Home / ಕವನ / ಅನುವಾದ / ಇಂಗ್ಲೆಂಡ್

ಇಂಗ್ಲೆಂಡ್

ಏನ ಮಾಡಿದೆ ನಾನು ನಿನಗೆ
ಇಂಗ್ಲೆಂಡ್, ನನ್ನಿಂಗ್ಲೆಂಡ್
ಏನ ಮಾಡೆನು ಹೇಳು ನಿನಗೆ
ನನ್ನ ಇಂಗ್ಲೆಂಡ್!
ದೇವನೊರೆವುದ ಕೇಳಿ,
ಕಣ್ಣ ಮಿನುಗನು ತಾಳಿ,
ಘೋರಯಜ್ಞವ ಬೇಳಿ,
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಇಳೆಬಳಸಿ ತುತ್ತುರಿಯ ನೀನೂದಲು.
ಇನ್ನು ರವಿ ಎಲ್ಲಿ ಕಾಣುವನು,
ಇಂಗ್ಲೆಂಡ್, ನನ್ನಿಂಗ್ಲೆಂಡ್,
ನಿನ್ನಣೆಯ ಮಹತುಕಾರ್ಯವನು,
ನನ್ನ ಇಂಗ್ಲೆಂಡ್!
ಎಲ್ಲಿ ನಲಿವನು ಕಂಡು
ನಿನ್ನ ಧೀರರ ದಂಡು
ನೂಂಕುವೊಲು ಮುಂಕೊಂಡು,
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಎಡರಿನಲಿ ತುತ್ತುರಿಯ ನೀನೂದಲು!
ಬಳುಕುವೆವೆ ಭಕ್ತಿಯಲಿ ನಾವು
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಕೊಳು, ಕೊಲಿಸು; ನಿನ್ನವರು ನಾವು,
ನನ್ನ ಇಂಗ್ಲೆಂಡ್!
ನಿನ್ನ ಹೊಲ, ಮನೆ, ಚೆಂದ;
ಬಾಳು ಮಿಗಿಲಾನಂದ;
ಸಾವಳಿವು-ಸಾಯುವೆವು
ಗಾನದಲಿ ತುತ್ತುರಿಯ ನೀನೂದಲು,
ಇಂಗ್ಲೆಂಡ್,
ಸ್ವರ್ಗದಲಿ ತುತ್ತುರಿಯ ನೀನೂದಲು.
ಗರ್ವಿ, ಘಾತಕಿ, ಎಂಬರಮ್ಮ,
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಸರ್ವಧರೆ ನಿನ್ನ ಹೊರೆಯಮ್ಮ!
ನನ್ನ ಇಂಗ್ಲೆಂಡ್!
ವಜ್ರಕವಚವ ತೊಟ್ಟು,
ಗತಿಯ ಕಾವುದ ಬಿಟ್ಟು,
ಜರುಗುವೆಯ? ಮರುಗುವೆಯ?
ಗಾನದಲಿ ತುತ್ತುರಿಯ ನೀನೂದದೆ,
ಇಂಗ್ಲೆಂಡ್,
ನರಕದಲಿ ತುತ್ತುರಿಯ ನೀನೂದದೆ?
ತುಳಿದುಬಹ ನಾವೆಗಳ ತಾಯಿ,
ಇಂಗ್ಲೆಂಡ್, ನನ್ನಿಂಗ್ಲೆಂಡ್!
ಹಳೆಯುಗ್ರಸಾಗರನ ಕೆಳದಿ,
ನನ್ನ ಇಂಗ್ಲೆಂಡ್!
ಸ್ವಾಮಿಯಕ್ಕರ ಕುವರಿ,
ಧರ್ಮಖಡ್ಗದ ಮಡದಿ-
ಸೀಳಿರದೆ, ಖೂಳರೆದೆ,
ಗಾನದಲಿ ತುತ್ತುರಿಯ ನೀನೂದಲು
ಇಂಗ್ಲೆಂಡ್,
ಸತ್ಯದಲಿ ತುತ್ತುರಿಯ ನೀನೂದಲು!
*****
HENLEY (1849 – 1903) : What have I done for you , England, my England
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...