Home / ಕವನ / ಕವಿತೆ / ಬರಬೇಕು ನಾ

ಬರಬೇಕು ನಾ

ಬರಬೇಕು ನಾ ನನ್ನೂರಿಗೆ
ಹಾಳೂರೊ ಮಾಳೂರೊ
ಏನಾದ್ರೂ ನನ್ನೂರೆ
ಮುರುಕು ಛಾವಣಿಗಳೊ
ಕೊರಕು ಕಲ್ಲೋಣಿಗಳೋ
ಏನಾದ್ರೂ ನನ್ನೂರೆ

ಅಲ್ಲೆಲ್ಲೋ ನನ್ನ ಜೀವ
ಅಲ್ಲೆಲ್ಲೋ ತುಸು ತೇವ
ನೆನಪಿನಂತೇನೊ ಯಾವ
ಇನ್ನೂ ಕಾಡುವ ಒಂದು ಭಾವ

ಗುಡ್ಡ ಬೆಟ್ಟವ ದಾಟಿ
ಇಳಿದು ಕಡಿದು ಹಾದಿ
ಮುಳ್ಳುಬೇಲಿ ಗಿಡ ಕಂಟಿ
ಇನ್ನೂ ಕೇಳಿಸುವ ಮಣಿಗಂಟಿ

ಅಲ್ಲೊಂದು ತೋಟ
ಅದಕೆಂಥ ಮಾಟ
ಇಂದ್ರ ಚಂದ್ರ ಸೋತ
ಪಾತರಗಿತ್ತಿ ದುಂಬಿ ಕಾಟ

ಅಬ್ಬಿ ನೀರಿನ ತಂಪು
ಸಸ್ಯರಾಶಿಯ ಸೊಂಪು
ಎಷ್ಟೊ ಕಾಲದ ನೆಂಪು
ಹೂಗಳ ಅದೇ ಕಂಪು

ನನ್ನ ಹೆತ್ತ ಅಮ್ಮನೊಡಲು
ಈಗಿಲ್ಲಿ ಹಿಡಿ ಮಣ್ಣು
ನನ್ನ ಗುರುತಿರುವ ಹೆಸರಿಡಿದು ಕರೆವ
ಯಾರೂ ಇಲ್ಲ

ಈ ಕೊಂಪೆಯಲೇ ನಾನು
ಮೊದಲು ಕಣ್ ತೆರೆದುದು
ಈ ಕೊಂಪೆಯಲೇ ನಾನು
ತೊದಲು ನುಡಿ ನುಡಿದುದು
ಇದುವೆ ನನ್ನಯ ಹಂಪೆ
ಇದುವೆ ನನ್ನಯ ರಾಜ್ಯ
ಇಲ್ಲೆಲ್ಲೊ ನನ್ನ ಈಗಿಲ್ಲದರಮನೆ
ಅರಮನೆ ನೆಲಮನೆ ಕನಸಿನ
ಗಾಳಿಮನೆ

ಎಲ್ಲವ ತೊರೆದು ನಾನೆಲ್ಲಿಗೆ ಹೋದೆ
ಎಲ್ಲವ ಬಿಟ್ಟು ನಾನೀಗ ಏನಾದೆ
ಕಾಲವ ಹಿಡಿದಿಡಲಾರೆ
ಹಿಂದೆ ಹೋಗಲು ಆರೆ

ಹಿಂದೆ ಹೋಗಲು ಆರೆ
ಮುಂದೆ ಹೋಗಲು ಆರೆ
ನಿಂತಲ್ಲೆ ನಿಂತಿರುವೆ ಶಿವನೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...