಿತು. ಸಿಡಿಲಿನಂತಹ ಆ ಕೆಟ್ಟ ಸುದ್ದಿಯನ್ನು ಕೇಳಿ ಮೊಸಳೆಯು ಹೋ ಎಂದು ಅತ್ತಿತು.
“ಅಯ್ಯೋ, ನನ್ನ ಅದೃಷ್ಟಟವೇ! ಹೀಗಾಗಬಹುದೇ? ಕೇಳಿಲ್ಲವೆ?
ಎಲ್ಲಿ ತಾಯಿಯಿಲ್ಲವೋ; ನುಡಿವ ಮುದ್ದು
ಮಡದಿ ಎಲ್ಲಿಯಿಲ್ಲವೋ, ಆ ಮನೆಯು
ಮನೆಯೇ? ಅದರಲಿಲ್ಲದಿದ್ದರೇನಿದ್ದರೇನು? ॥
ಅಡವಿಗಾಮನೆಗುಂ ನೋಡಲಾಗಿ ಭೇದವೇನು? ॥೨೪॥
ಆದದ್ದು ಆಗಿ ಹೋಯಿತು. ನನ್ನ ಅಪರಾಧವನ್ನು ಮನ್ನಿಸು. ನನ್ನ ಹೆ೦ಡಿತಿಯೂ ಹೋದಳು. ಆ ದುಃಖವನ್ನು ನಾನು ತಡೆಯಲಾರೆ. ನಾನು ಬೆಂಕಿಗೆ ಬೀಳುವೆನು” ಎಂದು ಬಹಳವಾಗಿ ಅತ್ತು ಕೊಂಡಿತು.
ಅದನ್ನು ಕೇಳಿ ಕಪಿಯು ನಕ್ಕುಬಿಟ್ಟತು. “ಎಲೆಲಾ, ಈಗ ತಿಳಿಯಿತು. ನೀನು ಕೇವಲ ಸ್ತ್ರೀವಶನು ಮಾತ್ರವಲ್ಲ ಹೆಣ್ಣಿಗೆ ಸೋತವನೂ ಹೌದು. ಅದರಿಂದ ನೀನು ಅಪರಾಧಿಯಲ್ಲ ಎಂದು ನಂಬಿಕೆಯಾಯಿತು. ಮೂಢ, ಇದು ಆನಂದ ಪಡುವ ಸಮಯ. ಅಳುವ ಸಮಯವಲ್ಲ. ಅಂತಹ ಹೆಂಡತಿಯು ಸತ್ತರೆ ಹಬ್ಬ ಮಾಡಬೇಕು.” ಎಂದಿತು.
ಮೊಸಳೆಯು ಹೇಳಿತು. “ಮಿತ್ರ, ನೀನು ಹೇಳುವುದಿರಲಿ, ಈಗ ನೋಡು,” ನನಗೆ ಎರಡು ನಷ್ಟವಾಯಿತು. ಮೊದಲನೆಯದಾಗಿ ಮನೆಯು ಹಾಳಾಗಿ ಹೋಯಿತು. ಎರಡನೆಯದಾಗಿ ನಿನ್ನಂತಹ ಸ್ನೇಹಿತನ ಸ್ನೇಹವು ಹೋಯಿತು. ಇದಿಷ್ಟೂ ನನ್ನ ಹಣೆಯ ಬರೆಹ! ಕೇಳಿಲ್ಲವೆ?
ನನ್ನ ಜಾಣಿಗೆರಡುಪಾಲು ನಿನ್ನ ಜಾಣು ॥ 
ಗಂಡನಿಲ್ಲ ಮಿಂಡನಿಲ್ಲ ಆದೆ ಬೆತ್ತಲೆ ॥೨೫ ॥ 
ಕಪಿಯು “ಅದು ಹೇಗೆ?” ಎಂದು ಕೇಳಲು, ಮೊಸಳೆಯು ಹೇಳಿತು:-
*****
ಎರಡೂ ಇಲ್ಲವಾದ ಕಥೆ ಓದಿ
Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...