Home / ಲೇಖನ / ವಿಜ್ಞಾನ / ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಅಂಗ ವೈಕಲ್ಯತೆಗಳಿಗೆ ವೈಜ್ಞಾನಿಕ ಕಾರಣಗಳು

ಇತ್ತೀಚೆಗೆ ಮನುಷ್ಯನಲ್ಲಿ ಉಂಟಾಗುವ ಅಂಗ ವೈಕಲ್ಯತೆಗಳ ಬಗೆಗೆ ಹಲವು ಶೋಧನೆಗಳು ನಡೆದಿದ್ದು ಕೆಲವು ಸತ್ಯಗಳು ಈ ರೀತಿ ಹೊರಬಿದ್ದಿವೆ.
೧. ಹೆಣ್ಣಿನ ಅಂಡಾಣುವು ಗಂಡಿನ ರೇತುಕಣವು ಹೊರಬಿದ್ದ ಮೇಲೆ ಹೊತ್ತುಕಳೆದಂತೆಲ್ಲ ಅವುಗಳ ಚೈತನ್ಯ ಕುಂದುತ್ತ ಬರುತ್ತದೆ. ಸಾಕಷ್ಟು ಚೈತನ್ಯವಿಲ್ಲದಂತಹ ಇಂಥವು ಒಂದುಗೂಡಿದರೆ ಹುಟ್ಟುವ ಪಿಂಡ ಸರಿಯಾಗಿ ಬೆಳೆಯದೇ ದುರ್ಬಲವಾಗುವದು ಇಲ್ಲವೇ ವಿಕಲಾಂಗವಾಗುವದು.

೨. ಗರ್‍ಭವತಿಯು ಔಷಧಿಯ ಪೂರ್‍ವಾಪರ ತಿಳಿಯದೇ ಸೇವಿಸುವದರಿಂದ ವಿಕಲಾಂಗ ಶಿಶುವಿಗೆ ಜನ್ಮಕೊಡುವ ಸಂಬಂಧಗಳು ಹೆಚ್ಚು.

೩. ಗರ್‍ಭಿಣಿ ಸ್ತ್ರೀಯ ಒಳಾಂಗಣವನ್ನು ಪರೀಕ್ಷಿಸುವ ಸಲುವಾಗಿ ಕ್ಷ-ಕಿರಣ ಸಹಾಯದಿಂದ ಛಾಯಾಚಿತ್ರ ತೆಗೆಯಬೇಕಾಗಬಹುದು. ಬೆಳೆಯುವ ಭ್ರೂಣದ ಮೇಲೆ ಈ ಕ್ಷ- ಕಿರಣಗಳು ಕೆಲವು ಸಲ ದುಷ್ಪರಿಣಾಮ ಬೀರಿ ವಿಕಲತೆನ್ನುಂಟು ಮಾಡಬಹುದು.

೪. ಗರ್‍ಭಧಾರಣೆಯ ಸಮಯದಲ್ಲಿ ಈ ವರ್ಣ ತಂತುಗಳ ಸಮ್ಮಿಲನ ಅಸ್ವಾಭಾವಿಕ ರೀತಿಯಲ್ಲಿ ಉಂಟಾದರೆ ಅಥವಾ ಪ್ರಕೃತಿಗೆ ವಿರುದ್ದವಾದ ಕ್ರಮದಲ್ಲಿ ಉಂಟಾದರೆ ವಿಕಲಾಂಗ ಶಿಶುಗಳು ಜನಿಸುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

೫. ವಿವಿಧ ಅಂಟುರೋಗಗಳಿಂದ ನರಳುತ್ತಿರುವ ಸ್ತ್ರೀಯು ವಿಕಲಾಂಗ ಶಿಶುಗಳಿಗೆ ಜನ್ಮ ನೀಡುವ ಸಂಭವವಿದೆ. ಗರ್ಭಿಣಿಸ್ತ್ರೀಯು ಕೋಪಿಷ್ಟೆಯಾದರೆ ಅವಳ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡಗಳು ಜನಿಸುವ ಶಿಶುವಿನ ಮೇಲೆ ಭೀಕರ ಪರಿಣಾಮ ಬೀರಬಲ್ಲವು. ಸ್ತ್ರೀಯು ನಿರ್ನಾಳ ಗ್ರಂಥೀಗಳಲ್ಲಿ ಪ್ರಮುಖವಾದ ಪಿಟ್ಯುಟರಿ ಗ್ರಂಥಿಯ ಸ್ರಾವದಲ್ಲಿನ ಹೆಚ್ಚಳ ಅಥವಾ ಇಳುವರಿಯಿಂದಾಗಿ ಉದ್ದನೆಯ ಅಥವಾ ತೆಳ್ಳನೆಯ ಶಿಶುವಿಗೆ ಜನ್ಮನೀಡಬಹುದು.

