ಬ್ರಹ್ಮ ಕಮಲ

ಗವ್ವನೆಯ ಅಮವಾಸೆಯ ಕಗ್ಗತ್ತಲು
ಮಳೆಗಾಲದ ಕವದಿಹೊದ್ದು ಗಡದ್ದಾಗಿ ಮಲಗಿದ್ದು
ಕನಸುಗಳೂ ಒಡೆಯದ ನಿಶ್ಶಬ್ದ ರಾತ್ರಿಗೆ
ಸವಾಲು ಎನ್ನುವಂತೆಯೋ ಏನೋ
ಕತ್ತಲಂಗಳಕೆ ಚಂದ್ರಲೇಪಿತ ಕಮಲೆ ಹುಟ್ಟಬೇಕೆ?

ಎಳೆಗೂಸು ಎಸಳು ಇನ್ನೂ ಹೊಕ್ಕಳಬಳ್ಳಿ ಬಿಡಿಸಿಲ್ಲ
ಕಣ್ಣಲ್ಲೇ ಕಣ್ಣಿಟ್ಟಿದ್ದರೂ ಉಗುರಿಗೆ ಗುಲಾಬಿ ತುಂಬುತ
ಚಂದ್ರವದನೆಯಾಗಿ ಎದೆಯಂಗಳದಿ ಕನಸುಗಳ
ಪುಳಕಿಸುತ ನಿಂತಳಲ್ಲ ತರಳೆ ಸುಷ್ಮಿತೆ
ಏನಿವಳ ಬಿಂಕ ಬಿನ್ನಾಣ ಆಹಾ! ಮದುವಣಗಿತ್ತಿ

ಕತ್ತಲೆಯೊಂದಿಗೆ ಕೂಡಿ ಪ್ರೀತಿಬೆಳೆದದ್ದು
ಏನೆಲ್ಲ ಪಿಸುಗುಟ್ಟಿದ್ದು ಹೇಳಬೇಕೆ? ನಾಚಿದಳು
ಮೃದು ಸ್ಪರ್ಶ ಸುವಾಸನೆ ರೋಮಾಂಚನೆಗೆ
ಕತ್ತಲು ಬೆರಗಾಗಿ ಕಣ್ಣುಬಿಟ್ಟದ್ದು ಹುಡುಕಾಟ
ಅದೇಕೋ ಶ್ವೇತಕಮಲೆ ಬ್ರಹ್ಮನಾಭಿ ಸೇರಿದ್ದು
ಮತ್ತೆ ವಿರಹಕ್ಕೆ ಹಾದಿಯಾಯಿತೆ?
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಣಹೇಡಿ ಸರ್ಕಾರ ಹೆಣ ಹೊರೋಕೂ ನಾಲಾಯಕ್ಕು
Next post ನಗೆ ಡಂಗುರ – ೭೧

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys