Home / ಕವನ / ಕೋಲಾಟ / ಬಂಗಾರದ ಎಲೆ ಮೇಲೆ ಸಿರಿ ಬರಲಿ

ಬಂಗಾರದ ಎಲೆ ಮೇಲೆ ಸಿರಿ ಬರಲಿ

ತಾನ ತಂದ್ರನಾನಾ ನಾನಾ ತಂದ್ರನಾನಾ
ತಂದನೊಂದಾನೋ ತಂದಾನಂದ್ರನಾನಾ
ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ
ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ

ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ
ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ
ಹಾರನೇ ಪೊಗಡೇ ಕಟ್ಟನೆ ನಾರಾಯಣ ಸ್ವಾಮೀ
ಕೈಕಾಲ್ ಮೊರೇನೇ ತೊಲ್ದ ನಾರಾಯಣ ಸ್ವಾಮೀ

ಕಟ್ಟಿಗೆ ಹಾಶೆ ಮೇನೇ ಕುಂತ ನಾರಾಯಣ ಸ್ವಾಮೀ
ಪಟ್ಟೆಶಂಚೀಯಾ ಬಿಡ್ಶಾನ ನಾರಾಯಣ ಸ್ವಾಮೀ
ರಾಯರೆ ಹಣ್ಣಡಕ್ಕೇ ತೆಗ್ದಾ ನಾರಾಯಣ ಸ್ವಾಮೀ
ಉಕ್ಕಿನಾ ಶೂರೀ ತೆಗ್ದಾ ನಾರಾಯಣ ಸ್ವಾಮೀ

ವಡ್ಡಿ ಮೂರೆ ಹೋಲಾ ಮಾಡನೆ ನಾರಾಯಣ ಸ್ವಾಮೀ
ನಾಗಬಲ್ಲೀಯಾ ಶರೆತಿಗ್ದೀ ನಾರಾಯಣ ಸ್ವಾಮೀ
ಹಾಲಲೇ ಚಂದಾ ಹಣೆಸುಣ್ಣ ತೆಗ್ದೀ ನಾರಾಯಣ ಸ್ವಾಮೀ
ಈಲೆದೊಂದು ಕಲ್ಲಾ ಮೇದಾ ನಾರಾಯಣ ಸ್ವಾಮೀ
ಕತ್ರೆಸ್ ಕರೀ ರುಂಡಾ ಉಲ್ಗಾನ ನಾರಾಯಣ ಸ್ವಾಮೀ
ಕಂಬುಲೀ ಹಾಶುಗಿ ಮಾಡನು ನಾರಾಯಣ ಸ್ವಾಮೀ
ಯೆಣ್ಣಗಂಬುಲೀ ಹೊದ್ಕೆಯ ಮಾಡ್ಕಂಡೀ

ಶಯನ ಮಾಡಿನ್ನೇ ವರ್ಗಾನೆ ನಾರಾಯಣ ಸ್ವಾಮೀ
ಹಿಮದಾ ಗಾಲೀ ಬೀಸದ ನಾರಾಯಣ ಸ್ವಾಮೀ
ಮಾಯದಾ ನಿದ್ರೀ ಬೀಲ್ವದೆ ನಾರಾಯಣ ಸ್ವಾಮೀ
ತಾನ ತಂದ್ರನಾನಾ ನಾನಾ ತಂದ್ರನಾನಾ
*****
ಹೇಳಿದವರು: ದಿಂಬೆ ಕುಪ್ಪ ಗೌಡ ಮತ್ತು ಕುಪ್ಪ ಮಾಟುಗೌಡ, ಕೂಜಳ್ಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...