Home / ಕವನ / ಕವಿತೆ / ಮಿತ್ರ ಅಥವಾ ವೈರಿ

ಮಿತ್ರ ಅಥವಾ ವೈರಿ

ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ
ಅವ ಮಾತ್ರ ಮಾತಾಡುವುದಿಲ್ಲ
ಭಿತ್ತಿಮುಖಿ
ತೀರ ಮೌನಿ

ಮಾತು

ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ
ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ

ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ
ಅರ್ಥಗರ್ಭಿತ

ಮೌನಕಣಿವೆಯ ಅಗಾಧತೆ
ಅಲ್ಲಿ ಮಾಯವಾದವರು ಹಲವು ಜನ
ಅಲ್ಲಲ್ಲಿ ತಂಗಿದರು ಕೆಲವು ಜನ
ದಾರಿ ಮಧ್ಯೆ ಹುಲ್ಲುಗಾವಲಿನ ಪಕ್ಕ ಅಥವ ಪಟ್ಟಣ
ಪ್ರದೇಶಗಳಲ್ಲಿ

ಸ್ಥಳೀಯ ಸ್ತ್ರೀಯರ ಸಂಪರ್ಕ ಬೆಳೆಸಿದರು
ಅವರ ಹೆಸರುಗಳಿಗೇ ಮುಗ್ಧರಾದರು

ಆಮೇಲೆ ಅವರು ಸಂತೆಯಲಿ ತಮ್ಮವರ ಕಂಡಾಗ ಕೂಡ
ಉಭಯ ಕುಶಲೋಪರಿ ಮುಜುಗರದ ವಿಷಯ

ಎಜ್ರಾನ ಮುಖ ಒಂದು ಅಳಿವೆಯೆನ್ನುತ್ತಾರೆ
ಎಜ್ರಾನ ಮುಖ ಒಂದು ಒಡೆದ ಗದ್ದೆಯೆನ್ನುತ್ತಾರೆ

ಹಲವು ರೇಖೆಗಳಿರುವುದು ನಿಜ ಅದರಲ್ಲಿ
ಏನು ನೋಡುತ್ತಾನೆ ಅವನು ಗೋಡೆಯಲ್ಲಿ

ನಮಗೇನೂ ಕಾಣಿಸುವುದಿಲ್ಲ
ಬಹುಶಃ ಅದೊಂದು ನಿಗೂಢ ಲಿಪಿಯಲ್ಲಿ ಬರೆದ ಪ್ರಾಕ್ತನ ಕವಿತೆ
ಬಹುಶಃ ಅವನಿಗೂ ಅರ್ಥವಾಗುವುದಿಲ್ಲ ಅರ್ಥವಾದರೂ
ಅಂತರ ಬಹಳ ನಮ್ಮ ನಡುವೆ
ಅವನು ನೋಡುವ ದಿಕ್ಕು ನಾವು ನೋಡುವ ದಿಕ್ಕು
ಒಂದೆ ಆದರೂ
ಕಾಣುವುದರಲ್ಲಿ ಬಹಳ ವ್ಯತ್ಯಾಸವಿದೆ

ಮೊದಲೇ ಬಂದ ಎಜ್ರಾ
ನಮ್ಮ ಮಿತ್ರ ಅಥವಾ ವೈರಿ
ನಮಗೆ ಮರೆತಿದೆ ಅವನೂ
ನೆನಪಿಸುವುದಿಲ್ಲ
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...