Home / ಕಥೆ / ಕಿರು ಕಥೆ / ಮೆಣಸಿನ ಕಾಯಿಯ ಸ್ನೇಹದ ಬಯಕೆ

ಮೆಣಸಿನ ಕಾಯಿಯ ಸ್ನೇಹದ ಬಯಕೆ

ಬಹುದೂರದ ಹೊಲದಲ್ಲಿ ಖಾರದ ಮೆಣಸಿನ ಕಾಯಿಗಳು ಒಂಟಿತನದಲ್ಲಿ ಕೆಂಪಾಗಿ ಬಾಡುತ್ತಿದ್ದವು. ಸಮುದ್ರ ಉಪ್ಪು ಹೆಪ್ಪು ಗಟ್ಟಿ ಉಪ್ಪಿನ ಹರಳಾಗಿ ದಡದಲ್ಲಿ ಸಂಗಾತಿಗಾಗಿ ಕಾಯುತಿತ್ತು. ಗಾಳಿ ಬೀಸಿದಾಗಲೆಲ್ಲಾ ಹುಣಸೆ ಕಾಯಿಗಳು ನೆಲದ ಮೇಲೆ ಬಿದ್ದು ನರಳುತ್ತಿದ್ದವು.

ಹುಣಸೆಕಾಯಿಗೆ ಸಿಹಿ ಸ್ವಪ್ನ ಬಿದ್ದಾಗಲೆಲ್ಲಾ ಮೆಣಸಿನಕಾಯಿ ಉಪ್ಪಿನ ಬಗ್ಗೆ ಕನಸು ಕಾಣುತ್ತಿತ್ತು. “ನಮ್ಮ ಅನ್ಯೋನ್ಯತೆಗೆ ಆಗ ಎಲ್ಲೆ ಎಲ್ಲಿ?” ಎಂದುಕೊಳ್ಳುತ್ತಿತ್ತು.

ಒಮ್ಮೆ ದೊಡ್ಡ ಪ್ರವಾಹ ಬಂತು. ಅದರಲ್ಲಿ ಮೆಣಸಿನ ಕಾಯಿ, ಹುಣಸೆಕಾಯಿ ತೇಲಿಕೊಂಡು ಬಂದು ಪರಸ್ಪರ ಸಂಧಿಸಿ ಅಪ್ಪಿಕೊಂಡು ಉಪ್ಪಿನ ಹರಳನ್ನು ಹುಡುಕಿ ಸಮುದ್ರ ದಡಕ್ಕೆ ಬಂದು ಉಪ್ಪನ್ನು ನೋಡಿ ಪ್ರಸನ್ನ ಗೊಂಡವು.

ನಾವೆಲ್ಲಾ ಸೇರಿ ಪಕ್ಕದ ಹಳ್ಳಿಯ ಗರತಿಯ ಒರಳಲ್ಲಿ ಒಟ್ಟಿಗೆ ಬಾಳೋಣ” ಎಂದು ನಿರ್ಧರಿಸಿ ಹಳ್ಳಿಯ ಒರಳಲ್ಲಿ ಒಂದು ಗೂಡಿದರು.

ಹಳ್ಳಿಯ ಗರತಿ ಒನಕೆಯಲ್ಲಿ ಎಲ್ಲವನ್ನು ಸೇರಿಸಿ ಕುಟ್ಟಿ ತೊಕ್ಕು ಮಾಡಿ ಗಡಿಗೆಯಲ್ಲಿ ಇಟ್ಟಳು. ಗರತಿ ಗಂಡನಿಗೆ ತೊಕ್ಕು ಹಾಕಿದಾಗ ಉಪ್ಪು, ಖಾರ, ಹುಳಿ ಜಾಸ್ತಿ ಎಂದು ಜಗಳವಾಡತೊಡಗಿದ.

ಗಡಿಗೆಯಲ್ಲಿ ಒಟ್ಟು ಸೇರಿ ಹೊಂದಿಕೊಂಡು ಕೂತಿದ್ದ ಮೆಣಸಿನ ಕಾಯಿ, ಉಪ್ಪು, ಹುಣಸೆಹಣ್ಣು ಗಂಡ ಹೆಂಡತಿಯರ ಜಗಳ ನೋಡಿ ನಗುತ್ತಿದ್ದವು.
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...