ಸಂಧಿ

ಆಗಮ
ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು
ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ
ಪಡುಕೋಣೆಯ ರಂಗಮಹಲಿನ ಮೇಲೆ
ದೇವಾನುದೇವತೆಗಳ ಅರೆನಗ್ನ ನರ್ತನ
ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ

ಲೋಪ
ಬಡ ಹೊಟ್ಟೆಯ ಮೇಲರಳಿದ ಕಮಲದ
ತಲೆ ತುಂಬ ತುಂಬಿಗಳು ಭ್ರಮರವೋ ಭ್ರಮೆಯೋ?
ಬಲವೇ ಬದುಕಾದ ಈ ಕಾಡಿನಲ್ಲಿ
ಎಲೆಮನೆಯಲ್ಲಿರುವೀ ತೇಲುನೋಟದವನಿಗೆ
ಉಳಿಗಾಲವಿದೆಯೇ? ಈ ಮಾಂತ್ರಿಕನ ಮಂತ್ರ ನಿಜವೆ?

ಆದೇಶ
ಮಧ್ಯ ಸೂತ್ರವನಂದಗೊಳಿಸುವ
ಇದು ತೇಲುತೆಪ್ಪ
ಕಲ್ಲಾಗಿ ಕೆಳಗಿಳಿಯದೆ
ಆವಿಯಾಗಿ ಮೇಲೇರದೆ
ಕಡಲ ತೊಡೆಯ ಮೇಲೆ ನಲಿದಾಡುವ
ಮಸೆಯುವ ಹಲ್ಲುಗಳ ಗಣಿಸದೆ
ತೆರೆಗಳ ಪರದಾಟವನ್ನು ಎಣಿಸುವ
ಕ್ಷಣವಿದ್ದರೂ ಕ್ಷಣಿಕವಾಗದೆ
ಹಿಂದು ಮುಂದನೊಂದಾಗಿ ಬೆಸೆಯುವ ಲೀಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೊಂಟನೋವಿಗೆ ಎಣ್ಣೆ ಮಜ್ಜನ
Next post ಕಾರ್ಯಕಾರಣ ಸಂಬಂಧ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys