Home / ಕವನ / ಕೋಲಾಟ / ಬಂಗಾರದ ಎಲೆ ಮೇಲೆ ಸಿರಿ ಬರಲಿ

ಬಂಗಾರದ ಎಲೆ ಮೇಲೆ ಸಿರಿ ಬರಲಿ

ತಾನ ತಂದ್ರನಾನಾ ನಾನಾ ತಂದ್ರನಾನಾ
ತಂದನೊಂದಾನೋ ತಂದಾನಂದ್ರನಾನಾ
ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ
ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ

ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ
ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ
ಹಾರನೇ ಪೊಗಡೇ ಕಟ್ಟನೆ ನಾರಾಯಣ ಸ್ವಾಮೀ
ಕೈಕಾಲ್ ಮೊರೇನೇ ತೊಲ್ದ ನಾರಾಯಣ ಸ್ವಾಮೀ

ಕಟ್ಟಿಗೆ ಹಾಶೆ ಮೇನೇ ಕುಂತ ನಾರಾಯಣ ಸ್ವಾಮೀ
ಪಟ್ಟೆಶಂಚೀಯಾ ಬಿಡ್ಶಾನ ನಾರಾಯಣ ಸ್ವಾಮೀ
ರಾಯರೆ ಹಣ್ಣಡಕ್ಕೇ ತೆಗ್ದಾ ನಾರಾಯಣ ಸ್ವಾಮೀ
ಉಕ್ಕಿನಾ ಶೂರೀ ತೆಗ್ದಾ ನಾರಾಯಣ ಸ್ವಾಮೀ

ವಡ್ಡಿ ಮೂರೆ ಹೋಲಾ ಮಾಡನೆ ನಾರಾಯಣ ಸ್ವಾಮೀ
ನಾಗಬಲ್ಲೀಯಾ ಶರೆತಿಗ್ದೀ ನಾರಾಯಣ ಸ್ವಾಮೀ
ಹಾಲಲೇ ಚಂದಾ ಹಣೆಸುಣ್ಣ ತೆಗ್ದೀ ನಾರಾಯಣ ಸ್ವಾಮೀ
ಈಲೆದೊಂದು ಕಲ್ಲಾ ಮೇದಾ ನಾರಾಯಣ ಸ್ವಾಮೀ
ಕತ್ರೆಸ್ ಕರೀ ರುಂಡಾ ಉಲ್ಗಾನ ನಾರಾಯಣ ಸ್ವಾಮೀ
ಕಂಬುಲೀ ಹಾಶುಗಿ ಮಾಡನು ನಾರಾಯಣ ಸ್ವಾಮೀ
ಯೆಣ್ಣಗಂಬುಲೀ ಹೊದ್ಕೆಯ ಮಾಡ್ಕಂಡೀ

ಶಯನ ಮಾಡಿನ್ನೇ ವರ್ಗಾನೆ ನಾರಾಯಣ ಸ್ವಾಮೀ
ಹಿಮದಾ ಗಾಲೀ ಬೀಸದ ನಾರಾಯಣ ಸ್ವಾಮೀ
ಮಾಯದಾ ನಿದ್ರೀ ಬೀಲ್ವದೆ ನಾರಾಯಣ ಸ್ವಾಮೀ
ತಾನ ತಂದ್ರನಾನಾ ನಾನಾ ತಂದ್ರನಾನಾ
*****
ಹೇಳಿದವರು: ದಿಂಬೆ ಕುಪ್ಪ ಗೌಡ ಮತ್ತು ಕುಪ್ಪ ಮಾಟುಗೌಡ, ಕೂಜಳ್ಳಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...