Home / ಲೇಖನ / ಇತರೆ / ಬಾಳಿನಲ್ಲಿ ಶೃದ್ಧೆ

ಬಾಳಿನಲ್ಲಿ ಶೃದ್ಧೆ

ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತನುವು ತೊಡಗಿಸಿಕೊಂಡರೂ ಅವನ ಮನಸ್ಸು ಇನ್ನಾವುದೋ ವಿಚಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಜೀವನದಲ್ಲಿ ಸಾರ್ಥಕವಾದ ಕಾರ್ಯ ಮಾಡಲಾರನು.

ಈಗ ಅನೇಕ ಸಲ ಕಚೇರಿಯಲ್ಲಿ ನಾವು ನೋಡುತ್ತೇವೆ. ಕಾರ್ಯ ನಿರ್ವಹಿಸುವ ಆ ಕಚೇರಿಯ ಸಿಬ್ಬಂದಿ ವರ್ಗದವರು ಕಾರ್ಯ ಮಾಡುತ್ತಿರುವಾಗಲೇ ಇನ್ನಾವುದೋ ಮಾತುಗಳಲ್ಲಿ, ವಿಷಯಗಳಲ್ಲಿ ತೇಲಾಡುತ್ತಾರೆ. ಹೀಗಾಗುವುದರಿಂದ ಲೆಕ್ಕ ತಪ್ಪಾಗಬಹುದು. ಅವಘಡಕ್ಕೆ ಕಾರಣವಾಗಬಹುದು. ಬ್ಯಾಂಕಿನಲ್ಲಿ ನಗದು ಗುಮಾಸ್ತ ತನ್ನ ಗ್ರಾಹಕರಿಗೆ ನೀಡುವ ಪ್ರತಿಯೊಂದು ಚೆಕ್ಕಿನ ಬಗ್ಗೆಯೂ ಲೆಕ್ಕವಿರಬೇಕು. ತುಸು ಅಲಕ್ಷ್ಯವಾದರೂ ಕೈಯಿಂದ ಕಾಸು ಕಳೆದುಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ನಾರಿಯರು ಮನೆಗೆಲಸಗಳನ್ನು ಮಾಡುವಾಗ ಯಾವ ಕಾರ್ಯ ಮಾಡುತ್ತಿರುತ್ತಾರೋ ಅದರಲ್ಲಿಯೇ ಅವರ ಮನಸ್ಸಿರಬೇಕು. ಅಡುಗೆ ಮಾಡುವಾಗ ಬಟ್ಟೆ ಒಗೆಯುವ ಬಗ್ಗೆ, ಬಟ್ಟೆ ತೊಳೆಯುವಾಗ ಪಾತ್ರೆ ಸ್ವಚ್ಛಗೊಳಿಸುವ ಬಗ್ಗೆ ಚಿಂತನೆ ಮಾಡಿದರೆ ಈಗಿರುವ ಕೆಲಸ ಮತ್ತು ಮಾಡಬೇಕಾದ ಕೆಲಸಗಳೂ ಹಾಳಾಗುತ್ತವೆ.

ನಮ್ಮ ಶೃದ್ಧೆ ಕೇವಲ ಕಾರ್ಯದ ಮೇಲೆ ಮಾತ್ರ ಇರದೆ ಹಿರಿಯರ ಮಾತುಗಳನ್ನು ಸಹ ನಾವು ಶೃದ್ಧೆಯಿಂದ ಕೇಳಿ ನಿರ್ವಹಿಸವಬೇಕು. ಅವರು ಹೇಳುವ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸಿದರೆ ಅವರಿಗೂ ಖುಷಿ ಕೊಡುವುದಿಲ್ಲ. ಮತ್ತು ಕಾರ್ಯವೂ ಶಿಸ್ತಾಗುವುದಿಲ್ಲ.

ಶ್ರೀ ರಾಮಕೃಷ್ಣ ಪರಮಹಂಸರು ಒಂದು ಪುಟ್ಟ ಕಥೆ ಹೇಳುತಿದ್ದರು. ಓರ್ವ ಪ್ರಯಾಣಿಕ ದಾರಿಯಲ್ಲಿ ನಡೆದು ನದಿ ತೀರಕ್ಕೆ ಬಂದಿದ್ದ. ನದಿ ದಾಟಿ ಆಚೆಗೆ ಹೋಗುವ ಪಸ್ರಂಗ, ನದಿಯಲ್ಲಿ ತುಂಬ ಜಾಸ್ತಿ ನೀರಿತ್ತು. ಹಿಂತಿರುಗಿ ಹೋಗಲು ಕತ್ತಲಾಗುತಿತ್ತು. ಏನೂ ತೋಚದೆ ನಿಂತಿರಲು ಅಲ್ಲೋರ್ವ ಸಾಧು ಈ ಪ್ರಯಾಣಿಕನ ಹೊಯ್ದಾಟ ಕಂಡು ಹತ್ತಿರಕ್ಕೆ ಕರೆದು ಒಂದು ಎಲೆಯ ಮೇಲೆ ಏನೋ ಬರೆದು ಈ ಪ್ರಯಾಣಿಕನ ಕೈಗಿತ್ತು. ‘ಹೋಗು ನೀನು ಈ ನೀರಿನ ಮೇಲಿಂದ ನಡೆದುಕೊಂಡು ಹೋಗಬಹುದು’ ಎಂದರು. ಪ್ರಯಾಣಿಕನು ಸಂತಸಗೊಂಡು ಸಾಧುವಿಗೆ ಅಭಿನಂದನೆ ಹೇಳಿ ಅದನ್ನು ಪಡೆದು ನೀರ ಮೇಲೆ ಪಾದವಿಟ್ಟನು. ಪ್ರಯಾಣಿಕ ಮುಳುಗದೆ ನೀರಿನ ಮೇಲೆ ನಡೆಯತೊಡಗಿದ. ಕೊನೆಗೆ ಆಶ್ಚರ್ಯಚಕಿತನಾಗಿ ನೀರಿನ ಮೇಲಿದ್ದ ಎಲೆಯಲ್ಲಿ ಏನಿದೆಯೋ? ಎಂದು ಬಿಡಿಸಿ ನೋಡಿದಾಗ ಅದರ ಮೇಲೆ “ಶ್ರೀರಾಮ” ಬರೆದಿತ್ತು. ಅಯ್ಯೋ ಇಷ್ಟೆನಾ! ಎಂದಾಗ ಪ್ರಯಾಣಿಕನ ಶೃದ್ಧೆ ಕರಗಿತ್ತು. ಹಾಗೆ ಅವನು ನೀರಿನಲ್ಲಿ ಮುಳುಗಿದ. ಅಂತಲೇ ಶೃದ್ಧೆಯೇ ಸಾರ್ಥಕ ಬದುಕಿನ ಮೆಟ್ಟಿಲಾಗಬೇಕು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...