Home / ಕವನ / ಕವಿತೆ / ರತ್ನ

ರತ್ನ

ದಾರೀಲ್ ಆರೆ ಗುದ್ಲಿ ಯಿಡ್ದಿ
ರತ್ನ ಅಳ್ಳ ತೋಡ್ತಾನೆ
ಮೇಸ್ತ್ರಿ ನೋಡ್ತಾನೆ;
ತೋಡ್ತಿದ್ದಂಗೆ ಏನೋ ನೋಡ್ತ
ಆರೇ ವೂರಿ ನಿಲ್ತಾನೆ!
ಬೆಪ್ಪಂಗ್ ನಿಲ್ತಾನೆ! ೧

ಎದುರಿನ್ ಬೇಲೀಲ್ ಬಿಟ್ಟಿದ್ ಊವು
ರತ್ನನ್ ಕಣ್ಗೆ ಬೀಳ್ತಾದೆ
ನೆಪ್ಗೊಳ್ ಏಳ್ತಾದೆ;
ಊವಿನ್ ಮುಡಿದಿದ್ ನಂಜೀ ಬೊಂಬೆ
ಕಣ್ಣಿನ್ ಮುಂದೆ ಯೇಳ್ತಾದೆ
ಆಸೆ ಕೆಳ್ತಾದೆ. ೨

ಯಿಡಿದಿದ್ದ್ ಆರೇನ್ ಅಂಗೇ ಬುಟ್ಟಿ
ರತ್ನ ಕುಡಿದಂಗ್ ಓಗ್ತಾನೆ
ಮೇಸ್ತ್ರಿ ಕೂಗ್ತಾನೆ;
ಮನೆಗೋಗೋನ್ಗೆ ‘ಲೋ’ ಅಂತಂದಿ
ಕೂಗ್ತ ಲಾಗ ಆಕ್ತಾನೆ!
ಕೂದ್ರೆ ಕೂಗ್ತಾನೆ! ೩

ಅಟ್ಟೀಲ್ ಕಾಡಿಗೆ ಕಣ್ಣಿನ್ ನಂಜಿ
ರತ್ನನ್ ಕಂಡಿ ಉಕ್ತಾಳೆ
ಕಣ್ಣಲ್‌ ಮುಕ್ತಾಳೆ;
ನಿಂತಿದ್ ನಂಜೀನ್ ನೋಡ್ತಿದ್ದಂಗೇ
ಇಬ್ಬರ್‌ ಮನಸೂ ಯಿಗ್ತಾದೆ
ಎಳ್ಡ್ ಒಂದಾಗ್ತದೆ! ೪
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...