Home / ಕವನ / ಕವಿತೆ / ಉಂಟು

ಉಂಟು

ಅ೦ಚೆಯಂತೆ, ಕತ್ತರಿಸಿ ತೆರೆಗಳನ್ನು
ಚಂಚುವಿನ೦ಚಿನಿಂದ
ನಮ್ಮ ನಾವೆಯಿದು ತೆರಳುತಿದೆ ನೋಡಿರೆ!
ಗರಿಗಳನು ಹರಹಿ ರವಿಕಿರಣದಿ ಹೊಳೆಯುತಿರೆ
ರಾಜಹ೦ಸವಿದು ಮರಳುತಿದೆ ನೋಡಿರೆ!

ಮುಗಿಲೆತ್ತರ ಧ್ವಜಸ್ಮ೦ಭವನೆತ್ತಿ,
ತಾರೆಗಳ ಕೆಳಗೆ,
ಪಡಿಮುಗಿಲಂತೆ ದೀಪಮಾಲೆಯ ಹಚ್ಚಿ,
ಚುಕ್ಕಾಣಿಯ ಹಿಡಿಯೆ
ಪ್ರತಿಮಾರುತಿಯು,-ಪಾರ್ಥನ ರಥದಂತೆ,
ಯೋಗೀಶ್ವರನು ನಡೆಯಿಸಿದ ತೇರಂತೆ
ತೋರುತಿದೆ-ಸಾಗುತಿದೆ ನೋಡಿರೆ!

ಹಡಗವಿದರ ಹಿ೦ಬದಿಯ ನೋಡಿದೆ
ಮುಂಬದಿ ನೋಡಿದೆ
ಎಡಬದಿ ಬಲಬದಿಯ ಸುತ್ತಿಬಂದೆ-
ದಣಿದೆನೆಂದೆ.
ನೋಡಿದಲ್ಲೆಲ್ಲ ಕೆಸರಂಥ ಕರಿನೀರೊಳಗಿಂದ
ಮಜ್ಜಿಗೆ ಕಡಿಯುವ ನೀರೆಯ ನೋಡಿರೆ!
ಮೇಘಶ್ಯಾಮನ ಮೈಬಣ್ಣದ ಸಲಿಲದಿ೦ದ
ತನಿವೆಣ್ಣಿಯ ತೆಗೆಯುವ ಗೋಪಿಯ ನೋಡಿರೆ!
ನೋಡದವರೆಂಥ ಪಾಪಿ!

ಕಾಣದ ಹೆಜ್ಜೆಯ ಗುರುತನು
ಕಾಣುವ ನೀರ ಮೇಲೆ ಬಿಟ್ಟವರುಂಟೆ?
ಉಂಟು! ಉಂಟು!
ಇಟ್ಟ ಗುರಿಯನು ಬಿಟ್ಟುಬಿಡದೆ ನಿಟ್ಟಿಸುತ
ಹಿಮ್ಮೆಟ್ಟದೆ ಹುಮ್ಮಸದಿಂದ ನಡೆದವರುಂಟೆ?
ಉಂಟು! ಉಂಟು!
ಹಗಲೆನ್ಸದೆ ರಾತ್ರಿಯೆನ್ನದೆ
ಗೊತ್ತೆನ್ನದೆ ಒತ್ತೆನ್ನದೆ
ಮೂಡಿನಿಂದ ಮುಳುಗಿನ ವರೆಗೆ
ಸಂಧ್ಯೆಯಿಂದ ಸಂಧ್ಯೆಗೆ-
ಅಟ್ಟಂಬಟ್ಟ೦ ಅರಣ್ಯದೊಳಗಿಂದ
ಸಪ್ತಸಮುದ್ರಗಳ ವ್ಯಾಪ್ತಿಯೊಳಗಿಂದ
ವಿಂಧ್ಯಾಚಲದಂತೆ ಗಂಭೀರವಾಗಿ-
ಆದರೆ ಚಲಿಸಿ-
ದಿನದಿನಕ್ಕೆ ಇನನಂತೆ ಹೆಜ್ಜೆಯಿಕ್ಕಿದರುಂಟೆ ?
ಉಂಟು! ಉಂಟು!!
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...