Home / ಕವನ / ತತ್ವಪದ / ಹೊಳಪು

ಹೊಳಪು

ಎನ್ನ ಮನವು ದಣಿದಿದೆ ಲೋಕ ರುಚಿಗೆ
ಇಂದ್ರಿಯಗಳ ಕುಣಿಸುತ್ತಿದೆ ತಾ ಕುಣಿದಂತೆ
ಲಗಾಮು ಇಲ್ಲದಂತೆ ಓಡುತ್ತಿದೆ ಗಗನಕ್ಕೆ
ತನುವು ಸೇವಕನಾಗಿದೆ ಮನವು ಧಣಿಯಂತೆ

ದೇವ ನಿಲ್ಲಿಸದಿರು ನೀ ಕಾಣದಂತೆ ಅಡ್ಡಗೋಡೆ
ಅದೇ ಕಾಮಕ್ರೋಧ ದುರಾಸೆಗಳೆನ್ನಲ್ಲಿ ನಿಬಿಡೆ
ಕ್ಷಣ ಕ್ಷಣವು ಚಂಚಲವು ಈ ಮನವು
ಹೊತ್ತು ಸಾಗಿದೆ ಬೇಸರದಿ ಎನ್ನ ತನುವು

ನಾ ಕಳೆದು ಕೊಂಡಿರುವೆ ನನ್ನವನ ಜಾತ್ರೆಯಲಿ
ಆದರೆ ಮರೆತಿರುವೆ ಜಾತ್ರೆಯ ಗಮತ್ತಿನಲಿ
ನನ್ನವನಿಗೆ ಅರೆಸುವವರೆಗೆ ಬೇರೆ ವಿಧಿ ಇಲ್ಲ
ಅವನ ಪಡೆಯದೆ ಹೊರತು ಇನ್ನೊಂದು ನಿಧಿ ಇಲ್ಲ

ಹಣ್ಣಾಗಲಿ ಮನವು ಪ್ರಪಂಚ ಅಗ್ಗಿಷ್ಟೆಗೆಯಲ್ಲಿ
ಬೆಂದು ಸುಣ್ಣವಾಗಲಿ ಅಹಂಕಾರ ತೊರೆದು
ಹಸಿ ಹಸಿ ಮನವು ಹುಳಿಯಾಗಿ ಕಾಡುವುದು
ಪಕ್ವವಾದಾಗ ಮನವು ತೃಪ್ತಿ ನೀಡುವುದು

ಚಿಂತನೆ ಪರಾಕಾಷ್ಠೆಯಲಿ ಬೆರೆಯಲಿ ಮನ
ಮಂಥನೆ ಸಾಮ್ರಾಜ್ಯದಲಿ ತೇಲಲಿ ಮನ
ತನ್ನ ಪದರಲಿ ತುಂಬಿಕೊಳ್ಳಲಿ ಆತ್ಮ ಬೆಳಕು
ಮಾಣಿಕ್ಯ ವಿಠಲನೇ ಇಹಪರಕು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...