Home / ಲೇಖನ / ವಿಜ್ಞಾನ / ಸಮುದ್ರದ ನೀರನ್ನು ಸಿಹಿಗೊಳಿಸಬಹುದು

ಸಮುದ್ರದ ನೀರನ್ನು ಸಿಹಿಗೊಳಿಸಬಹುದು

ಸಮುದ್ರ ನೀರಿನಿಂದ ತುಂಬಿದ್ದರು ಅದು ಉಪ್ಪು ನೀರಾದ್ದರಿಂದ ಯಾರೂ ಕುಡಿಯಲಾರರು. ನಮ್ಮ ಪೃಥ್ವಿಯನ್ನು ಆವರಿಸಿರುವ ನೀರಿನಲ್ಲಿ ಶೇ. ೯೭ ರಷ್ಟು ಭಾಗ ಸಾಗರಗಳಿಂದಲೇ ತುಂಬಿದೆ ಶೇ. ೨ ರಷ್ಟು ಮಾತ್ರನೀರು ದ್ರವ ಪ್ರದೇಶದಲ್ಲಿ ಮಂಜಿನ ಟೋಪಿಗಳಂತೆ ನಿಂತಿದೆ. ಉಳಿದ ಶೇ. ಒಂದು ಭಾಗ ಮಾತ್ರ ಕುಡಿಯಲು ಯೋಗ್ಯವಾಗಿದೆ. ಆದಾಗ್ಯೂ ಈ ಒಂದು ಪರ್ಸಂಟು ನೀರಿನಲ್ಲೂ ಹಲವು ಭಾಗ ಭೂಗರ್ಭದಲ್ಲಿ ಸೇರಿರುವುದರಿಂದ ನಾವು ಉಪಯೋಗಿಸುವುದು ಕೇವಲ ೦.೬ ಭಾಗ ಮಾತ್ರವೆಂದರೆ ಆಶ್ಚರ್ಯವೇ? ಶೇ. ೯೭ ರಷ್ಟು ವ್ಯಾಪಿಸಿರುವ ಸಮುದ್ರದ ನೀರನ್ನು ಸಿಹಿಗೊಳಿಸಿ ಉಪಯೋಗಿಸುವುದು ಹೇಗೆ? ಸಾಗರ ಜಲದಿಂದ ಉಪ್ಪನ್ನು ಬೇರ್ಪಡಿಸುವುದು ಭೌತಶಾಸ್ತ್ರ, ರಸಾಯನಶಾಸ್ತ್ರ ಜೀವಶಾಸ್ತ್ರ, ಮತ್ತು ಅರ್ಥಶಾಸ್ತ್ರಗಳ ಮೆಧಾವಂತರು ಒಟ್ಟಿಗೆ ಕುಳಿತು ಪ್ರಯತ್ನಿಸಿದರೆ ಈ ಉಪ್ಪು ನೀರು ಸಿಹಿಯಾಗಬಹುದು. ನಿರಂತರ ಸಂಶೋಧನೆಗಳ ಫಲವಾಗಿ ಸಮುದ್ರದಿಂದ ಕುಡಿಯುವ ನೀರನ್ನು ತಯಾರಿಸುವ ಹಲವು ವಿಧಾನಗಳು ಬೆಳಕಿಗೆ ಬಂದಿವೆ. ಅವು ಈಗ ಅಚ್ಚರಿಯಲ್ಲಿಯೂ ಇವೆ. ನಿಲವರ್ಣೀಕರಣ ವಿಧಾನದಲ್ಲಿ ಮುಖ್ಯವಾಗಿ ದ್ರಾವಣದಿಂದ (ಉಪ್ಪು ನೀರಿನಿಂದ) ಶುದ್ಧನೀರನ್ನು ಬೇರ್‍ಪಡಿಸುವ ಮತ್ತು ದ್ರಾವಣದಿಂದ ಲವಣಗಳನ್ನು ಬೇರ್ಪಡಿಸುವ ವಿಧಾನಗಳೇ ಪ್ರಧಾನವಾಗಿದೆ. ಭಟ್ಟಿ ಇಳಿಸುವಿಕೆ ಅಥವಾ ಆವಿ ಗೊಳಿಸುವಿಕೆ, ಹೆಪ್ಪುಗಟ್ಟಿಸುವಿಕೆ ಮತ್ತು ಸೌರ ಶಕ್ತಿಯಿಂದ ಆವಿಗೊಳಿಸುವಿಕೆ ಇವು ಮೊದಲನೆ ವರ್ಗಕ್ಕೆ ಸೇರಿದ ಮುಖ್ಯವಿಧಾನಗಳು. ದ್ರಾವಣದಿಂದ ಲವಣಗಳನ್ನು ಬೇರ್ಪಡಿಸುವ ವಿಧಾನಗಳಲಿ ಪ್ರಮುಖವಾದುದು ವಿದ್ಯುತ್‌ಶಕ್ತಿಯ ಸಹಾಯದಿಂದ ನಡೆಸುವ ಪಾರ ಪೃಥಕ್ಕ್ರರಣ (ಎಲೆಕ್ಟ್ರೋಡಯಾಲಿಸಿಸ್)

ಭಟ್ಟಿ ಇಳಿಸುವಿಕೆ : ಸಮುದ್ರದ ನೀರನ್ನು ಒಂದು ಪಾತ್ರೆಯೊಳಗಿಟ್ಟು (ಬಾಯ್ಲರ್) ಕುದಿಸಿದರೆ ಆವಿಯು ಮೇಲೇರಿ ಅಡಿಯಲ್ಲಿ ಲವಣಗಳು ಉಳಿಯುತ್ತವೆ. ಕುಡಿಯುವ ನೀರಿನಿಂದೆದ್ದ ಆವಿಯನ್ನು ತಂಪು ಮಾಡುವುದರಿಂದ ಕುಡಿಯಲು ಯೋಗ್ಯವಾದ ಶುದ್ದನೀರು ದೊರೆಯುತ್ತದೆ.

