Home / ಕಥೆ / ಕಿರು ಕಥೆ / ಸುವರ್ಣ ಮುಹೂರ್ತ

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕರಿಬಿಳಿ ಮಿಶ್ರಣದ ಚೀಲ, ನಾಲ್ಕನೇಯದು ಬೂದು ಬಣ್ಣದ ಚೀಲಗಳನ್ನು ಇತ್ತು ಬೀಳ್ಕೊಡುತ್ತಿದ್ದರು.

ಶಿಷ್ಯರು “ಬರಿಯ ಚೀಲಗಳು ಏಕೆ ಗುರುಗಳೇ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಗಳು ಹೇಳಿದರು “ಬಿಳಿಯ ಚೀಲ ನಿಮ್ಮ ಪುಣ್ಯ ಸಂಪಾದನೆಯಿಂದ ತುಂಬುತ್ತದೆ. ಕರಿಯ ಚೀಲ ಪಾಪದಿಂದ, ಇನ್ನು ನಿಮ್ಮ ಕರಿಬಿಳಿಚೀಲ ಪಾಪ ಪುಣ್ಯ ಎರಡರಿಂದ.” ಎಂದರು.

“ಹಾಗಾದರೆ ಈಬೂದೂ ಬಣ್ಣದ ಚೀಲ ಏಕೆ ಗುರುಗಳೇ?” ಎಂದು ಕೇಳಲು ಗುರುಗಳು ಹೇಳಿದರು- ಅದು ಸ್ವಚ್ಚ ಬಾಳ್ವೆಯ ನಿಶ್ಚಲತೆ, ಸಮನ್ವಯತೆಯ, ಮುಕ್ತ ಸ್ಥಿತಿಯಿಂದ ತುಂಬುತ್ತದೆ.”

“ಈ ಚೀಲಗಳು ಸಾಂಕೇತಿಕ ಮಾತ್ರ” ಎಂದು ಹೇಳಿ,

“ಈಗ ಚೀಲಗಳನ್ನು ಇಲ್ಲಿ ಇಟ್ಟುಬಿಡಿ” ಎಂದರು. ನಿಮ್ಮ ಬಲಗೈಯಲ್ಲಿ ಬಿಳಿಚೀಲವಿದೆ ಎಂದು ಭಾವಿಸಿ. ನಿಮ್ಮ ಎಡಗೈಯಲ್ಲಿ ಕರಿ ಚೀಲವಿದೆ ಎಂದು ಭಾವಿಸಿ, ನಿಮ್ಮ ಬೆನ್ನ ಮೇಲೆ ಪಾಪಪುಣ್ಯದ ಕರಿಬಿಳಿ ಚೀಲವಿದೆ ಎಂದು ಭಾವಿಸಿ ನಿಮ್ಮ ದೇಹದ ಹೃದಯ ವೃಕ್ಷದಲ್ಲಿ ತೂಗು ಹಾಕಿ ಈ ಬೂದು ಬಣ್ಣದ ಚೀಲ. ಇದು ತುಂಬುವುದಿಲ್ಲ, ತುಳುಕುವುದಿಲ್ಲ, ಬರಿದಾಗುವುದು ಇಲ್ಲ. ಆ ಸ್ಥಿತಿ ಮುಕ್ತದ ಪರಮಾನಂದ ಸ್ಥಿತಿ.” ಎಂದಾಗ ಶಿಷ್ಯರ ಘಟಿಕೋತ್ಸವದ ಸ್ವತಿವಾಚನ ಮುಗಿಯಿತು. ನಿಜವಾದ ಪಟ್ಟಗಳೇನೆಂದು ಅರಿತು ಬಾಳ್ವೆಯಲ್ಲಿ ಪಟ್ಟ ಏರಲು ಸಿದ್ಧರಾದರು ಶಿಷ್ಯರು.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...