Home / ಕವನ / ಕವಿತೆ / ಕರಿ ಮಾಯಿ

ಕರಿ ಮಾಯಿ

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ
ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ
ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ
ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ
ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು ಬಯಲಾಟ ಆಡಿದ್ರೆ
ನೀನಿದ್ದುದ್ದಿದ್ದಂಗೇ ತೋರಸ್ತೀ
ಆಕೀದು ಬರೀ ಬೆರೆಕೀತನ ನಿಂದು ಕಡ್ಡಿ ಮುರದಂಗೆ ಸಾಚಾತನ

ಅವ್ವಾ ಕರಿಮಾಯೀ!
ನಿನ್ನ ಮಹಿಮಾ ಎಷ್ಟಂತ ಬಣ್ಣಸಲೀ
ತಲಿಕೂದಲು ಮಲೆ ತೊಟ್ಟು ಸಂದುಗೊಂದಿನಮ್ಯಾಲೆಲ್ಲಾ ನಿನ ನೆಳ್ಳು
ಹಗಲ ಕೂಸ್ನ ಬಗಲಾಗಿಟಿಗಂಡಿ ಚಿಕ್ಕೀ ಹೂಗಳ್ನ ತಲೆಯಾಗಿಟಗಂಡಿ
ಕರಿಮೈಯ ಹರಿಹರರೆ ನಿನ ಮಕ್ಳೆಂದಮ್ಯಾಲೆ
ಇಷ್ಟಿಷ್ಟೆ ಸೆರಗ ಸರಿಸಿ ನಿನ ಚಂದ ತೋರಿಸ್ತೀ
ಅದೂ ತಪ್ಪಸ್ ಮಾಡಿದೋರ್ಗೆ
ಕಂಡೋರು ಕಂಡಂಗಾಡ್ತಾರೆ
ಶೂನ್ಯಂತಾರೆ ಬಟಾಬಯಲಂತಾರೆ ನಿರ್ವಾಣಂತಾರೆ

ಮೊದ ಮೊದಲು ನಿನಗೆ ಭಾಳಾ ಹೆದರತಿದ್ದೆ
ಬೆಳೆದಂಗೆಲ್ಲ ಬಿಳಿಯವ್ವನ ಕಣ್ಣು ಕುಕ್ಕಾಟಕ್ಕೆ ಕಕ್ಕಾಬಿಕ್ಕಾಗಿ
ನಿನ್ನ ಕಡೆಗೆ ತಿರಗಿದೆ ನಿನ್ನ ತಿಳಿದು ಒಲಿಯಾಕತ್ತಿದೆ
ಕತ್ತಲಾಗೆ ನೀನು ಮಿಂಚಾಡಿ ದಾರಿ ತೋರಸ್ತಾ ಹೊಂಟಂಗೆಲ್ಲಾ
ಹೊಸ ಹೊಸಾ ಕತ್ತಲು ಗಟ್ಟಿಗಾದಂಗೆಲ್ಲಾ
ಗುರು ಹಿರಿಯಳಂಗೆ ದಿನದಿನಕೆ ಹತ್ತರದೋಳಂಗೆ ಆಗ್ತಾ ಅದೀ
ಅವ್ವಾ ಕರಿಮಾಯಿ! ನಿನ ಮಹಿಮಾ ಬಣ್ಣಸಾಕೆ ನಾನೆಷ್ಟರೋನು
*****.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...