Home / ಕವನ / ಕವಿತೆ / ಆಫ್ರಿಕ

ಆಫ್ರಿಕ

ಕೆಂಪು ಸಮುದ್ರದ ನೀರು ಕತ್ತಲೆಯಂತೆ ಕರ್‍ರಗಿರಲು
ಆಫ್ರಿಕದ ಕಾಡಿಗೆಯ ಮೇಲೆ ಸಂಜೆಗೆಂಪು ಮೂಡಿತ್ತು.
ಕರಿಬೆಟ್ಟಗಳ ಹೊದರಿನಲ್ಲಿ ಹುದುಗುತ್ತಿದ್ದನು ರವಿಯು.
ಅಬಿಸೀನಿಯದ ಕೊಲೆ, ನಿಗರ್ವಿಗಳ ದಾಸ್ಯ, ಸುಮಾಲಿಗಳ ಕೊರಗು,-
ಕಪ್ಪುಹಚ್ಚುವ ಕೃತಿಗಳಿವು,-ರಕ್ತವರ್ಣದವು!
ಆಫ್ರಿಕಖಂಡದ ಜನರ ಮೆಯ್ಯಲ್ಲಿಲ್ಲ ಮಾಂಸಖಂಡ,-
ಗುಲಾಮರ ಲೋಕವದು-ಮಾನವನು ಮೆಟ್ಟಿದ ಪಾತಾಳವದು-
ಅಂಧಂತಮಸ್ಸದು–ಕೊಲೆಗಡಕರಡುಮನೆಯದು-
ಅಲ್ಲಿ ಮುಳುಗುವ ರವಿಯು ಕೂಡ ರಕ್ತದ ಮಡುವಿನಲೀಸುತಿದ್ದ!

ಇ೦ತಿರಲು ಆಫ್ರಿಕದ ಮುಳುಗು,-ಮೂಡಿತೊಂದಾಸೆಯಲ್ಲಿ.
ಬೆಳ್ಳಿಯ ಕಡ್ಡಿಯನು ಬಿಳಿ ಬೆಳಕಿನಲೆದ್ದಿ ಬರೆದ ಗೆರೆಯಂತೆ
ಮುಗಿಲ ಪಟದ ಮೇಲೆ ವಿರಾಜಿಸಿದ ಬಿದಿಗೆಯ ಚಂದ್ರಮನು.
ಕಳೆಯೇರಿದನು, ಕರೆತಂದನು ಕೆಲವು ಚಿಕ್ಕೆಗಳನು,
ಹಿಡಿದ ಕೊಂಬಿನಲ್ಲಿ ಬಿಂಬಿಸಿದನು ಬೆಳಕನೆಲ್ಲ,
ಆಸೆಯಿದೆಯೆಂದನು, ಕೃಷ್ಣೋದಕದ ಹೃದಯವ ಕೂಡ
ಭೇದಿಸಿದನು ಹೊಳೆವ ಕಿರಣಗಳ ಕೂರಲಗಿನಿಂದ.

ಅರೆನಿಮಿಷ ಬೆಳಗಿರಲಿಲ್ಲ,-ಕಳೆಗುಂದಿದನು ಚಂದ್ರ.
ಕಂದಿತೆಲ್ಲ ಅವನ ಬಣ್ಣ! ಕೇದಿಗೆಯ ಬಿಳುಪು ಬಂತು:
ಬಾಗಿದನು, ಮೊಗ ತಗ್ಗಿಸಿದನು, ಹುದುಗಿದನು ಬೆಟ್ಟಗಳ ಹೊದರಿನಲ್ಲಿ.
ಹೆದರಬೇಡ ಆಫ್ರಿಕವೆ! ಬರಬಹುದು ನಿನ್ನ ಹುಣ್ಣಿಮೆ ನಾಳೆ.
ಹುಣ್ಣಿಮೆಯಿದ್ದಲ್ಲಿ ಅಮಾವಾಸ್ಯ,-ಅಮಾವಾಸ್ಯವಿದ್ದಲ್ಲಿ ಹುಣ್ಣಿಮೆ;
ಇಂತಿಹುದು ಕಾಲಚಕ್ರ, ಕದಲಬಹುದು ನಿನ್ನ ಕತ್ತಲೆ!
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...