Home / ಕವನ / ಕವಿತೆ / ಉಂಟು

ಉಂಟು

ಅ೦ಚೆಯಂತೆ, ಕತ್ತರಿಸಿ ತೆರೆಗಳನ್ನು
ಚಂಚುವಿನ೦ಚಿನಿಂದ
ನಮ್ಮ ನಾವೆಯಿದು ತೆರಳುತಿದೆ ನೋಡಿರೆ!
ಗರಿಗಳನು ಹರಹಿ ರವಿಕಿರಣದಿ ಹೊಳೆಯುತಿರೆ
ರಾಜಹ೦ಸವಿದು ಮರಳುತಿದೆ ನೋಡಿರೆ!

ಮುಗಿಲೆತ್ತರ ಧ್ವಜಸ್ಮ೦ಭವನೆತ್ತಿ,
ತಾರೆಗಳ ಕೆಳಗೆ,
ಪಡಿಮುಗಿಲಂತೆ ದೀಪಮಾಲೆಯ ಹಚ್ಚಿ,
ಚುಕ್ಕಾಣಿಯ ಹಿಡಿಯೆ
ಪ್ರತಿಮಾರುತಿಯು,-ಪಾರ್ಥನ ರಥದಂತೆ,
ಯೋಗೀಶ್ವರನು ನಡೆಯಿಸಿದ ತೇರಂತೆ
ತೋರುತಿದೆ-ಸಾಗುತಿದೆ ನೋಡಿರೆ!

ಹಡಗವಿದರ ಹಿ೦ಬದಿಯ ನೋಡಿದೆ
ಮುಂಬದಿ ನೋಡಿದೆ
ಎಡಬದಿ ಬಲಬದಿಯ ಸುತ್ತಿಬಂದೆ-
ದಣಿದೆನೆಂದೆ.
ನೋಡಿದಲ್ಲೆಲ್ಲ ಕೆಸರಂಥ ಕರಿನೀರೊಳಗಿಂದ
ಮಜ್ಜಿಗೆ ಕಡಿಯುವ ನೀರೆಯ ನೋಡಿರೆ!
ಮೇಘಶ್ಯಾಮನ ಮೈಬಣ್ಣದ ಸಲಿಲದಿ೦ದ
ತನಿವೆಣ್ಣಿಯ ತೆಗೆಯುವ ಗೋಪಿಯ ನೋಡಿರೆ!
ನೋಡದವರೆಂಥ ಪಾಪಿ!

ಕಾಣದ ಹೆಜ್ಜೆಯ ಗುರುತನು
ಕಾಣುವ ನೀರ ಮೇಲೆ ಬಿಟ್ಟವರುಂಟೆ?
ಉಂಟು! ಉಂಟು!
ಇಟ್ಟ ಗುರಿಯನು ಬಿಟ್ಟುಬಿಡದೆ ನಿಟ್ಟಿಸುತ
ಹಿಮ್ಮೆಟ್ಟದೆ ಹುಮ್ಮಸದಿಂದ ನಡೆದವರುಂಟೆ?
ಉಂಟು! ಉಂಟು!
ಹಗಲೆನ್ಸದೆ ರಾತ್ರಿಯೆನ್ನದೆ
ಗೊತ್ತೆನ್ನದೆ ಒತ್ತೆನ್ನದೆ
ಮೂಡಿನಿಂದ ಮುಳುಗಿನ ವರೆಗೆ
ಸಂಧ್ಯೆಯಿಂದ ಸಂಧ್ಯೆಗೆ-
ಅಟ್ಟಂಬಟ್ಟ೦ ಅರಣ್ಯದೊಳಗಿಂದ
ಸಪ್ತಸಮುದ್ರಗಳ ವ್ಯಾಪ್ತಿಯೊಳಗಿಂದ
ವಿಂಧ್ಯಾಚಲದಂತೆ ಗಂಭೀರವಾಗಿ-
ಆದರೆ ಚಲಿಸಿ-
ದಿನದಿನಕ್ಕೆ ಇನನಂತೆ ಹೆಜ್ಜೆಯಿಕ್ಕಿದರುಂಟೆ ?
ಉಂಟು! ಉಂಟು!!
*****

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...