Home / ಲೇಖನ / ಇತರೆ / ಮೊದಲ ಕತೆ

ಮೊದಲ ಕತೆ

ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿದ್ದರು. ಒಮ್ಮೆ ಸಭೆಯಲ್ಲಿ ಒಬ್ಬ ಎದ್ದು ನಿಂತು- “ನಮ್ಮ ಸಂಸ್ಕೃತಿ ಮೊದಲೋ? ವಿಶ್ವದ ದೇವರುಗಳು ಮೊದಲೋ?” ಎಂದು ಪ್ರಶ್ನಿಸಿರ್ದ.

ಇಡೀ ಸಭೆಯೇ ನಿಶ್ಯಬ್ದವಾಯಿತು. ಅಲ್ಲಿದ್ದವರೆಲ್ಲ ಸ್ವಾಮಿ ವಿವೇಕಾನಂದರನ್ನು ಕುತೂಹಲದಿಂದ ನೋಡುತ್ತಾ ಕುಳಿತರು.

ಸ್ವಾಮಿ ವಿವೇಕಾನಂದರು- “ನನಗಿಂದು ಭಲೇ ಖುಷಿಯಾಗುತ್ತಿದೆ. ನನ್ನ ನೂರಾರು ಭಾಷಣ ಇಲ್ಲಿ ಚಿಕಾಗೋ ನಗರದಲ್ಲಿ ಪ್ರಭಾವ ಬೀರಿದೆಯೆನಿಸುವುದು ಬಹಳ ಒಳ್ಳೆಯ ಪ್ರಶ್ನೆಯನ್ನೇ ನೀವು ಕೇಳಿರುವಿರಿ. ಇದೊಂದು ಬೀಜವೃಕ್ಷದ ನ್ಯಾಯವಿದ್ದಂತೇ… ಮರ ಮೊದಲೋ? ಬೀಜ ಮೊದಲೋ? ಎಂಬ ಗಂಭೀರವಾದ ವಾದ ವಿವಾದ! ಸಂಸ್ಕೃತಿ ದೇವರು ಏಕಕಾಲದಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಮನುಷ್ಯ ದೇವರನ್ನು ಸೃಷ್ಠಿಸಿದ ಎನ್ನುವ ವಾದ ಉದ್ಧಂಡತನವಾದ. ದೇವರು ಮೊದಲು, ನಂತರ ಮನುಷ್ಯ, ಈವತ್ತು ಮನುಷ್ಯ ಇತರೆ ಮನುಷ್ಯರನ್ನು ಅರ್ಥ ಮಾಡಿಕೊಂಡಿಲ್ಲ. ತನ್ನನ್ನು ತಾನು ಅರಿತಿಲ್ಲ. ಇನ್ನು ಗೌರವ ಕೊಡುವುದಿಲ್ಲ ಇವರೆಲ್ಲ ಮನುಷ್ಯರಲ್ಲ, ರಕ್ಕಸರು, ರಾವಣರು, ಸೈತಾನರು, ದೇವರು ಮನುಷ್ಯರೊಳಗಿರುವುದರಿಂದ ಒಬ್ಬರಿಗೆ ಒಬ್ಬರು ಪರಸ್ಪರ ಗೌರವ ಕೊಡುವ ತೆಗೆದುಕೊಳ್ಳುವುದನ್ನು ಮೊದಲು ಕಲಿತುಕೊಳ್ಳಬೇಕು! ಆಗಲೇ ದೇವರ ಮೇಲೆ ನಂಬಿಕೆ, ಭಕ್ತಿ, ಗೌರವ, ಮೂಡುವುದು.

ದೇವರ ಅಸ್ತಿತ್ವವಿರುವುದರಿಂದಲೆ ಎಲ್ಲರೂ ಭಯ, ಭಕ್ತಿ, ನೆಮ್ಮದಿಯಿಂದ ಜೀವನ ಮಾಡುತ್ತಿರುವುದು. ಇಲ್ಲಿ ನಮ್ಮಲ್ಲಿ ನೆಮ್ಮದಿಗೆ, ಸುಖ, ಸಂತೋಷಕ್ಕೆ, ಸಾವಿರಾರು ಮಾರ್‍ಗಗಳಿವೆ. ಏಕೆಂದರೆ… ದೇವರಿದ್ದಾನೆಂಬ ಒಂದೇ ಒಂದು ಕಾರಣಕ್ಕೇ… ಸಿದ್ಧಾಂತ, ತತ್ವ, ನಂಬಿಕೆ, ರಚನೆಯ ಆಧಾರದ ಮೇಲೆ ಸಂಸ್ಕೃತಿ- ದೇವರ ಅಸ್ಥಿತ್ವ ಕೂಡಾ… ನಿರ್‍ಧಾರವಾಗುವುದು” ಎಂದು ವಿವರಿಸುತ್ತಾ ನಿಂತರು.

ಅಲ್ಲಿದ್ದವರೇನು… ಪ್ರಶ್ನೆ ಕೇಳಿದ ವ್ಯಕ್ತಿ ಕೂಡಾ ಸ್ವಾಮಿ ವಿವೇಕಾನಂದರ ಪ್ರತಿಭೆ, ವಿದ್ವತ್ತು, ಕಂಚಿನಂಥಾ ಕಂಠಶ್ರೀಗೆ ನಿಬ್ಬೆರಗುಗೊಂಡನಲ್ಲದೆ, “ಸ್ವಾಮಿಗಳೆ… ಇಂದು ನಮ್ಮ ಕಣ್ಣು ತೆರೆಸಿದ್ದೀರಿ. ನಿಮ್ಮ ದೇವರು ನಮಗೆ ಗಾಡ್ ಆಗುವುದು. ನಮ್ಮ ವರ್ಷಿಪ್, ಫೇತ್‌, ಇಕ್ವಾಲಿಟಿ, ಬಿಲೀಫ್, ರೈಸ್… ನಿಮಗೆ ಅನ್ನ ದೇವರು- ಪೂಜೆ ವಿಶ್ವಾಸ, ಸಮಾನತೆ, ನಂಬಿಕೆ… ಇತ್ಯಾದಿ ರೂಪದಲ್ಲಿ ಕಾಣುವುದು!” ಎಂದು ಒಪ್ಪಿಕೊಂಡನಲ್ಲದೆ, ಸ್ವಾಮಿಗಳಿಗೆ ಅಡ್ಡಬಿದ್ದು ಹೊರಟ.

ಅಲ್ಲಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ಸ್ವಾಮಿ ವಿವೇಕಾನಂದರಿಗೆ ಏನೋ ಸಾಧಿಸಿದ ತೃಪ್ತಿ, ಆನಂದ ಲಭಿಸಿತು. ತಿಳಿಯದಲೇ… ಜನರತ್ತ ಕೈಬೀಸಿ ಸಂಭ್ರಮಿಸಿದರು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...