Home / ಲೇಖನ / ವಿಜ್ಞಾನ / ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಇತ್ತೀಚೆಗೆ ಮನುಷ್ಯನಲ್ಲಿ ಉಂಟಾಗುವ ಅಂಗ ವೈಕಲ್ಯತೆಗಳ ಬಗೆಗೆ ಹಲವು ಶೋಧನೆಗಳು ನಡೆದಿದ್ದು ಕೆಲವು ಸತ್ಯಗಳು ಈ ರೀತಿ ಹೊರಬಿದ್ದಿವೆ.
೧. ಹೆಣ್ಣಿನ ಅಂಡಾಣುವು ಗಂಡಿನ ರೇತುಕಣವು ಹೊರಬಿದ್ದ ಮೇಲೆ ಹೊತ್ತುಕಳೆದಂತೆಲ್ಲ ಅವುಗಳ ಚೈತನ್ಯ ಕುಂದುತ್ತ ಬರುತ್ತದೆ. ಸಾಕಷ್ಟು ಚೈತನ್ಯವಿಲ್ಲದಂತಹ ಇಂಥವು ಒಂದುಗೂಡಿದರೆ ಹುಟ್ಟುವ ಪಿಂಡ ಸರಿಯಾಗಿ ಬೆಳೆಯದೇ ದುರ್ಬಲವಾಗುವದು ಇಲ್ಲವೇ ವಿಕಲಾಂಗವಾಗುವದು.

೨. ಗರ್‍ಭವತಿಯು ಔಷಧಿಯ ಪೂರ್‍ವಾಪರ ತಿಳಿಯದೇ ಸೇವಿಸುವದರಿಂದ ವಿಕಲಾಂಗ ಶಿಶುವಿಗೆ ಜನ್ಮಕೊಡುವ ಸಂಬಂಧಗಳು ಹೆಚ್ಚು.

೩. ಗರ್‍ಭಿಣಿ ಸ್ತ್ರೀಯ ಒಳಾಂಗಣವನ್ನು ಪರೀಕ್ಷಿಸುವ ಸಲುವಾಗಿ ಕ್ಷ-ಕಿರಣ ಸಹಾಯದಿಂದ ಛಾಯಾಚಿತ್ರ ತೆಗೆಯಬೇಕಾಗಬಹುದು. ಬೆಳೆಯುವ ಭ್ರೂಣದ ಮೇಲೆ ಈ ಕ್ಷ- ಕಿರಣಗಳು ಕೆಲವು ಸಲ ದುಷ್ಪರಿಣಾಮ ಬೀರಿ ವಿಕಲತೆನ್ನುಂಟು ಮಾಡಬಹುದು.

೪. ಗರ್‍ಭಧಾರಣೆಯ ಸಮಯದಲ್ಲಿ ಈ ವರ್ಣ ತಂತುಗಳ ಸಮ್ಮಿಲನ ಅಸ್ವಾಭಾವಿಕ ರೀತಿಯಲ್ಲಿ ಉಂಟಾದರೆ ಅಥವಾ ಪ್ರಕೃತಿಗೆ ವಿರುದ್ದವಾದ ಕ್ರಮದಲ್ಲಿ ಉಂಟಾದರೆ ವಿಕಲಾಂಗ ಶಿಶುಗಳು ಜನಿಸುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

೫. ವಿವಿಧ ಅಂಟುರೋಗಗಳಿಂದ ನರಳುತ್ತಿರುವ ಸ್ತ್ರೀಯು ವಿಕಲಾಂಗ ಶಿಶುಗಳಿಗೆ ಜನ್ಮ ನೀಡುವ ಸಂಭವವಿದೆ. ಗರ್ಭಿಣಿಸ್ತ್ರೀಯು ಕೋಪಿಷ್ಟೆಯಾದರೆ ಅವಳ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡಗಳು ಜನಿಸುವ ಶಿಶುವಿನ ಮೇಲೆ ಭೀಕರ ಪರಿಣಾಮ ಬೀರಬಲ್ಲವು. ಸ್ತ್ರೀಯು ನಿರ್ನಾಳ ಗ್ರಂಥೀಗಳಲ್ಲಿ ಪ್ರಮುಖವಾದ ಪಿಟ್ಯುಟರಿ ಗ್ರಂಥಿಯ ಸ್ರಾವದಲ್ಲಿನ ಹೆಚ್ಚಳ ಅಥವಾ ಇಳುವರಿಯಿಂದಾಗಿ ಉದ್ದನೆಯ ಅಥವಾ ತೆಳ್ಳನೆಯ ಶಿಶುವಿಗೆ ಜನ್ಮನೀಡಬಹುದು.

