Home / ಕವನ / ಕವಿತೆ / ಸುಯೇಜಿನಲ್ಲಿಯ ಹಡಗ

ಸುಯೇಜಿನಲ್ಲಿಯ ಹಡಗ

ಕಂಬಿಯಿಲ್ಲದ ಗಾಡಿಯಂತೆ ಸುಂದಾಗಿ ಸಾಗಿದೆ ಹಡಗ:
ಇದಕಾವ ಪಿಡುಗು ಬಂತು?
ಕಲ್ಲು ತಾಕಿದ ಹಾವಿನಂತೆ ಮೆಲ್ಲನೆ ಹೊಟ್ಟೆ ಹೊಸೆಯುತಿದೆ:
ನಡೆದಿರುವದೇತಕ್ಕಿಂತು?

ನೀಲಕಾಯರ ನೆಲದಡಿಗೆ ಕೋಲಾಹಲವೆಬ್ಬಿಸಿ
ಹೊನ್ನನು ನುಂಗಿ, ದಂಗೆ ಹಾಕಿ,
ಕೆಂಪು ಕಡಲೊಳಗಿಂದ ಕಳ್ಳನಂತೆ ನುಸುಳಿ
ನೀರಿಲ್ಲದ ಕಾಲುವೆಯಲ್ಲಿ ನೂಕಿ,-

ಮುಳ್ಳುಗಂಟಿಗೆ ಮಣಿದು, ಅಂಬೆಗಾಲಿಕ್ಕಿ, ಹವಣಿಸಿ,
ಉಳಿಯಲೆಂದೋಡುವನವನಂತೆ,-
ಸಮುದ್ರಚೋರನಾಗಿ ಸರೋವರಕೆ ಕೈಮುಗಿದು,
ಕಹಿಕೊಳದಡಿಗೆರಗಿ, ಒಪ್ಪಿಸುವವನಂತೆ,-

ಅರಣ್ಯಕ್ಕೆ ಸಾಗರಬಿದ್ದು, ಅಡಿಯಿಟ್ಟು ತೂಕದ ಮೇಲೆ,
ಹೆಜ್ಜೆಹೆಜ್ಜೆಗೆ ಮುಂದೆ ಹೋಗಿ,
ಬದುಕಲು ಹಾತೊರೆದ ಜೀವಗಳ್ಳನಂತೆ
ನಡೆದಿದೆ ಸುಳ್ಳುವಿನಯದಿ ಬಾಗಿ!

ಮೊಸಳೆಯಿದು ಕೆಂಪು ಕಡಲ ತೊರೆದು ಬಂದು
ಒದ್ದಾಡಿತುಸುಬಿನರಣ್ಯದಲ್ಲಿ!
ಸಾಯುತಿತ್ತು ನೀರ ಬೇಡಿ, ಕಡಲ ನೊರೆಗಾಗಿ ಮೊರೆದು,
ಬೇಯುತಿತ್ತು ಬಿಸಿಲಿನಲ್ಲಿ!

ಬಂದನಾಗ ಭೂಮಧ್ಯಸಮುದ್ರದ ಕುವರ,-
ಆ೦ಗೆಗೆಯ್ಯ ಮೇಲೆತ್ತಿ ಮೊಸಳೆಯ
ನೀರುಗೆಯ್ಯಿಂದದನು ಹಿಡಿದೆಳೆದ ಕಡಲೆಡೆಗೆ:
ಆಗ ಘೂರ್ಣಿಸಿ ಮೊಸಳೆ ಕೂಡಿತ್ತು ಸಾಗರವ!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...