Home / ಕವನ / ಕವಿತೆ / ಜಾವಕ್ಕೊಮ್ಮೆ ಜಾಗರ

ಜಾವಕ್ಕೊಮ್ಮೆ ಜಾಗರ

ಎಚ್ಚರ ಎಚ್ಚರ
ಕಾರ್ಗತ್ತಲ ತೆಕ್ಕೆಯಲಿ
ಪೊದೆಯೊಳಗೆ ಅವಿತುಕುಳಿತ ಚೋರ
ಹೊಕ್ಕಾನು ಮನೆಯೊಳಗೆ
ನಿಶಾದೇವಿಯಾಲಿಂಗನದಲಿ
ಮೈ ಮರೆತರೆ
ಎಲ್ಲವೂ ಸೂರೆ
ಕಡಲಿನ ತೆರೆ
ದಂಡೆಗಪ್ಪಳಿಸಿದರೆ
ಅರಿವಾಗುವ ಮೊದಲೇ
ಎಲ್ಲಾ ನೀರೇ!

ಎಚ್ಚರ ಎಚ್ಚರ
ಕಿಟಕಿ, ಬಾಗಿಲು, ವಾತಾಯನಗಳೆಲ್ಲಾ
ಮುಚ್ಚಿಕೊಂಡಿದ್ದರೂ ಗಟ್ಟಿಯಾಗಿಯೇ
ಸಣ್ಣಪುಟ್ಟ ಸಂದುಗೊಂದುಗಳಲ್ಲಿ
ಮೆಲ್ಲಗೆ ಕಣ್ಣಿಳಿಸಿ
ಕಣ್ಣಿನೊಂದಿಗೇ ತನ್ನ ಬೇರಿಳಿಸಿ
ಆಳದಾಳದ ಗುಪ್ತ ಖಜಾನೆಗೇ
ಲಗ್ಗೆ ಹಾಕುತ್ತಾನೆ ಈ ಚೋರ
ಮುತ್ತು, ವಜ್ರ, ವೈಢೂರ್ಯಹಾರ
ಕಣ್ಮುಚ್ಚಿ ತೆಗೆಯುವುದರೊಳಗೆ
ಮಂಗಮಾಯ ಮಾಡುವ ಧೀರ!

ಎಚ್ಚರ ಎಚ್ಚರ
ತೊಟ್ಟ ಅಂಗಿ ಕಳಚಿ
ನಿದ್ದೆಯಾಳಕ್ಕೆ ಇಳಿದು
ಸುಪ್ತಸಾಗರದಲಿ
ಸಪ್ತವರ್ಣದ ಅಂಗಿತೊಟ್ಟು
ತೇಲುತ್ತಾ ಮುಳುಗಿದವರೇ
ಕಳಚಿಟ್ಟ ಅಂಗಿ
ದೋಚಿಯಾನು ಚೋರ
ಅತ್ತ ಅದೂ ಇಲ್ಲದೇ
ಇತ್ತ ಇದೂ ಇಲ್ಲದೇ
ಆದೀತು ಬೆತ್ತಲು ಅನಿವಾರ್ಯ

ಜಾಗರದವ ಸರಿರಾತ್ರಿಯಲಿ
ಗಂಟಲು ಹರಿದುಕೊಳ್ಳುತ್ತಾ
ಜಾವಕೊಮ್ಮೆ ಜಾಗರ ಕೂಗುತ್ತಾನೆ
ಪಾಪ ಅವನಿಗೆ ತಿಳಿದಿಲ್ಲ
ಮೈ ಮರೆತು ನಿದ್ರಿಸಿದವರಿಗಷ್ಟೇ
ಎಚ್ಚರಾಗುವ ಪ್ರಶ್ನೆ
ಜಾಗೃತಿಯ ಜಾಗರದವರಿಗೆ
ಸದಾ ಎಚ್ಚರವೇ ಪ್ರಜ್ಞೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...