೬. ಕೂಡಿದ ಅಂಡಾಣುಗಳು (ಯುಗ್ಮ ಜೀವಕಣಗಳು) ಬೇರೆ ಬೇರೆಯಾಗಿದ್ದರೆ ಅವು ಅವಳಿ ಜವಳಿಯಾಗುತ್ತವೆ.

೭. ಅನೇಕ ಬಾರಿ ಗರ್ಭದಲ್ಲಿ ಕೂಡಿದ ಯುಗ್ಮಜೀವಕಣಗಳು ಕೋಶ ವಿಭಜನೆಯ ವಿವಿಧ ಹಂತಗಳಲ್ಲಿ ಬೇರ್ಪಡದೆ ಜೊತೆಗೂಡಿ ಇರುತ್ತವೆ. ಇದರಿಂದ ಹುಟ್ಟುವ ಶಿಶುಗಳಲ್ಲಿ ಸಾಮಾನ್ಯವಾಗಿ ತಲೆ, ಹೊಟ್ಟೆ, ಬೆನ್ನು ಮುಂತಾದ ಅಂಗಗಳು ಒಂದುಗೂಡುವ ಸಂಭವವಿದೆ.

೮. ಕಡುಬಡ ಜನರು ಆರೋಗ್ಯವಿಲ್ಲದೇ, ಜೀವಸತ್ವಗಳ ಆಹಾರಗಳ ಕೊರತೆ ಇದ್ದವರು ಪೌಷ್ಟಕಾಂಶಗಳ ಕೊರತೆ ಇದ್ದವರೂ ಜೀವ ಧಾತುಗಳ ಕೊರತೆ ಇದ್ದವರು ಇಂದಿನ ವಿಷಕಾರ ಮದ್ದುಗಳ ಗೊತ್ತು ಗುರಿ ಇಲ್ಲದ ಸೇವನೆ ಮಾಡುವ ಗಂಡ ಹೆಂಡಿರಿಂದ ಹುಟ್ಟುವ ಮಕ್ಕಳು ವಿಕಲಾಂಗವಾಗುತ್ತವೆ.

೯. ಇಂಥಹ ವೈಕಲ್ಯತೆಗಳಿಗೆ ಪ್ರಮುಖ ಕಾರಣಗಳನ್ನೂ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅನುವಂಶೀಯ ಮತ್ತು ಪರಿಸರದ ಪರಿಣಾಮಗಳು, ಕೆಲವು ವೈಕಲ್ಯತೆಗಳು ತಂದೆ, ಅಥವಾ ತಾಯಿಯಿಂದ ಕಾರಣವಾಗಿರಬಹುದು. ಮಗುವು ಕೈ ಬೆರಳು ಇಲ್ಲವೇ ಕಾಲುಬೆರಳಗಳನ್ನು ಮಾಮೂಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿರುವುದು ಸಂತತಿಯಿಂದ ಸಂತತಿಗೆ ಸಾಗಣೆಯಾಗಬಹುದು.

೧೦. ಅಂಗವೈಕಲ್ಯತೆಗೆ ಇನ್ನೊಂದು ಕಾರಣ ಸುತ್ತಲಿನ ಪರಿಸರ ಪರಮಾಣು ವಿಕಿರಣಗಳ ಪರಿಣಾಮಗಳು ಭ್ರೂಣದ ಮೇಲೆ ಬಹಳ ಪ್ರಭಾವ ಬೀರುವವು. ಅಂಥಹ ಪ್ರಭಾವವನ್ನು ಈಗಲೂ ನಾವು ಜಪಾನ್‌ನಲ್ಲಿ ಕಾಣಬಹುದು. ಮನುಷ್ಯ ಇಂದು ಕೃತಕವಾಗಿ ನಿರ್ಮಿಸುತ್ತಿರುವ ವಿಕಿರಣ ಕ್ರಿಯಾಶಕ್ತಿಯು ಸುತ್ತಲಿನ ಪರಿಸರವನ್ನು ಮಲೀನಗೊಳಿಸಿ ಭ್ರೂಣಗಳ ವಿಕಸನದ ಮೇಲೆ ದುಷ್ಪರಿಣಾಮ ಬೀರುತ್ತವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...