Home / ಕವನ / ಕವಿತೆ / ಮಿತ್ರ ಅಥವಾ ವೈರಿ

ಮಿತ್ರ ಅಥವಾ ವೈರಿ

ಅವನ ಒಂದು ಮಾತಿಗೆ ಕಾಯುತಿದ್ದಾರೆ ಜನ
ಅವ ಮಾತ್ರ ಮಾತಾಡುವುದಿಲ್ಲ
ಭಿತ್ತಿಮುಖಿ
ತೀರ ಮೌನಿ

ಮಾತು

ಮಾತಾಡಿ ಆಗಿಲ್ಲವೇ ಸಾಕಷ್ಟು ಇಷ್ಟೂ ಕಾಲ
ಮಾತಾಡಿ ಕೊನೆ ಮುಟ್ಟಿದವರೇ ಇಲ್ಲ

ಮಾತು ಮಾತಿನ ನಡುವಣ ಶೂನ್ಯತೆಯಷ್ಟೆ
ಅರ್ಥಗರ್ಭಿತ

ಮೌನಕಣಿವೆಯ ಅಗಾಧತೆ
ಅಲ್ಲಿ ಮಾಯವಾದವರು ಹಲವು ಜನ
ಅಲ್ಲಲ್ಲಿ ತಂಗಿದರು ಕೆಲವು ಜನ
ದಾರಿ ಮಧ್ಯೆ ಹುಲ್ಲುಗಾವಲಿನ ಪಕ್ಕ ಅಥವ ಪಟ್ಟಣ
ಪ್ರದೇಶಗಳಲ್ಲಿ

ಸ್ಥಳೀಯ ಸ್ತ್ರೀಯರ ಸಂಪರ್ಕ ಬೆಳೆಸಿದರು
ಅವರ ಹೆಸರುಗಳಿಗೇ ಮುಗ್ಧರಾದರು

ಆಮೇಲೆ ಅವರು ಸಂತೆಯಲಿ ತಮ್ಮವರ ಕಂಡಾಗ ಕೂಡ
ಉಭಯ ಕುಶಲೋಪರಿ ಮುಜುಗರದ ವಿಷಯ

ಎಜ್ರಾನ ಮುಖ ಒಂದು ಅಳಿವೆಯೆನ್ನುತ್ತಾರೆ
ಎಜ್ರಾನ ಮುಖ ಒಂದು ಒಡೆದ ಗದ್ದೆಯೆನ್ನುತ್ತಾರೆ

ಹಲವು ರೇಖೆಗಳಿರುವುದು ನಿಜ ಅದರಲ್ಲಿ
ಏನು ನೋಡುತ್ತಾನೆ ಅವನು ಗೋಡೆಯಲ್ಲಿ

ನಮಗೇನೂ ಕಾಣಿಸುವುದಿಲ್ಲ
ಬಹುಶಃ ಅದೊಂದು ನಿಗೂಢ ಲಿಪಿಯಲ್ಲಿ ಬರೆದ ಪ್ರಾಕ್ತನ ಕವಿತೆ
ಬಹುಶಃ ಅವನಿಗೂ ಅರ್ಥವಾಗುವುದಿಲ್ಲ ಅರ್ಥವಾದರೂ
ಅಂತರ ಬಹಳ ನಮ್ಮ ನಡುವೆ
ಅವನು ನೋಡುವ ದಿಕ್ಕು ನಾವು ನೋಡುವ ದಿಕ್ಕು
ಒಂದೆ ಆದರೂ
ಕಾಣುವುದರಲ್ಲಿ ಬಹಳ ವ್ಯತ್ಯಾಸವಿದೆ

ಮೊದಲೇ ಬಂದ ಎಜ್ರಾ
ನಮ್ಮ ಮಿತ್ರ ಅಥವಾ ವೈರಿ
ನಮಗೆ ಮರೆತಿದೆ ಅವನೂ
ನೆನಪಿಸುವುದಿಲ್ಲ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...