೬. ಕೂಡಿದ ಅಂಡಾಣುಗಳು (ಯುಗ್ಮ ಜೀವಕಣಗಳು) ಬೇರೆ ಬೇರೆಯಾಗಿದ್ದರೆ ಅವು ಅವಳಿ ಜವಳಿಯಾಗುತ್ತವೆ.

೭. ಅನೇಕ ಬಾರಿ ಗರ್ಭದಲ್ಲಿ ಕೂಡಿದ ಯುಗ್ಮಜೀವಕಣಗಳು ಕೋಶ ವಿಭಜನೆಯ ವಿವಿಧ ಹಂತಗಳಲ್ಲಿ ಬೇರ್ಪಡದೆ ಜೊತೆಗೂಡಿ ಇರುತ್ತವೆ. ಇದರಿಂದ ಹುಟ್ಟುವ ಶಿಶುಗಳಲ್ಲಿ ಸಾಮಾನ್ಯವಾಗಿ ತಲೆ, ಹೊಟ್ಟೆ, ಬೆನ್ನು ಮುಂತಾದ ಅಂಗಗಳು ಒಂದುಗೂಡುವ ಸಂಭವವಿದೆ.

೮. ಕಡುಬಡ ಜನರು ಆರೋಗ್ಯವಿಲ್ಲದೇ, ಜೀವಸತ್ವಗಳ ಆಹಾರಗಳ ಕೊರತೆ ಇದ್ದವರು ಪೌಷ್ಟಕಾಂಶಗಳ ಕೊರತೆ ಇದ್ದವರೂ ಜೀವ ಧಾತುಗಳ ಕೊರತೆ ಇದ್ದವರು ಇಂದಿನ ವಿಷಕಾರ ಮದ್ದುಗಳ ಗೊತ್ತು ಗುರಿ ಇಲ್ಲದ ಸೇವನೆ ಮಾಡುವ ಗಂಡ ಹೆಂಡಿರಿಂದ ಹುಟ್ಟುವ ಮಕ್ಕಳು ವಿಕಲಾಂಗವಾಗುತ್ತವೆ.

೯. ಇಂಥಹ ವೈಕಲ್ಯತೆಗಳಿಗೆ ಪ್ರಮುಖ ಕಾರಣಗಳನ್ನೂ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅನುವಂಶೀಯ ಮತ್ತು ಪರಿಸರದ ಪರಿಣಾಮಗಳು, ಕೆಲವು ವೈಕಲ್ಯತೆಗಳು ತಂದೆ, ಅಥವಾ ತಾಯಿಯಿಂದ ಕಾರಣವಾಗಿರಬಹುದು. ಮಗುವು ಕೈ ಬೆರಳು ಇಲ್ಲವೇ ಕಾಲುಬೆರಳಗಳನ್ನು ಮಾಮೂಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿರುವುದು ಸಂತತಿಯಿಂದ ಸಂತತಿಗೆ ಸಾಗಣೆಯಾಗಬಹುದು.

೧೦. ಅಂಗವೈಕಲ್ಯತೆಗೆ ಇನ್ನೊಂದು ಕಾರಣ ಸುತ್ತಲಿನ ಪರಿಸರ ಪರಮಾಣು ವಿಕಿರಣಗಳ ಪರಿಣಾಮಗಳು ಭ್ರೂಣದ ಮೇಲೆ ಬಹಳ ಪ್ರಭಾವ ಬೀರುವವು. ಅಂಥಹ ಪ್ರಭಾವವನ್ನು ಈಗಲೂ ನಾವು ಜಪಾನ್‌ನಲ್ಲಿ ಕಾಣಬಹುದು. ಮನುಷ್ಯ ಇಂದು ಕೃತಕವಾಗಿ ನಿರ್ಮಿಸುತ್ತಿರುವ ವಿಕಿರಣ ಕ್ರಿಯಾಶಕ್ತಿಯು ಸುತ್ತಲಿನ ಪರಿಸರವನ್ನು ಮಲೀನಗೊಳಿಸಿ ಭ್ರೂಣಗಳ ವಿಕಸನದ ಮೇಲೆ ದುಷ್ಪರಿಣಾಮ ಬೀರುತ್ತವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...