Home / ಲೇಖನ / ಇತರೆ / ಬಾಳಿನಲ್ಲಿ ಶೃದ್ಧೆ

ಬಾಳಿನಲ್ಲಿ ಶೃದ್ಧೆ

ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತನುವು ತೊಡಗಿಸಿಕೊಂಡರೂ ಅವನ ಮನಸ್ಸು ಇನ್ನಾವುದೋ ವಿಚಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಜೀವನದಲ್ಲಿ ಸಾರ್ಥಕವಾದ ಕಾರ್ಯ ಮಾಡಲಾರನು.

ಈಗ ಅನೇಕ ಸಲ ಕಚೇರಿಯಲ್ಲಿ ನಾವು ನೋಡುತ್ತೇವೆ. ಕಾರ್ಯ ನಿರ್ವಹಿಸುವ ಆ ಕಚೇರಿಯ ಸಿಬ್ಬಂದಿ ವರ್ಗದವರು ಕಾರ್ಯ ಮಾಡುತ್ತಿರುವಾಗಲೇ ಇನ್ನಾವುದೋ ಮಾತುಗಳಲ್ಲಿ, ವಿಷಯಗಳಲ್ಲಿ ತೇಲಾಡುತ್ತಾರೆ. ಹೀಗಾಗುವುದರಿಂದ ಲೆಕ್ಕ ತಪ್ಪಾಗಬಹುದು. ಅವಘಡಕ್ಕೆ ಕಾರಣವಾಗಬಹುದು. ಬ್ಯಾಂಕಿನಲ್ಲಿ ನಗದು ಗುಮಾಸ್ತ ತನ್ನ ಗ್ರಾಹಕರಿಗೆ ನೀಡುವ ಪ್ರತಿಯೊಂದು ಚೆಕ್ಕಿನ ಬಗ್ಗೆಯೂ ಲೆಕ್ಕವಿರಬೇಕು. ತುಸು ಅಲಕ್ಷ್ಯವಾದರೂ ಕೈಯಿಂದ ಕಾಸು ಕಳೆದುಕೊಳ್ಳಬೇಕಾಗುತ್ತದೆ.

ಮನೆಯಲ್ಲಿ ನಾರಿಯರು ಮನೆಗೆಲಸಗಳನ್ನು ಮಾಡುವಾಗ ಯಾವ ಕಾರ್ಯ ಮಾಡುತ್ತಿರುತ್ತಾರೋ ಅದರಲ್ಲಿಯೇ ಅವರ ಮನಸ್ಸಿರಬೇಕು. ಅಡುಗೆ ಮಾಡುವಾಗ ಬಟ್ಟೆ ಒಗೆಯುವ ಬಗ್ಗೆ, ಬಟ್ಟೆ ತೊಳೆಯುವಾಗ ಪಾತ್ರೆ ಸ್ವಚ್ಛಗೊಳಿಸುವ ಬಗ್ಗೆ ಚಿಂತನೆ ಮಾಡಿದರೆ ಈಗಿರುವ ಕೆಲಸ ಮತ್ತು ಮಾಡಬೇಕಾದ ಕೆಲಸಗಳೂ ಹಾಳಾಗುತ್ತವೆ.

ನಮ್ಮ ಶೃದ್ಧೆ ಕೇವಲ ಕಾರ್ಯದ ಮೇಲೆ ಮಾತ್ರ ಇರದೆ ಹಿರಿಯರ ಮಾತುಗಳನ್ನು ಸಹ ನಾವು ಶೃದ್ಧೆಯಿಂದ ಕೇಳಿ ನಿರ್ವಹಿಸವಬೇಕು. ಅವರು ಹೇಳುವ ಕಾಟಾಚಾರಕ್ಕೆ ಕಾರ್ಯ ನಿರ್ವಹಿಸಿದರೆ ಅವರಿಗೂ ಖುಷಿ ಕೊಡುವುದಿಲ್ಲ. ಮತ್ತು ಕಾರ್ಯವೂ ಶಿಸ್ತಾಗುವುದಿಲ್ಲ.

ಶ್ರೀ ರಾಮಕೃಷ್ಣ ಪರಮಹಂಸರು ಒಂದು ಪುಟ್ಟ ಕಥೆ ಹೇಳುತಿದ್ದರು. ಓರ್ವ ಪ್ರಯಾಣಿಕ ದಾರಿಯಲ್ಲಿ ನಡೆದು ನದಿ ತೀರಕ್ಕೆ ಬಂದಿದ್ದ. ನದಿ ದಾಟಿ ಆಚೆಗೆ ಹೋಗುವ ಪಸ್ರಂಗ, ನದಿಯಲ್ಲಿ ತುಂಬ ಜಾಸ್ತಿ ನೀರಿತ್ತು. ಹಿಂತಿರುಗಿ ಹೋಗಲು ಕತ್ತಲಾಗುತಿತ್ತು. ಏನೂ ತೋಚದೆ ನಿಂತಿರಲು ಅಲ್ಲೋರ್ವ ಸಾಧು ಈ ಪ್ರಯಾಣಿಕನ ಹೊಯ್ದಾಟ ಕಂಡು ಹತ್ತಿರಕ್ಕೆ ಕರೆದು ಒಂದು ಎಲೆಯ ಮೇಲೆ ಏನೋ ಬರೆದು ಈ ಪ್ರಯಾಣಿಕನ ಕೈಗಿತ್ತು. ‘ಹೋಗು ನೀನು ಈ ನೀರಿನ ಮೇಲಿಂದ ನಡೆದುಕೊಂಡು ಹೋಗಬಹುದು’ ಎಂದರು. ಪ್ರಯಾಣಿಕನು ಸಂತಸಗೊಂಡು ಸಾಧುವಿಗೆ ಅಭಿನಂದನೆ ಹೇಳಿ ಅದನ್ನು ಪಡೆದು ನೀರ ಮೇಲೆ ಪಾದವಿಟ್ಟನು. ಪ್ರಯಾಣಿಕ ಮುಳುಗದೆ ನೀರಿನ ಮೇಲೆ ನಡೆಯತೊಡಗಿದ. ಕೊನೆಗೆ ಆಶ್ಚರ್ಯಚಕಿತನಾಗಿ ನೀರಿನ ಮೇಲಿದ್ದ ಎಲೆಯಲ್ಲಿ ಏನಿದೆಯೋ? ಎಂದು ಬಿಡಿಸಿ ನೋಡಿದಾಗ ಅದರ ಮೇಲೆ “ಶ್ರೀರಾಮ” ಬರೆದಿತ್ತು. ಅಯ್ಯೋ ಇಷ್ಟೆನಾ! ಎಂದಾಗ ಪ್ರಯಾಣಿಕನ ಶೃದ್ಧೆ ಕರಗಿತ್ತು. ಹಾಗೆ ಅವನು ನೀರಿನಲ್ಲಿ ಮುಳುಗಿದ. ಅಂತಲೇ ಶೃದ್ಧೆಯೇ ಸಾರ್ಥಕ ಬದುಕಿನ ಮೆಟ್ಟಿಲಾಗಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...