Home / ಕಥೆ / ಕಿರು ಕಥೆ / ಸುವರ್ಣ ಮುಹೂರ್ತ

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕರಿಬಿಳಿ ಮಿಶ್ರಣದ ಚೀಲ, ನಾಲ್ಕನೇಯದು ಬೂದು ಬಣ್ಣದ ಚೀಲಗಳನ್ನು ಇತ್ತು ಬೀಳ್ಕೊಡುತ್ತಿದ್ದರು.

ಶಿಷ್ಯರು “ಬರಿಯ ಚೀಲಗಳು ಏಕೆ ಗುರುಗಳೇ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಗಳು ಹೇಳಿದರು “ಬಿಳಿಯ ಚೀಲ ನಿಮ್ಮ ಪುಣ್ಯ ಸಂಪಾದನೆಯಿಂದ ತುಂಬುತ್ತದೆ. ಕರಿಯ ಚೀಲ ಪಾಪದಿಂದ, ಇನ್ನು ನಿಮ್ಮ ಕರಿಬಿಳಿಚೀಲ ಪಾಪ ಪುಣ್ಯ ಎರಡರಿಂದ.” ಎಂದರು.

“ಹಾಗಾದರೆ ಈಬೂದೂ ಬಣ್ಣದ ಚೀಲ ಏಕೆ ಗುರುಗಳೇ?” ಎಂದು ಕೇಳಲು ಗುರುಗಳು ಹೇಳಿದರು- ಅದು ಸ್ವಚ್ಚ ಬಾಳ್ವೆಯ ನಿಶ್ಚಲತೆ, ಸಮನ್ವಯತೆಯ, ಮುಕ್ತ ಸ್ಥಿತಿಯಿಂದ ತುಂಬುತ್ತದೆ.”

“ಈ ಚೀಲಗಳು ಸಾಂಕೇತಿಕ ಮಾತ್ರ” ಎಂದು ಹೇಳಿ,

“ಈಗ ಚೀಲಗಳನ್ನು ಇಲ್ಲಿ ಇಟ್ಟುಬಿಡಿ” ಎಂದರು. ನಿಮ್ಮ ಬಲಗೈಯಲ್ಲಿ ಬಿಳಿಚೀಲವಿದೆ ಎಂದು ಭಾವಿಸಿ. ನಿಮ್ಮ ಎಡಗೈಯಲ್ಲಿ ಕರಿ ಚೀಲವಿದೆ ಎಂದು ಭಾವಿಸಿ, ನಿಮ್ಮ ಬೆನ್ನ ಮೇಲೆ ಪಾಪಪುಣ್ಯದ ಕರಿಬಿಳಿ ಚೀಲವಿದೆ ಎಂದು ಭಾವಿಸಿ ನಿಮ್ಮ ದೇಹದ ಹೃದಯ ವೃಕ್ಷದಲ್ಲಿ ತೂಗು ಹಾಕಿ ಈ ಬೂದು ಬಣ್ಣದ ಚೀಲ. ಇದು ತುಂಬುವುದಿಲ್ಲ, ತುಳುಕುವುದಿಲ್ಲ, ಬರಿದಾಗುವುದು ಇಲ್ಲ. ಆ ಸ್ಥಿತಿ ಮುಕ್ತದ ಪರಮಾನಂದ ಸ್ಥಿತಿ.” ಎಂದಾಗ ಶಿಷ್ಯರ ಘಟಿಕೋತ್ಸವದ ಸ್ವತಿವಾಚನ ಮುಗಿಯಿತು. ನಿಜವಾದ ಪಟ್ಟಗಳೇನೆಂದು ಅರಿತು ಬಾಳ್ವೆಯಲ್ಲಿ ಪಟ್ಟ ಏರಲು ಸಿದ್ಧರಾದರು ಶಿಷ್ಯರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...