Home / ಕವನ / ಕವಿತೆ / ದೀಪಾವಳಿ

ದೀಪಾವಳಿ

ಈಗ-
ಎಲ್ಲೆಲ್ಲೂ ದೀಪಾವಳಿ
ಭೂಮಿಯ ಮೇಲೆ ಬಣ್ಣ ಬಣ್ಣದ
ನಕ್ಷತ್ರಗಳ ಜಾತ್ರೆ
ಹಸಿರು ಕೆಂಪು ನೀಲಿ ಹಳದಿ ಗುಲಾಬಿ
ದೀಪ ದೀಪಗಳ ಸ್ಪರ್ಧೆ
ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು
ಮುಚ್ಚಿ ತೆರೆದು ಕಚಗುಳಿಯಾಟಕ್ಕೆ
ಓಡಾಡುವ ಸಂಭ್ರಮ.

ಹರೆಹೊತ್ತ ದೀಪ ಸಾಲಿನ ದೀಪಾಲಿಯರ
ತುಂಬಿದ ಸಿಹಿತಟ್ಟೆ ಕಣ್ಣಂಚಿನ ನಗು
ಮನದಾಳದ ತುಂಬೆಲ್ಲ ಕನಸುಗಳು
ಕಟ್ಟಿಕೊಳ್ಳುತ ಗೊಳ್ಳನೆ ನಕ್ಕು
ಕುಣಿದು ಕುಪ್ಪಳಿಸುವ ತರಾತುರಿ.

ಪಟಾಕಿ ಹೊಡೆದು ಗುಲ್ಲೆಬ್ಬಿಸುವ
ಚಿಗುರು ಮೀಸೆ ಹುಡುಗರ ತುಂಟಾಟ
ತಾವೇ ಆಕಾಶಕೆ ಚಿಮ್ಮುತ್ತಿರುವೆವೆನ್ನುವ
ಕೇಕೆ ಹಾರಾಟ ಶೌರ್ಯದ ಪ್ರದರ್ಶನ
ಹುಡುಗಿಯರ ಮುಂದೆ
ಕಣ್ಣು ಪಟಾಕಿ ಹೊಡೆಯುವ ಸಂಭ್ರಮ
ಯೌವನದ ದೀಪೋನ್ಮಾದ.

ದೀಪಾವಳಿ ನೆನಪಿನ ದಾಂಗುಡಿ ಹಿರಿಯರಿಗೆ
ಎಣ್ಣೆಸ್ನಾನ ಹೊಸಬಟ್ಟೆ ಉಡುಗೊರೆ
ಕರಳುಬಳ್ಳಿಗಳ ತೊನೆದಾಟ
ಚೆಷ್ಮದ ಬೆಳ್ಳಿ ಚೌಕಟ್ಟಿನೊಳಗೆ
ಏನೆಲ್ಲ ಅನುಭವಗಳ ಪ್ರತಿಫಲನ
ಚಳಿಗಾಲದ ಹೆಜ್ಜೆಗೆ ಬೆಚ್ಚಗಿನ ಅನುಭವ
ಬೊಚ್ಚುಬಾಯಿ ಮುಖದಗಲ
ಬಿಚ್ಚಿಕೊಳ್ಳುತ ಮೊಮ್ಮಕ್ಕಳ ಆಲಿಂಗನಕೆ
ಹೃದಯ ಬಿರಿದ ಆರ್ದ್ರತೆ
ಕಣ್ಣಿನೊಡ್ಡು ತುಂಬಿಹರಿವ ಮನೋಲ್ಲಾಸ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...