Home / ಕವನ / ಅನುವಾದ / ದೇಶಸೇವಕ

ದೇಶಸೇವಕ

(ಹಳೆಯ ಕಥೆ)
ಮಾಲೆಗಳು, ಮಾಲೆಗಳು ಬೀದಿ ಮನೆಮನೆಗೆ;
ಮುತ್ತುಗಳ ಸೇಸೆಗಳು ತಲೆಯೊಳಗೆ ಮಿನುಗೆ;
ಮಾಳಿಗೆಗಳೊಲೆದಾಡಿ ಹಿಗ್ಗು ಮುಗ್ಗಾಗೆ;
ಎತ್ತಿದಾ ಗುಡಿ ದೀಪಗೋಪುರವ ಬೆಳಗೆ-
ಒಂದು ವರುಷದ ಕೆಳಗೆ ನನಗೆ ಮೆರವಣಿಗೆ!
ಗಾಳಿ ನೊರೆಕೀಳುವುದು ವಾದ್ಯಗಳ ಮೊರೆಗೆ;
ಊರೆ ಕಿತ್ತೊಡುವುದು ಜನದ ಜಯಜಯಕೆ.
ಕೇಳಿದೆನೆ – “ಅಣ್ಣದಿರ, ಏಕೆ ಬರಿ ಬೊಬ್ಬೆ?
ಸೂರಿಯನ ತಂದುಕೊಡಿ” ಎನುತ – ಅವರೊಡನೆ
“ಆಯ್ತಾಯ್ತು; ಮತ್ತೇನು? ಕೇಳು” ಎನುತಿಹರು.
ನಾನಕಟ! ಸೂರ್ಯನನು ತರಲು ನೆಗೆದವನು!
ನಾಡಿನೊಲುಮೆಯ ಜನದ ಕಯ್ಗೆ ಕೊಡಲದನು.
ಮಾನವನು ಮಾಡುವುದನೆಲ್ಲ ಮಾಡಿದೆನು.
ನೋಡೆನ್ನ ಪಾಡೀಗ ನಾ ಬೆಳೆದ ಬೆಳಸು,
ಒಂದು ವರುಷವು ಕಳೆದು ನಾ ಕೊಯ್ದ ಕೊಯಲು.
ಮಾಳಿಗೆಯ ಮೇಲೀಗ ಒಂದು ತಲೆ ಕಾಣೆ!
ಕಿಟಕಿಯೊಳಗಲ್ಲಲ್ಲಿ ಹೆಳವರಿಣಿಕಿಹರು.
“ಏಳಿ, ಎಲ್ಲರು ಬನ್ನಿ, ನೋಟ ಬಲುಚೆನ್ನು,
ಸುಡುಗಾಡಿನೆಡೆಯಲ್ಲಿ ಶೂಲದಡಿಯಲ್ಲಿ!”
ಅಲ್ಲಿಗೋಡಿದಲೆಲ್ಲ, ತಳ್ಳಿ ತುಳಿದಾಡಿ.
ಮಳೆಯೊಳಗೆ ಹೋಗುವೆನು; ಮುಂಗಯ್ಯ ಕೊರೆದು
ಬೆನ್ನಿನಲಿ ನೇಣಿಂದ ಬಿಗಿದು ಕಟ್ಟಿಹರು.
ಇಳಿಯುತಿದೆ ಹಣೆಯಲ್ಲಿ ರಕ್ತ ಬಸಿಬಸಿದು,
ನನ್ನ ಕಡೆ ಕಲ್ಲೆಸೆದು ಮನಸುಬಂದವರು-
ಒಂದು ವರುಷದ ನಿನ್ನ ತಪ್ಪುಗಳಿಗೆಂದು!
ಹೇಗೆ ಬಂದೆನು ನಾನು, ಹೇಗೆ ಹೋಗುವೆನು!
ಹಿಂದೆ ವಿಜಯೋತ್ಸವದಿ ಸತ್ತುಬಿದ್ದಿಹರು!
“ಲೋಕವೇ ಫಲಕೊಡಲು, ನನ್ನ ಹಂಗೇನು?”
ಎಂದು ಕೇಳನೆ ಆಗ ಭಗವಂತ! ಈಗ,
ಕೊಡುವಾತ ಭಗವಂತ-ಕ್ಷೇಮ ಅದೆ ನನಗೆ.
*****
BROWNING (1812- 1889) : The Patriot
Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್