ಜಾವಕ್ಕೊಮ್ಮೆ ಜಾಗರ

ಎಚ್ಚರ ಎಚ್ಚರ
ಕಾರ್ಗತ್ತಲ ತೆಕ್ಕೆಯಲಿ
ಪೊದೆಯೊಳಗೆ ಅವಿತುಕುಳಿತ ಚೋರ
ಹೊಕ್ಕಾನು ಮನೆಯೊಳಗೆ
ನಿಶಾದೇವಿಯಾಲಿಂಗನದಲಿ
ಮೈ ಮರೆತರೆ
ಎಲ್ಲವೂ ಸೂರೆ
ಕಡಲಿನ ತೆರೆ
ದಂಡೆಗಪ್ಪಳಿಸಿದರೆ
ಅರಿವಾಗುವ ಮೊದಲೇ
ಎಲ್ಲಾ ನೀರೇ!

ಎಚ್ಚರ ಎಚ್ಚರ
ಕಿಟಕಿ, ಬಾಗಿಲು, ವಾತಾಯನಗಳೆಲ್ಲಾ
ಮುಚ್ಚಿಕೊಂಡಿದ್ದರೂ ಗಟ್ಟಿಯಾಗಿಯೇ
ಸಣ್ಣಪುಟ್ಟ ಸಂದುಗೊಂದುಗಳಲ್ಲಿ
ಮೆಲ್ಲಗೆ ಕಣ್ಣಿಳಿಸಿ
ಕಣ್ಣಿನೊಂದಿಗೇ ತನ್ನ ಬೇರಿಳಿಸಿ
ಆಳದಾಳದ ಗುಪ್ತ ಖಜಾನೆಗೇ
ಲಗ್ಗೆ ಹಾಕುತ್ತಾನೆ ಈ ಚೋರ
ಮುತ್ತು, ವಜ್ರ, ವೈಢೂರ್ಯಹಾರ
ಕಣ್ಮುಚ್ಚಿ ತೆಗೆಯುವುದರೊಳಗೆ
ಮಂಗಮಾಯ ಮಾಡುವ ಧೀರ!

ಎಚ್ಚರ ಎಚ್ಚರ
ತೊಟ್ಟ ಅಂಗಿ ಕಳಚಿ
ನಿದ್ದೆಯಾಳಕ್ಕೆ ಇಳಿದು
ಸುಪ್ತಸಾಗರದಲಿ
ಸಪ್ತವರ್ಣದ ಅಂಗಿತೊಟ್ಟು
ತೇಲುತ್ತಾ ಮುಳುಗಿದವರೇ
ಕಳಚಿಟ್ಟ ಅಂಗಿ
ದೋಚಿಯಾನು ಚೋರ
ಅತ್ತ ಅದೂ ಇಲ್ಲದೇ
ಇತ್ತ ಇದೂ ಇಲ್ಲದೇ
ಆದೀತು ಬೆತ್ತಲು ಅನಿವಾರ್ಯ

ಜಾಗರದವ ಸರಿರಾತ್ರಿಯಲಿ
ಗಂಟಲು ಹರಿದುಕೊಳ್ಳುತ್ತಾ
ಜಾವಕೊಮ್ಮೆ ಜಾಗರ ಕೂಗುತ್ತಾನೆ
ಪಾಪ ಅವನಿಗೆ ತಿಳಿದಿಲ್ಲ
ಮೈ ಮರೆತು ನಿದ್ರಿಸಿದವರಿಗಷ್ಟೇ
ಎಚ್ಚರಾಗುವ ಪ್ರಶ್ನೆ
ಜಾಗೃತಿಯ ಜಾಗರದವರಿಗೆ
ಸದಾ ಎಚ್ಚರವೇ ಪ್ರಜ್ಞೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಂಗಿಗೊಬ್ಬ ಅಕ್ಕ
Next post ಕರಿ ಮಾಯಿ

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…