Home / ಕವನ / ಕವಿತೆ / ಇರವು ಮತ್ತು ಧರ್ಮಗಳ ಹಾಡು

ಇರವು ಮತ್ತು ಧರ್ಮಗಳ ಹಾಡು

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು
ಇದರ ತೆರವರಿವರಾರವನೊಬ್ಬ ಹೊರತು
ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ
ಜೀವಲೀಲೆಯ ಮರ್ಮವೊರೆವರಾರರಿತು?
ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ
ಒಂದಾತ್ಮ ತಾನ್ನೆನ್ನುವನುಭಾವಹೊಂದಿ
ಪಂಚಭೂತಗಳೊಡನೆ ಅದು-ತಾನು ಎಂದೆನುತ
ಬೇಹರಿಸಿ ಬೇಹಾರ ತೀರೆ ತಾ ನಂದಿ;
ತನುತನುವೊಳಷ್ಟಷ್ಟು ದೇಶವನು ತಾ ತುಂಬಿ
ಕರ್ಮಗಳಿನಷ್ಟಷ್ಟು ಕಾಲವನು ತುಂಬಿ
ಮಮತೆಯೊಳಗಷ್ಟಷ್ಟು ವಿಶ್ವಾತ್ಮವನು ತುಂಬಿ
ಅಹಮೆಂದು ನೊಂದು ನಲಿದಾನಂದ ತುಂಬಿ
ಸೃಷ್ಟಿ ಮೊದಲಿಂದುವರೆಗಾಗಿಹೋದವರೆಷ್ಟು!
ಆದವರು ಹೋದವರು ಆಗುವವರವರೇ.
ಅರ್ಥಕಾಮಗಳಿಡುವ ರತಿವಿರತಿ ಛಂದಕ್ಕೆ
ಭೂತರಂಗದಿ ಜೀವ ನರ್ತಿಸುವುದರರೇ!
(೨)
ಈ ಮಹಾನಾಟ್ಯವನು ಚೋದಿಸುವ ಚಾಲಕನು
ಈ ಚಿತ್ರಗತಿಗಾನವಿನ್ಯಾಸಿ ಯಾರು?
ಇಲ್ಲಿ ಕೊಂಕಲ್ಲಿ ಋಜು ಇಲ್ಲಿ ಕಟುವಲ್ಲಿ ಮೃದು
ಅಂತು ರಸ ಕೊನೆಗಮೃತ ವಿಂತೆಸೆಪನಾರು?
ಧರ್ಮವದು ಜೀವನದ ಮರ್ಮವದು ಚೇತನರ
ಸಮುದಾಯಮಂಗಳಕೆ ಅದರಂಕೆ ರಕ್ಷೆ
ದೇಹಾಂಗದರಿವೆಲ್ಲ ಜೀವಾಣುಗಿರುವಂತೆ
ಅರಿವರಿವೊಳಿಹುದಿದರ ಹೃನ್ನಿಷ್ಠ ನಕ್ಷೆ.
ಈ ನಕ್ಷೆಯಂತಾಗೆ ಅರ್ಥಕಾಮವಿಕಾಸ
ಎಂಥ ಶುಭದುದಯವಹುದೆಲ್ಲ ಜೀವರೊಳು!
ಧರ್ಮಾರ್ಥ ಕಾಮಗಳ ಈ ಪರಸ್ಪರವಶತೆ
ದುಸ್ಸಾಧ್ಯವೀಜಗದೊಳದಕೆ ಭವದಳಲು.
ಒಂದುಸಿರು ಹಲವೊಡಲು ಒಂದರಿವು ಹಲವು ಮನ
ಒಂದೆ ಆನಂದಕ್ಕೆ ಹಲಹಲವು ಹೃದಯ
ಇಲ್ಲಳಿಯಲಲ್ಲುಳಿದು ಇಲ್ಲಿ ಮುಳುಗಲ್ಲೆದ್ದು
ಅರ್ಥಕಾಮಗಳಂಕೆಗಿಡೆ ಧರ್ಮದುದಯ.
ಹಲವರಿದ ಧಿಕ್ಕರಿಸೆ ಕೆಲವರೊಳಗುಜ್ವಲಿಸಿ
ಭೋಗಿಯೋಡಿಸೆ ನಿಷ್ಠ ಯತಿಯನಾಶ್ರಯಿಸಿ
ಹಲರತೀಂದ್ರಿಯರಾಗೆ ಕೆಲಜಿತೇಂದ್ರಿಯರಲ್ಲಿ
ತೂಕ ತಪ್ಪಿದ ಜಗವ ಸಮತೂಕ ನಿಲಿಸಿ
ಅರಿವೊಳೆಲ್ಲೋ ನಿಂತು ಶಿವವ ಸಾಧಿಸುತಿಹುದು
ಲೇಸುಕೇಡಳಿವುಳಿವ ತಕ್ಕಂತೆ ಬಳಸಿ
ಆ ಧರ್ಮಭೃದ್ವರರ ನೆನಹನರಿವೊಳು ಧರಿಸಿ
ಶಂಕೆಯೆಲ್ಲವಕಳೆವ ಶಿವಕೆ ಬಗೆ ಬೆಳಸಿ.
*****
Tagged:

Leave a Reply

Your email address will not be published. Required fields are marked *

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...