Home / ಕವನ / ಕವಿತೆ / ಮಳಿ ಬಂತು

ಮಳಿ ಬಂತು

ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ಗುಡು ಗುಡುಡು ಎಂದು ಗುಡಗ್ತದ ಕಾಡು ಕರಿಮುಗಿಲು-
ಕೇಳ್ದವರ ಎದೆಗೆ ಭುಗಿಲು
ಗಡಗಡಡ ಎ೦ದು ನಡಗ್ತದ ನಿಂತ ನೆಲದೊಡಲು-
ನೆರೆದವರಿಗೆಲ್ಲ ದಿಗಿಲು
ಇದನೋಡಿ ರವಿಯು ತಾನೋಡಿ ಹೋದನಪ ಚದರಿ
ಬರಲಿಲ್ಲ ಚಿಕ್ಕಿಗಳು ಬೆದರಿ
ಮಳಿಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ

ಬಾನಿ೦ದ ಬಿದ್ದು ಮೇಲೆದ್ದು ಮಣ್ಣಿನೊಡನಿದ್ದು-
ಹೊರಟೀತು ನೀರು ನೆಲದುದ್ದು
ಹನಿ ಹನಿ ಕೂಡಿ ಹಳ್ಳಾಗಿ ತುಂಬಿ ಹರಿದಾವ ಹೊಳೆಯ ಕಡಿಗಾಗಿ-
ಅಲ್ಲಲ್ಲಿ ನಿಂತು ಮಡುವಾಗಿ
ಹೊಲ ತುಂಬಿ ತುಳಕಿ ಕೆರೆನೀರ ಕುಲುಕಿ ನದಿನೀರನೆಲ್ಲ ಕಲಕಿ-
ಹಾಕೀತು ನೀರು ತಳಕಿ
ಗಿಡಮರ ಬಳ್ಳಿ ಎಲಿಸಾಲು ಕಳ್ಳಿ ನಿಂತಾವ ಜಳಕ ಮಾಡಿ-
ತಣಿದಾವು ನೀರ ನೋಡಿ
ಮಳಿ ಬಂತು ನೋಡು ಮೂಡಲಿನ್ಯಾಗ-
ಮರಡೀಯ ತಲಿಯ ಮ್ಯಾಗ
ದಿಕ್ಕೆಟ್ಟು ಹಾರಿ ಸಿಕ್ಕಲ್ಲೆ ಸೇರಿ ಹುದುಗ್ಯಾವ ಹಕ್ಕಿ ಪಕ್ಕಿ-
ಆಗ್ಯಾವ ಕಕ್ಕ ಬಿಕ್ಕಿ
ಗಿಡದಿಂದ ಗಿಡಕೆ ಹಾರಾಡಿ ನಡಕ ಬದ್ದಾವ ಕೋತಿ ಜೋತು-
ಮಳೆಗೂಡ ಹೆಣಗಿ ಸೋತು
ದನಕರುಗಳೆಲ್ಲ ನಿಂತಾವ ಹುಲ್ಲ ತಿನಲಾರ್ದ ಅಡವಿಯಲ್ಲಿ-
ಬೆಪ್ಪಾಗಿ ಅಲ್ಲಿ ಇಲ್ಲಿ
ದನಕಾವ ಹುಡುಗಹುಡುಗಿಯರು ಮನೆಗೆ ಬಂದಾರ ಓಡಿತೊಯ್ದು-
ಬಿಟಗೊಟ್ಟ ಹುಲ್ಲ ಕೊಯ್ದು
ಮಳಿ ಬಂದಿ ನೋಡು – ಮೂಡಿಲಿನ್ಯಾಗ
ಮರಡೀಯ ತಲಿಯ ಮ್ಯಾಗ

ಬೇಸಿಗೆಯ ಬಿಸಿಲ ಬೇಗೆಯಲಿ ಬಳಲಿ ಬೆಂದಾಳ ಭೂಮಿತಾಯಿ-
ನೀರಡಿಸಿ ಬಿಟ್ಟು ಬಾಯಿ
ಗುಡ್ಡಕ್ಕೆ ತಾಗಿ ಹತ್ತಿದ್ದ ಬ್ಯಾಗಿ ಸುಟ್ಟಂಥ ಮೈಯ ಚಾಚಿ
ಹಲುಬ್ಯಾಳ ಆಂಗಲಾಚಿ
ಬಾಯಾರಿ ಬಾಯ್ಬರದೆ ಬಿದ್ದಲ್ಲೆ ಇದ್ದಽರು ಆಸರಕೆ ದೈವ ಬ೦ತು-
ಮರೆಯಲ್ಲಿ ಇತ್ತು ನಿಂತು
ಆಕಾಶ ತಂದೆ ಎದೆ ಕರಗಿ ಬ೦ದೆ ಮಳೆಯಾಗಿ ನೆಲಕೆ ನಿಂದೆ
ಬರುವಾಗ ಅಮೃತ ತಂದೆ
ಮಳೆ ಬಂತು ನೋಡು ಮೂಡಲಿನ್ಯಾಗ
ಮರಡೀಯ ತಲಿಯಮ್ಯಾಗ
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...