Home / ಕಥೆ / ಕಿರು ಕಥೆ / ಸುವರ್ಣ ಮುಹೂರ್ತ

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕರಿಬಿಳಿ ಮಿಶ್ರಣದ ಚೀಲ, ನಾಲ್ಕನೇಯದು ಬೂದು ಬಣ್ಣದ ಚೀಲಗಳನ್ನು ಇತ್ತು ಬೀಳ್ಕೊಡುತ್ತಿದ್ದರು.

ಶಿಷ್ಯರು “ಬರಿಯ ಚೀಲಗಳು ಏಕೆ ಗುರುಗಳೇ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಗಳು ಹೇಳಿದರು “ಬಿಳಿಯ ಚೀಲ ನಿಮ್ಮ ಪುಣ್ಯ ಸಂಪಾದನೆಯಿಂದ ತುಂಬುತ್ತದೆ. ಕರಿಯ ಚೀಲ ಪಾಪದಿಂದ, ಇನ್ನು ನಿಮ್ಮ ಕರಿಬಿಳಿಚೀಲ ಪಾಪ ಪುಣ್ಯ ಎರಡರಿಂದ.” ಎಂದರು.

“ಹಾಗಾದರೆ ಈಬೂದೂ ಬಣ್ಣದ ಚೀಲ ಏಕೆ ಗುರುಗಳೇ?” ಎಂದು ಕೇಳಲು ಗುರುಗಳು ಹೇಳಿದರು- ಅದು ಸ್ವಚ್ಚ ಬಾಳ್ವೆಯ ನಿಶ್ಚಲತೆ, ಸಮನ್ವಯತೆಯ, ಮುಕ್ತ ಸ್ಥಿತಿಯಿಂದ ತುಂಬುತ್ತದೆ.”

“ಈ ಚೀಲಗಳು ಸಾಂಕೇತಿಕ ಮಾತ್ರ” ಎಂದು ಹೇಳಿ,

“ಈಗ ಚೀಲಗಳನ್ನು ಇಲ್ಲಿ ಇಟ್ಟುಬಿಡಿ” ಎಂದರು. ನಿಮ್ಮ ಬಲಗೈಯಲ್ಲಿ ಬಿಳಿಚೀಲವಿದೆ ಎಂದು ಭಾವಿಸಿ. ನಿಮ್ಮ ಎಡಗೈಯಲ್ಲಿ ಕರಿ ಚೀಲವಿದೆ ಎಂದು ಭಾವಿಸಿ, ನಿಮ್ಮ ಬೆನ್ನ ಮೇಲೆ ಪಾಪಪುಣ್ಯದ ಕರಿಬಿಳಿ ಚೀಲವಿದೆ ಎಂದು ಭಾವಿಸಿ ನಿಮ್ಮ ದೇಹದ ಹೃದಯ ವೃಕ್ಷದಲ್ಲಿ ತೂಗು ಹಾಕಿ ಈ ಬೂದು ಬಣ್ಣದ ಚೀಲ. ಇದು ತುಂಬುವುದಿಲ್ಲ, ತುಳುಕುವುದಿಲ್ಲ, ಬರಿದಾಗುವುದು ಇಲ್ಲ. ಆ ಸ್ಥಿತಿ ಮುಕ್ತದ ಪರಮಾನಂದ ಸ್ಥಿತಿ.” ಎಂದಾಗ ಶಿಷ್ಯರ ಘಟಿಕೋತ್ಸವದ ಸ್ವತಿವಾಚನ ಮುಗಿಯಿತು. ನಿಜವಾದ ಪಟ್ಟಗಳೇನೆಂದು ಅರಿತು ಬಾಳ್ವೆಯಲ್ಲಿ ಪಟ್ಟ ಏರಲು ಸಿದ್ಧರಾದರು ಶಿಷ್ಯರು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...