ಮೂಲ: ವಿಲಿಯಂ ಬಟ್ಲರ್ ಏಟ್ಸ್
ರೊಚ್ಚು, ಕಾಮದ ಕೆಚ್ಚು ಕಚ್ಚುತ್ತಿರಲು ನನ್ನ
ವೃದ್ಧಾಪ್ಯದಲ್ಲಿ,
ಎಂಥ ಭೀಕರ ಅಂತ ಚಿಂತಿಸುವಿಯೋ ಏನೊ
ನೀನು ಮನದಲ್ಲಿ,
ಅಂಥ ಪೀಡೆಗಳಾಗಿ ಕಾಡಿದ್ದೇನಿಲ್ಲ ಅವು
ತಾರುಣ್ಯದಲ್ಲಿ ನನ್ನನ್ನು;
ಅಲ್ಲದೇ ನನಗೀಗ
ಹಾಡು ಬರೆಯಲು ತಾನೆ ಏನಿದೆ ಪ್ರಚೋದನೆ
ಬಿಟ್ಟರೆ ಅವನ್ನು ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.