Home / ಕವನ / ಕೋಲಾಟ / ಕೋಲಾಟವು

ಕೋಲಾಟವು

ಕೋಲುರನ್ನದ ಕೋಲುಚಿನ್ನದ ಕೋಲುಹವಳದ ಪವಳದ ಸ್ವಾಮಿ |
ಕೋಲು ಹವಳದ ಪವಳದ ||
ಕೋಲು ವಯ್ದುಪಾಡಿರೆ ನಮ ಬಾಲನ ಗೋನಾಲನ ಸ್ಟಾಮಿ |
ಬಾಲನ ಗೋಪಾಲನ || ಪಲ್ಲ ||

ಮಹಿಮೆ ತೋರುತೆ ಬಂದಳಾಕಿ ಮಹಸತಿಯ ತೇಜನ ಬೀರುತೆ ಸ್ವಾಮಿ |
ಮಹಸತಿಯ ತೇಜವ ಬೀರುತೆ ||
ಮಹಿಮೆ ಪಡೆಯಲು ಬಯಸುವವರಿಗೆ ಮಹಸತಿಯ ಮಾರ್ಗವ ತೋರುತೆ ಸ್ವಾಮಿ
ಮಹಸತಿಯ ಮಾರ್ಗವ ತೊಡರುತೆ ಸ್ವಾಮಿ || ೧ ||

ಅತ್ತೆಮಾವರ ಸೇವೆಮಾಡುವ ಚೊಕ್ಕಸಾಧ್ವಿಯು ಯೆನಿಸುತೆ ಸ್ವಾಮಿ |
ಚೊಕ್ಕಸಾಧ್ವಿಯ ಯೆನಿಸುತೆ ||
ಸುತ್ತುಜನ ಮಧ್ಯದಲಿ ಪೊಳೆವಾ ಶ್ರೇಷ್ಠಪೆಣ್ಮಣಿಯೆನಿಸುತೆ ಸ್ವಾಮಿ |
ಶ್ರೇಷ್ಠಪೆಣ್ಮಣಿ ಯೆನಿಸುತೆ || ೨ ||

ಪತಿಯೆ ದೈವತವೆಂದು ಭಾವಿಸಿ ಸತತಲವನನು ಸೇವಿಪ ಸ್ವಾಮಿ |
ಸತತಲವನನನು ಸೇವಿಪ ಸ್ವಾಮಿ
ಪತಿಯ ಮನೆದೇವತೆಯು ಯೆನಿಪಳು ಸಾಧ್ವಿಮಣಿ ಕಸ್ತೂರಿಯು ಸ್ವಾಮಿ |
ಸಾಧ್ವಿಮಣಿ ಕಸ್ತೂರಿಯು || ೩ ||

ವೀರಪುತ್ರಿಯು ವೀರಪತ್ನಿಯು ವೀರಪುತ್ರರ ಮಾತೆಯೂಸ್ವಾಮಿ |
ವೀರಪುತ್ರರ ಮಾತೆಯು ||
ಧೀರಗುಣಸಂಪನ್ನೆ ರಾಷ್ಟ್ರದ ಹೆಮ್ಮೆಯಸತಿ ಯೆನಿಪಳೂ ಸ್ವಾಮಿ।
ಹೆಮ್ಮೆಯಸತಿ ಯೆನಿಪಳು || ೪ ||

ಶ್ರೇಷ್ಠ ಗಾಂಧಿಯ ಪ್ರೇಮ ಪುತ್ಚಳಿ ಕಸ್ತೂರಿ ಪರಿಮಳ ಬೀರ್ವಳು ಸ್ವಾಮಿ |
ಕಸ್ತೂರಿ ಪರಿಮಳ ಬೀ‍ರ್ವಳು ||
ಶ್ರೇಷ್ಠ ಪೆಣ್ಮಣಿ ಪಥದಿ ನಡೆಯುತೆ ನಾಡ ಹೆಮ್ಮೆಯ ಬೆಳಿಪಳೂ ಸ್ವಾಮಿ |
ನಾಡ ಹೆಮ್ಮೆಯ ಬೆಳಿಪಳೂ || ೫ ||

ಶೀಲಗುಣಸಚ್ಚರಿತೆ ಯುಕ್ತಳು ನಾಡಜೋತಿಯ ಮೆರೆವಳು ಸ್ವಾಮಿ |
ನಾಡಜೋತಿಯ ಮೆರೆವಳು ||
ಶೂಳಿಯ ದಯದಿಂದೆ ಗಾಂಧಿಯವಾಮ ತೊಡೆಯಲಿ ಮೆರೆದಳು ಸ್ವಾಮಿ |
ವಾಮತೊಡೆಯಲಿ ಮೆರೆದಳು || ೬ ||

ಸಾಧುಸಂತರ ರಾಷ್ಟ್ರಪುರುಷರ ಮಾತಯೆನಿಪಳು ಪೆಣ್ಮಣಿ ಸ್ವಾಮಿ |
ಮಾತೆಯೆನಿಪಳು ಪೆಣ್ಮಣಿ ||
ಸಾಧುದಂಪತಿ ದುಡಿದುತಂದರು ಸ್ವಾತಂತ್ರ ಲಕುಮಿಯ ನಾಡಿಗೆ ಸ್ವಾಮಿ|
ಸ್ಥಾತಂತ್ರ ಲಕುಮಿಯ ನಾಡಿಗೆ || ೭ ||

ಕಸ್ತೂರಿಮಾತೆಯ ಪಥದಿ ನಡೆಯುತೆ ಕಸ್ತೂರಿ ಪರಿಮೆಳ ಬೀರಿರಿ ಸ್ವಾಮಿ |
ಕಸ್ತೂರಿ ಪರಿಮಳ ಬೀರಿರಿ ||
ವಿಸ್ತಾರಪಡೆಯುತೆ ನಿಮ್ಮ ತೇಜವು ಜಗಕೆ ಶಾಂತಿಯನೀಯಲಿ ಸ್ವಾಮಿ |
ಜಗಕೆ ಶಾಂತಿಯನೀಯಲಿ || ೮ ||

“ಎಲ್ಲ ಜನಗಳು ಸುಖಿಗಳಾಗಲಿ ಎಲ್ಲರೊಳು ಆರೋಗ್ಯ ನೆಲಿಸಲಿ
ಎಲ್ಲಕಡೆ ಶುಭಶಾಂತಿ ಹಬ್ಬಲಿ ದೂರಿ ದುಃಖಗಳ”

ಓಂ ನಮೋ ನಾರಾಯಣಾಯ|
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...