Home / ಕವನ / ಕವಿತೆ / ಕರಿ ಮಾಯಿ

ಕರಿ ಮಾಯಿ

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ
ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ
ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ
ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ
ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು ಬಯಲಾಟ ಆಡಿದ್ರೆ
ನೀನಿದ್ದುದ್ದಿದ್ದಂಗೇ ತೋರಸ್ತೀ
ಆಕೀದು ಬರೀ ಬೆರೆಕೀತನ ನಿಂದು ಕಡ್ಡಿ ಮುರದಂಗೆ ಸಾಚಾತನ

ಅವ್ವಾ ಕರಿಮಾಯೀ!
ನಿನ್ನ ಮಹಿಮಾ ಎಷ್ಟಂತ ಬಣ್ಣಸಲೀ
ತಲಿಕೂದಲು ಮಲೆ ತೊಟ್ಟು ಸಂದುಗೊಂದಿನಮ್ಯಾಲೆಲ್ಲಾ ನಿನ ನೆಳ್ಳು
ಹಗಲ ಕೂಸ್ನ ಬಗಲಾಗಿಟಿಗಂಡಿ ಚಿಕ್ಕೀ ಹೂಗಳ್ನ ತಲೆಯಾಗಿಟಗಂಡಿ
ಕರಿಮೈಯ ಹರಿಹರರೆ ನಿನ ಮಕ್ಳೆಂದಮ್ಯಾಲೆ
ಇಷ್ಟಿಷ್ಟೆ ಸೆರಗ ಸರಿಸಿ ನಿನ ಚಂದ ತೋರಿಸ್ತೀ
ಅದೂ ತಪ್ಪಸ್ ಮಾಡಿದೋರ್ಗೆ
ಕಂಡೋರು ಕಂಡಂಗಾಡ್ತಾರೆ
ಶೂನ್ಯಂತಾರೆ ಬಟಾಬಯಲಂತಾರೆ ನಿರ್ವಾಣಂತಾರೆ

ಮೊದ ಮೊದಲು ನಿನಗೆ ಭಾಳಾ ಹೆದರತಿದ್ದೆ
ಬೆಳೆದಂಗೆಲ್ಲ ಬಿಳಿಯವ್ವನ ಕಣ್ಣು ಕುಕ್ಕಾಟಕ್ಕೆ ಕಕ್ಕಾಬಿಕ್ಕಾಗಿ
ನಿನ್ನ ಕಡೆಗೆ ತಿರಗಿದೆ ನಿನ್ನ ತಿಳಿದು ಒಲಿಯಾಕತ್ತಿದೆ
ಕತ್ತಲಾಗೆ ನೀನು ಮಿಂಚಾಡಿ ದಾರಿ ತೋರಸ್ತಾ ಹೊಂಟಂಗೆಲ್ಲಾ
ಹೊಸ ಹೊಸಾ ಕತ್ತಲು ಗಟ್ಟಿಗಾದಂಗೆಲ್ಲಾ
ಗುರು ಹಿರಿಯಳಂಗೆ ದಿನದಿನಕೆ ಹತ್ತರದೋಳಂಗೆ ಆಗ್ತಾ ಅದೀ
ಅವ್ವಾ ಕರಿಮಾಯಿ! ನಿನ ಮಹಿಮಾ ಬಣ್ಣಸಾಕೆ ನಾನೆಷ್ಟರೋನು
*****.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...