Home / ಕವನ / ಅನುವಾದ / ಬೇಹುಲಾಳ ಎಂದೆಂದೂ ಮುಗಿಯದ ಕಥೆ

ಬೇಹುಲಾಳ ಎಂದೆಂದೂ ಮುಗಿಯದ ಕಥೆ

ಮೂಲ: ಸುತಪಾ ಸೇನ್‌ಗುಪ್ತ

ಆಮೇಲೆ ನನ್ನ ನಾದಿನಿ ಮನೆಗೆ ಹೋದೆ,
ಅತ್ತೆ ಮಾವಂದಿರನ್ನು ಒಲಿಸಿ ಮೆಚ್ಚಿಸಿದೆ.
ತೃಪ್ತಿಗೊಂಡ ಹಿರಿಯರು ಸರ್ಪಬಂಧನ ಬಿಚ್ಚಿ
ಮುಕ್ತಳಾಗಿಸಿದರು.
ಆದರೂ ಪೂರ್ತಿ ವಿಷ ಆರಿಲ್ಲ ಈಗಲೂ;
ನನಗೀಗ ಏನನ್ನೂ ಮಾಡಲಾಗುತ್ತಿಲ್ಲ,
ಲೇಖನಿ ಓಡುತ್ತಿಲ್ಲ,
ನಾಲಿಗೆ ಚಾಚಿದೆ ಸರ್ಪ ಲೇಖನಿ ತುದಿಯಲ್ಲೂ
ನೂರು ಸುಖಗಳ ಮಧ್ಯೆ ಮುಳುಗಿರುವ ಹೊತ್ತಲ್ಲೂ
ಮುತ್ತಿ ಕಾಡುತ್ತವೆ ಪಟ್ಟಪಾಡಿನ ನೆನಪು.
ಹಾಗೆಂದೆ ನಾನೀಗ ಎಲ್ಲ ನೋವುಗಳಿಂದ ಪೂರ ಮುಕ್ತಿ.
ಪಟ್ಟ ದುಃಖದ ಬಗ್ಗೆ ಹೆಮ್ಮೆಯಿಂದಿದ್ದೇನೆ,
ಕಟ್ಟಿಕೊಂಡಿರುವೆ ಮತ್ತೆ ನಿಧಾನವಾಗಿ
ನೆಲದ ಸ್ನೇಹಗಳನ್ನ;
ನನ್ನವರ ನಡುವೆಯೇ ಇದ್ದೂ ನಾ ಏಕಾಂಗಿ
ಸ್ವಭಾವದೋಷಗಳಿಂದ,
ಇಷ್ಟಪಟ್ಟಿದ್ದೆಲ್ಲ ದೂರ ಸುರಿಯುತ್ತಿವೆ ದುರದೃಷ್ಟದಿಂದ.
ನೂರು ತಿಂಗಳ ನೋವಿನಾಲೆಯಲ್ಲಿ ನುರಿದು
ಗಾಢ ಕತ್ತಲೆಯ ಮೈದಾಳಿದಂತಿರುವೆ
ನನ್ನ ಇಡಿ ಬಾಳಲ್ಲೆ ಈ ನೋವಿನವಧಿ
ತೀರ, ತೀರ ಅಮೂಲ್ಯ.
*****

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...