Home / ಕವನ / ಕವಿತೆ / ಕರಿ ಮಾಯಿ

ಕರಿ ಮಾಯಿ

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ
ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ
ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ
ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ
ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು ಬಯಲಾಟ ಆಡಿದ್ರೆ
ನೀನಿದ್ದುದ್ದಿದ್ದಂಗೇ ತೋರಸ್ತೀ
ಆಕೀದು ಬರೀ ಬೆರೆಕೀತನ ನಿಂದು ಕಡ್ಡಿ ಮುರದಂಗೆ ಸಾಚಾತನ

ಅವ್ವಾ ಕರಿಮಾಯೀ!
ನಿನ್ನ ಮಹಿಮಾ ಎಷ್ಟಂತ ಬಣ್ಣಸಲೀ
ತಲಿಕೂದಲು ಮಲೆ ತೊಟ್ಟು ಸಂದುಗೊಂದಿನಮ್ಯಾಲೆಲ್ಲಾ ನಿನ ನೆಳ್ಳು
ಹಗಲ ಕೂಸ್ನ ಬಗಲಾಗಿಟಿಗಂಡಿ ಚಿಕ್ಕೀ ಹೂಗಳ್ನ ತಲೆಯಾಗಿಟಗಂಡಿ
ಕರಿಮೈಯ ಹರಿಹರರೆ ನಿನ ಮಕ್ಳೆಂದಮ್ಯಾಲೆ
ಇಷ್ಟಿಷ್ಟೆ ಸೆರಗ ಸರಿಸಿ ನಿನ ಚಂದ ತೋರಿಸ್ತೀ
ಅದೂ ತಪ್ಪಸ್ ಮಾಡಿದೋರ್ಗೆ
ಕಂಡೋರು ಕಂಡಂಗಾಡ್ತಾರೆ
ಶೂನ್ಯಂತಾರೆ ಬಟಾಬಯಲಂತಾರೆ ನಿರ್ವಾಣಂತಾರೆ

ಮೊದ ಮೊದಲು ನಿನಗೆ ಭಾಳಾ ಹೆದರತಿದ್ದೆ
ಬೆಳೆದಂಗೆಲ್ಲ ಬಿಳಿಯವ್ವನ ಕಣ್ಣು ಕುಕ್ಕಾಟಕ್ಕೆ ಕಕ್ಕಾಬಿಕ್ಕಾಗಿ
ನಿನ್ನ ಕಡೆಗೆ ತಿರಗಿದೆ ನಿನ್ನ ತಿಳಿದು ಒಲಿಯಾಕತ್ತಿದೆ
ಕತ್ತಲಾಗೆ ನೀನು ಮಿಂಚಾಡಿ ದಾರಿ ತೋರಸ್ತಾ ಹೊಂಟಂಗೆಲ್ಲಾ
ಹೊಸ ಹೊಸಾ ಕತ್ತಲು ಗಟ್ಟಿಗಾದಂಗೆಲ್ಲಾ
ಗುರು ಹಿರಿಯಳಂಗೆ ದಿನದಿನಕೆ ಹತ್ತರದೋಳಂಗೆ ಆಗ್ತಾ ಅದೀ
ಅವ್ವಾ ಕರಿಮಾಯಿ! ನಿನ ಮಹಿಮಾ ಬಣ್ಣಸಾಕೆ ನಾನೆಷ್ಟರೋನು
*****.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...