ಸೂರ್ಯನ ಶಕ್ತಿಯಿಂದ: ಸಮುದ್ರದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲು ಸೌರಶಕ್ತಿಯನ್ನು ಉಪಯೋಗಿಸಬಹುದು. ಇದಕ್ಕೆ ಉರುವಲು ಖರ್ಚು ಇಲ್ಲ. ವಿದ್ಯುತ್ ಶಕ್ತಿಯೂ ಬೇಕಿಲ್ಲ ಸೂರ್ಯನ ಬೆಳಕನ್ನು ಹೀರುವಂತೆ ಕಪ್ಪು ಬಣ್ಣವನ್ನು ಸಮುದ್ರದ ನೀರಿನಿಂದ ತುಂಬಿದ ಪಾತ್ರೆಯ ತಳಭಾಗಕ್ಕೆ ಲೇಪಿಸಿ ಆ ಪಾತ್ರೆಯನ್ನು ಶಾಖನಿರೊಧಕ ಕವಚದಲ್ಲಿ ಕೂಡಿಸಬೇಕು. ಇದರ ಮುಚ್ಚಳ ಗಾಜಿನದಿದ್ದು ಓಲುವಂತೆ ಕೂಡಿಸಲಾಗುತ್ತದೆ. ಸೂರ್ಯನ ಶಾಖದ ಪರಿಣಾಮದಿಂದ ಉತ್ಪತ್ತಿಯಾಗುವ ನೀರಿನ ಆವಿಯು ಮೇಲೆರುತ್ತಿದ್ದಂತೆ ಇಳಿಜಾರಿನಂತಿದ್ದ ಗಾಜಿನ ಮುಚ್ಚಿಳದಿಂದ ತಡೆಯಲ್ಪಟ್ಟು ನೀರಿನ ಹನಿಗಳಾಗಿ ಹರಿದು ಅಡಿಯಲ್ಲಿಟ್ಟಿರುವ ವಿಶೇಷ ಪಾತ್ರೆಯಲ್ಲಿ ಶೇಖರವಾಗುತ್ತದೆ. ಈ ವಿಧಾನದ ಮುಖ್ಯ ಅನಾನುಕೂಲವೆನೆಂದರೆ ಇದು ಪ್ರಕೃತಿ ನಿಯಂತ್ರಿತವಾದುದು. ಸೂರ್ಯನ ಬೆಳಕಿದ್ದಾಗ ಈ ವಿಧಾನ ಕಾರ್ಯ ಸಾಧ್ಯ.

ಹೆಪ್ಪುಗಟಿಸುವಿಕೆ : ಸಮುದ್ರದ ನೀರನ್ನು ಹೆಪ್ಪುಗಟ್ಟಿಸುವುದರಿಂದ ಲವಣ ರಹಿತ ಮಂಜಿನ ಹರಳುಗಳು ಲವಣಗಳಿಂದ ಬೇರೆಯುತ್ತವೆ. ಕೊಂಚವೇ ಶಾಖವನ್ನು ಉಪಯೋಗಿಸಿದರೆ ಸಾಕು. ಸಮುದ್ರದ ನೀರು ಮಂಜುಗಡ್ಡೆಯಾಗುತ್ತದೆ. ಈ ಮಂಜುಗಡ್ಡೆಯನ್ನು ಮಾಡಿ ಕರಗಿಸಿದರೆ ಒಳ್ಳೆಯ ಕುಡಿಯುವ ನೀರು ಲಭಿಸುತ್ತದೆ.

ವಿದ್ಯುತ್ ಶಕ್ತಿ ಸಹಾಯದಿಂದ : ಅತಿಸೂಕ್ಷ್ಮವಾದ ಪೊರೆಯಂತಹ ಪದರುಗಳನ್ನು ರಾಸಾಯನಿಕವಾಗಿ ಸಿದ್ಧಗೊಳಿಸಿ ಅದರ ಮೂಲಕ ಸಮುದ್ರದ ನೀರನ್ನು ಹಾಯಿಸಿ ಒಳ್ಳೆಯ ನೀರನ್ನು ಪಡೆಯಬಹುದು. ಈ ವಿಧಾನಕ್ಕೆ “ಪಾರಪೃಧಕ್ಕರಣ” ಎಂದು ಹೆಸರು. ಪೊರೆಗಳ ಮೂಲಕ ಸಮುದ್ರದ ನೀರನ್ನು ಪಂಪ್‍ಮಾಡಿ ವಿದ್ಯುತ್ತನ್ನು ಹರಿಸುವುದರಿಂದ ಅವುಗಳ ಒಂದು ಪಕ್ಕಕ್ಕೆ ಲವಣಾಂಶರಹಿತ ಕುಡಿಯುವ ನೀರು, ಮತ್ತೊಂದು ಪಕ್ಕಕ್ಕೆ ಲವಣಗಳು ಶೇಖರವಾಗುತ್ತವೆ. ಇದಕ್ಕೆ ಕಾರಣ ಲವಣಗಳನ್ನು ವಿದ್ಯುತ್ತು ಆಕರ್ಷಿಸುವುದೇ ಆಗಿದೆ. ಈ ಪೂರೆಗಳು ಆಯಾಣು ವಿನಿಮಯ ರಾಳಗಳಂತೆ ಕೆಲಸ ಮಾಡುತ್ತವೆ. ಈ ವಿಧಾನವು ಇನ್ನು ಪರಿಶೋಧನೆಯ ಘಟ್ಟದಲ್ಲಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...