ದೀಪಾವಳಿ

ಈಗ-
ಎಲ್ಲೆಲ್ಲೂ ದೀಪಾವಳಿ
ಭೂಮಿಯ ಮೇಲೆ ಬಣ್ಣ ಬಣ್ಣದ
ನಕ್ಷತ್ರಗಳ ಜಾತ್ರೆ
ಹಸಿರು ಕೆಂಪು ನೀಲಿ ಹಳದಿ ಗುಲಾಬಿ
ದೀಪ ದೀಪಗಳ ಸ್ಪರ್ಧೆ
ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು
ಮುಚ್ಚಿ ತೆರೆದು ಕಚಗುಳಿಯಾಟಕ್ಕೆ
ಓಡಾಡುವ ಸಂಭ್ರಮ.

ಹರೆಹೊತ್ತ ದೀಪ ಸಾಲಿನ ದೀಪಾಲಿಯರ
ತುಂಬಿದ ಸಿಹಿತಟ್ಟೆ ಕಣ್ಣಂಚಿನ ನಗು
ಮನದಾಳದ ತುಂಬೆಲ್ಲ ಕನಸುಗಳು
ಕಟ್ಟಿಕೊಳ್ಳುತ ಗೊಳ್ಳನೆ ನಕ್ಕು
ಕುಣಿದು ಕುಪ್ಪಳಿಸುವ ತರಾತುರಿ.

ಪಟಾಕಿ ಹೊಡೆದು ಗುಲ್ಲೆಬ್ಬಿಸುವ
ಚಿಗುರು ಮೀಸೆ ಹುಡುಗರ ತುಂಟಾಟ
ತಾವೇ ಆಕಾಶಕೆ ಚಿಮ್ಮುತ್ತಿರುವೆವೆನ್ನುವ
ಕೇಕೆ ಹಾರಾಟ ಶೌರ್ಯದ ಪ್ರದರ್ಶನ
ಹುಡುಗಿಯರ ಮುಂದೆ
ಕಣ್ಣು ಪಟಾಕಿ ಹೊಡೆಯುವ ಸಂಭ್ರಮ
ಯೌವನದ ದೀಪೋನ್ಮಾದ.

ದೀಪಾವಳಿ ನೆನಪಿನ ದಾಂಗುಡಿ ಹಿರಿಯರಿಗೆ
ಎಣ್ಣೆಸ್ನಾನ ಹೊಸಬಟ್ಟೆ ಉಡುಗೊರೆ
ಕರಳುಬಳ್ಳಿಗಳ ತೊನೆದಾಟ
ಚೆಷ್ಮದ ಬೆಳ್ಳಿ ಚೌಕಟ್ಟಿನೊಳಗೆ
ಏನೆಲ್ಲ ಅನುಭವಗಳ ಪ್ರತಿಫಲನ
ಚಳಿಗಾಲದ ಹೆಜ್ಜೆಗೆ ಬೆಚ್ಚಗಿನ ಅನುಭವ
ಬೊಚ್ಚುಬಾಯಿ ಮುಖದಗಲ
ಬಿಚ್ಚಿಕೊಳ್ಳುತ ಮೊಮ್ಮಕ್ಕಳ ಆಲಿಂಗನಕೆ
ಹೃದಯ ಬಿರಿದ ಆರ್ದ್ರತೆ
ಕಣ್ಣಿನೊಡ್ಡು ತುಂಬಿಹರಿವ ಮನೋಲ್ಲಾಸ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಗೇಕೆ ಸೋಲುತ್ತದೆ?
Next post ಹೇಳು ಸಖೀ ಹೇಳೇ ಆ ಹೆಸರನು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…