Home / ಕವನ / ಕವಿತೆ / ಹೊಲೆಯನು

ಹೊಲೆಯನು

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ||

ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ |
ಸತ್ಯನುಡಿಯನು ಮಾತನಾಡದವ ಹೊಲೆಯ ||
ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ |
ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ ||

ಹಡೆದ ತಾಯ್ತಂದೆಗಳ ಸೇವೆ ತಪ್ಪಿಪ ಹೊಲೆಯ |
ಪೊರೆದ ಯಜಮಾನಂಗೆ ತಿರುಗಿ ಬೀಳ್ವನೆ ಹೊಲೆಯ ||
ಮೊರೆಹೊಕ್ಕವನನ್ನು ಹೊರದೂಡುವವ ಹೊಲೆಯ |
ಹರಿಯಸ್ಮರಣೆಯ ಮಾಡವದ ಶುದ್ಧ ಹೊಲೆಯ || ೨ ||

ಗುರುವಿನೋಳ್ನಯ ಭಕ್ತಿ ತೋರದಾತನೆ ಹೊಲೆಯ |
ಪರರ ಮನವನು ಮದದಿನೋಯಿಪನು ಹೊಲೆಯ ||
ಪರಧನವ ಪರಸತಿಯ ಬಯಪ ಮಾನವ ಹೊಲೆಯ |
ಪರರ ಧರ್ಮವಹಳಿಪ ತಾಪರಮ ಹೊಲೆಯ || ೩ ||

ಮದ್ಯ ಮಾಂಸಾದಿಗಳ ಸೇವಿಪಾತನೆ ಹೊಲೆಯ |
ಕದ್ದು ವ್ಯೆಸನವಮಾಡಿ ಶುದ್ಧಯ ಮೆರೆವವ ಹೊಲೆಯ ||
ಇದ್ದುದನು ಸತ್ಕಾರ್‍ಯದಲಿ ಸವಿಸದಾತನೆ ಹೊಲೆಯ |
ಶುದ್ಧ ತನುಮನ ಮಾತನರಿಯದವ ಹೊಲೆಯ || ೪ ||

ತನ್ನಂತೆ ಪರರನು ಬಗೆಯದಾತನೆ ಹೊಲೆಯ |
ತನ್ನನಾಡಿನ ಹಿತಕೆ ಮಡಿಯದವ ಹೊಲೆಯ ||
ತನ್ನ ನಾಡ್ಸಂಸ್ಕೃತಿಯ ಮರೆವಾತನತಿ ಹೊಲೆಯ |
ತನ್ನವರ ದೂರುವವ ತಾ ಶುದ್ಧ ಹೊಲೆಯ || ೫ ||

ತನ್ನ ತಾನರಿಯದಲೆ ಮೆರೆವ ಮೂರ್‍ಖನು ಹೊಲೆಯ |
ತನ್ನವರವೊಲು ಪರರಬಗೆಯದವ ಹೊಲೆಯ ||
ಹೆಣ್ಣು ಹೊನ್ಮಣ್ಣುಗಳ ನೆನೆದುಗೋಳಿಪ ಹೊಲೆಯ |
ಧನ್ಯಪರಮೋಕ್ಷವನು ಬಯಸದವ ಹೊಲೆಯ || ೬ ||

ನಾಡನಾಯ್ಕರ ಮಾತಮೀರಿ ನಡೆವವ ಹೊಲೆಯ |
ನಾಡಿನಾಡಳಿತದೊಳಗ ಬರುವವ ಹೊಲೆಯ ||
ನಾಡಕೀರ್ತಿಗೆ ಕುಂದನೊಡ್ಡುವಾತನೆ ಹೊಲೆಯ |
ನಾಡನಾಡಲಿ ದ್ವೇಷ ಪಸರಿಪನು ಹೊಲೆಯ || ೭ ||

ನಾಡ ತಂದೆಯ ತತ್ವತಾನಡಿಸದವ ಹೊಲೆಯ |
ನಾಡಪಿತ ಮಹಾತ್ಮ ಗಾಂಧಿ ಕೊಂದವ ಹೊಲೆಯ ||
ನಾಡಿನೊಳ ಹಿಂಸೆಸತ್ಯ ಪಸರಿಸಲಾಗ |
ಗಾಡಿಯಿಂ ಮೆರೆದಪುದು ಹೊಲೆತನವನಳಿದೂ || ೮ ||
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...