Home / ಕವನ / ಅನುವಾದ / ಲೀಡಾ ಮತ್ತು ಹಂಸ

ಲೀಡಾ ಮತ್ತು ಹಂಸ

ಹಠಾತ್ತನೆರಗಿತು ಹಕ್ಕಿ; ಬಲಿಷ್ಠ ರೆಕ್ಕೆಯ ಬಿಚ್ಚಿ
ಬಡಿವ ಪಟಪಟಸದ್ದು. ಬೆಚ್ಚಿದ ಹುಡುಗಿಯನ್ನ
ಕೊಕ್ಕಿಂದ ಹಿಡಿದೆತ್ತಿ, ಮುದ್ದಿಸಿತು ಅಸಹಾಯ ಎದೆಗೆ ಎದೆಯನೊತ್ತಿ
ಸವರುತ್ತ ಅವಳ ತೊಡೆಬೆತ್ತಲೆಯ ಕಪ್ಪಾದ ಜಾಲಪಾದ.

ಗರಿತೆರೆದ ಇಂಥ ಅದ್ಭುತವ ಸಡಲುತ್ತಿರುವ
ತೊಡೆಯಿಂದ ಹೊರಗೆ ತಳ್ಳುವುದು ಹೇಗೆ ?
ಹಂಸತೂಲದ ತೆಕ್ಕೆಯೊಳಗೆ ಸಿಕ್ಕಿರುವ ಮೈ
ಮಿಡಿಯದಿರುವುದು ಹೇಗೆ ಬೆರಗುಕವಿಸಿದ ಎದೆಯ ಬಡಿತಗಳಿಗೆ ?

ತೊಡೆ ಕಂಪಿಸಿದ ಗಳಿಗೆ ಸೃಷ್ಟಿಯಾಯಿತೊ ಹೇಗೆ
ಬಿರಿಬಿಟ್ಟ ಗೋಡೆ, ಉರಿಬಿದ್ದ ಛಾವಣಿ, ಕೋಟೆ,
ಬಲಿಹೋದ ರಾಜ ಅಗಮೆಮ್ನನ್?
ಕಾವು ತೀರಿದ ಹಕ್ಕಿಕೊಕ್ಕು ಕಳಚುವ ಮುಂಚೆ,
ದಿವದ ಪಶುಬಿಗಿತಕ್ಕೆ ಒಳಪಟ್ಟ ಕ್ಷಣದಲ್ಲೆ,
ದತ್ತವಾಯಿತೊ ಹೇಗೆ ಶಕ್ತಿ ಜೊತೆ ಜ್ಞಾನವೂ ಶುಕ್ತಿಯೊಳಗೆ?
*****
ಮೂಲ: ವಿಲಿಯಂ ಬಟ್ಲರ್ ಏಟ್ಸ್

ಸ್ಯೂಸ್ (ಗ್ರೀಕ್ ಪುರಾಣದ ಪ್ರಕಾರ) ದೇವತೆಗಳ ರಾಜ. ಅವನು ಹಂಸದ ರೂಪದಲ್ಲಿ ಬಂದು ಮರ್‍ತ್ಯಕನ್ನಿಕೆಯಾದ ಲೀಡಾಳ ಮೇಲೆ ಎರಗಿ ಅವಳನ್ನು ಬಲಾತ್ಕಾರವಾಗಿ ಭೋಗಿಸುತ್ತಾನೆ. ಈ ಕೂಟದಿಂದ, ಹುಟ್ಟಿದ ಇಬ್ಬರು ಹೆಣ್ಣುಮಕ್ಕಳು ಹೆಲೆನ್ ಮತ್ತು ಕ್ಲೈಟಮ್ನೆಸ್ಟ್ರಾ. ಹೆಲೆನ್ ಗಂಡನನ್ನು ಬಿಟ್ಟು ಪ್ಯಾರಿಸ್ ಜೊತೆ ಟ್ರಾಯ್‌ಗೆ ಓಡಿಹೋಗುತ್ತಾಳೆ. ಅವಳ ಸಲುವಾಗಿ ಗ್ರೀಕ್ ಮತ್ತು ಟ್ರೋಜನ್ನರ ನಡುವೆ ಘೋರಯುದ್ಧ ನಡೆದು ಟ್ರಾಯ್‌ನಗರ ಉರಿದುಹೋಗುತ್ತದೆ. ಕ್ಲೈಟಮ್ನೆಸ್ಟ್ರಾ ಗಂಡನಾದ ಅಗ್‌ಮಮ್ನನ್ ಯುದ್ಧಕ್ಕೆ ಹೋದಾಗ ಬೇರೆ ಸಂಬಂಧ ಬೆಳೆಸಿ, ಗಂಡ ಹಿಂತಿರುಗಿ ಬಂದಾಗ ಮೋಸದಿಂದ ಕೊಲ್ಲಿಸುತ್ತಾಳೆ. ದೇವಮೂಲದ್ದೇ ಆದರೂ ಸ್ಯೂಸನ ಕಾಮ ಪರಾಪೇಕ್ಷೆಯನ್ನು ಲೆಕ್ಕಿಸದ್ದು; ಹಿಂಸಾತ್ಮಕವಾದದ್ದು; ಕೇವಲ ಸ್ವಾರ್ಥನಿಷ್ಠವಾದದ್ದು. ಧರ್‍ಮವಿರುದ್ಧವಾದ ಇಂಥ ಕಾಮದಿಂದ ಜನಿಸಿದ ಸಂತಾನ ಲೋಕಮಾರಕವಾದ ಹೊಸ ಅನಾಹುತಗಳಿಗೆ ದಾರಿಮಾಡಿದ್ದನ್ನು ಕವನ ಸೂಚಿಸುವಂತಿದೆ. ಏಟ್ಸನ ಚಿತ್ರಕಶಕ್ತಿಗೆ ಸೊಗಸಾದ ನಿದರ್‍ಶನ ಈ ಪದ್ಯ.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...