Home / ಕಥೆ / ಕಿರು ಕಥೆ / ಮೆಣಸಿನ ಕಾಯಿಯ ಸ್ನೇಹದ ಬಯಕೆ

ಮೆಣಸಿನ ಕಾಯಿಯ ಸ್ನೇಹದ ಬಯಕೆ

ಬಹುದೂರದ ಹೊಲದಲ್ಲಿ ಖಾರದ ಮೆಣಸಿನ ಕಾಯಿಗಳು ಒಂಟಿತನದಲ್ಲಿ ಕೆಂಪಾಗಿ ಬಾಡುತ್ತಿದ್ದವು. ಸಮುದ್ರ ಉಪ್ಪು ಹೆಪ್ಪು ಗಟ್ಟಿ ಉಪ್ಪಿನ ಹರಳಾಗಿ ದಡದಲ್ಲಿ ಸಂಗಾತಿಗಾಗಿ ಕಾಯುತಿತ್ತು. ಗಾಳಿ ಬೀಸಿದಾಗಲೆಲ್ಲಾ ಹುಣಸೆ ಕಾಯಿಗಳು ನೆಲದ ಮೇಲೆ ಬಿದ್ದು ನರಳುತ್ತಿದ್ದವು.

ಹುಣಸೆಕಾಯಿಗೆ ಸಿಹಿ ಸ್ವಪ್ನ ಬಿದ್ದಾಗಲೆಲ್ಲಾ ಮೆಣಸಿನಕಾಯಿ ಉಪ್ಪಿನ ಬಗ್ಗೆ ಕನಸು ಕಾಣುತ್ತಿತ್ತು. “ನಮ್ಮ ಅನ್ಯೋನ್ಯತೆಗೆ ಆಗ ಎಲ್ಲೆ ಎಲ್ಲಿ?” ಎಂದುಕೊಳ್ಳುತ್ತಿತ್ತು.

ಒಮ್ಮೆ ದೊಡ್ಡ ಪ್ರವಾಹ ಬಂತು. ಅದರಲ್ಲಿ ಮೆಣಸಿನ ಕಾಯಿ, ಹುಣಸೆಕಾಯಿ ತೇಲಿಕೊಂಡು ಬಂದು ಪರಸ್ಪರ ಸಂಧಿಸಿ ಅಪ್ಪಿಕೊಂಡು ಉಪ್ಪಿನ ಹರಳನ್ನು ಹುಡುಕಿ ಸಮುದ್ರ ದಡಕ್ಕೆ ಬಂದು ಉಪ್ಪನ್ನು ನೋಡಿ ಪ್ರಸನ್ನ ಗೊಂಡವು.

ನಾವೆಲ್ಲಾ ಸೇರಿ ಪಕ್ಕದ ಹಳ್ಳಿಯ ಗರತಿಯ ಒರಳಲ್ಲಿ ಒಟ್ಟಿಗೆ ಬಾಳೋಣ” ಎಂದು ನಿರ್ಧರಿಸಿ ಹಳ್ಳಿಯ ಒರಳಲ್ಲಿ ಒಂದು ಗೂಡಿದರು.

ಹಳ್ಳಿಯ ಗರತಿ ಒನಕೆಯಲ್ಲಿ ಎಲ್ಲವನ್ನು ಸೇರಿಸಿ ಕುಟ್ಟಿ ತೊಕ್ಕು ಮಾಡಿ ಗಡಿಗೆಯಲ್ಲಿ ಇಟ್ಟಳು. ಗರತಿ ಗಂಡನಿಗೆ ತೊಕ್ಕು ಹಾಕಿದಾಗ ಉಪ್ಪು, ಖಾರ, ಹುಳಿ ಜಾಸ್ತಿ ಎಂದು ಜಗಳವಾಡತೊಡಗಿದ.

ಗಡಿಗೆಯಲ್ಲಿ ಒಟ್ಟು ಸೇರಿ ಹೊಂದಿಕೊಂಡು ಕೂತಿದ್ದ ಮೆಣಸಿನ ಕಾಯಿ, ಉಪ್ಪು, ಹುಣಸೆಹಣ್ಣು ಗಂಡ ಹೆಂಡತಿಯರ ಜಗಳ ನೋಡಿ ನಗುತ್ತಿದ್ದವು.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...