Home / ಕವನ / ಕವಿತೆ / ಮೆಸೀನಾ ಉಪಸಾಗರದಲ್ಲಿಯ ರಾತ್ರಿ

ಮೆಸೀನಾ ಉಪಸಾಗರದಲ್ಲಿಯ ರಾತ್ರಿ

ಒಂದು ದಂಡೆಗೆ ಸಿಸಿಲಿಯ ದೀಪಮಾಲೆ,
ಇನ್ನೊಂದು ದಂಡೆಗೆ ಇಟಲಿಯ ದೀಪಾವಳಿ;
ಒ೦ದು ದಂಡೆಗೆ ಹರಿತಶಿಲಾಪ್ರಕಾಶಸ್ತ೦ಭ,
ಇನ್ನೊಂದು ದಂಡೆಗೆ ಮಿಂಚಿನ ಮಂಗಳಾರತಿ;
ಬೆಳಕು ಬಂದು ಕಡಲ-ಹಕ್ಕಿಗೆ ತೋರಣ ಕಟ್ಟಿತಿಲ್ಲಿ,
ಅನಂತರೂಪಗಳ ಧರಿಸಿತಿಲ್ಲಿ!

ದಿನ್ನೆಯಿಂದ ಶರಧಿಗೆ ಹಬ್ಬಿದ ದೀಪಗಳಿವು ಸುರಪುರಗಳೇನು?
ಬೀಡು ಬಿಟ್ಟ ಉಜ್ವಲ ಸ್ವಪ್ನಗಳೇನು?
ಕೆಳಗಿಳಿದು ಬಂದ ತಾರೆಗಳ ನಿಬ್ಬಣವೇನು?
ಬೆಳಕು ಹುಟ್ಟಿನಲ್ಲಿ ಚಕಮಕಿಸುವ ರಾಜಭೃಂಗಗಳೇನು?
ಒ೦ದು ದಂಡೆಗೆ ಸಿಸಿಲಿ, ಇನ್ನೊಂದು ದಂಡೆಗೆ ಇಟಿಲಿ,
ಸಿಸಿಲಿಯ ಕವಿಗಳು ನಿರ್ಮಿಸಿದ ಕಣ್ಣುಕಟ್ಟೇನಿದೆಲ್ಲ?

ಬೀದಿಗಳಿಹವು ನೋಡು ದೀಪಗಳೆರಡು ರೇಖೆಗಳ ನಡುವೆ.
ಒಂದೊಂದು ದೀಪಕೊಂದೊಂದು ಮನೆ. ಬಿದಿಗೆಯ ಚಂದ್ರಮನಂತೆ
ಪುರವಿದನು ರೇಖಿಸಿದೆ ದಿವ್ಯ ವಿದ್ಯುಲ್ಲತೆಯು!
ಪಟ್ಟಣದ ಪಡಿನೆಳಲಲ್ಲವಿದು, ಬೆಳಕಿನಲೊಗೆದ ಪ್ರತಿಮೆ!
ಅಲ್ಲಲ್ಲ! ಒಣ್ಣನೆಗೆ ಮೋಹಗೊಳದಿರು! ಜೋಕೆ!
ಅನ್ಯಾಯದ ದೀಪೋತ್ಸವವಿದು! ಮುಸಲೀನಿಯ ಪ್ರಾಣಪ್ರತಿಷ್ಠೆ!
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...