Home / ಕವನ / ಕೋಲಾಟ / ಗೊಲ್ಲರ ಹುಡುಗ

ಗೊಲ್ಲರ ಹುಡುಗ

ಚಿನ್ನದ ಗುದುರೆ ಗೊಲ್ಲರ ಹುಡುಗಾ ಕೋಲೆನ್ನ ಕೋಲೇ
ವಳೆ ಲಾಗಲೇ ಲೇನು ಮಾಡ್ಯಾನಾ || ೧ ||

ಅರಸೂನ ವನಗೆ ಲಾದರೆ ನಡುದ್ಯಾ
ವಳ್ಳೆಲಾಗಲೇ ಲೇನು ಮಾಡ್ಯನು || ೨ ||

ವಳ್ಳೆಲಾಗಲೇ ಅರಸಗೆಲಾದರ್‍ಯೇನು ಹೇಳುದು?
“ನಿಮ್ಮಲೆ ಮನುಗೆ ಸಾನಲೆ ಉಳುತೇ” || ೩ ||

ಅಂದಿ ಅರಸಗೆ ಲಾದರೆ ನುಡುದನು ಗೊಲ್ಲಾರ ಹುಡುಗಾ
ಚಿನ್ನದ ಗುದುರೆ ಗೊಲ್ಲಾರ ಹುಡುಗಾ || ೪ ||

ಲಾಗಲೆ ಲೇನು ಕೇಳ್ಯಾನು ಅರಸ?
ಮರಮನೆಲೆ ಯಾವ ಲಕ್ಕಿಲಾಸೋ || ೫ ||

ಯಲಗೊತ್ತುಲೆ ಕೇಳಿದ ಅರಸ
ಯಾವರೆ ಕೆಲಸಾ ಬೇಕಲ ಸ್ವಾಮಿ || ೬ ||

ಯಾವರೆ ಕೆಲಸಾ ಮಾಡಲು ಎಲ್ಲೇ
ಲಾಗಲೆ ಲೇನೂ ಮಾಡನೆ ಹುಡುಗಾ || ೭ ||

ಲಡುಗೆಲೆ ಮನೆಗೆ ಲಾದರೆನೋಡಿ
ಲಡುಗೆಲೇ ಲಾದರೆ ಮಾಡುಲಿಕೆ ಹಾಕ್ಯಾ || ೮ ||

ಗೊಲ್ಲರ ಹುಡುಗಾ ಯೇನಾರೆ ಮಾಡ್ಯಾ?
ಬೇಕಾದ ಲಡುಗೆ ಮಾಡಿರಿ ಇನ್ನೇ || ೯ ||

ತಾಸೀನ ಲೊಳಗೆ ಮಾಡುತ್ಯಾನು ಹುಡುಗಾ
ಒಳ್ಳೆ ಲಡಗೆ ಲೂಟಕಾದರೆ ಕರದಾ || ೧೦ ||

ಒಳ್ಳೆ ಅರಶಗೆ ಲಡುಗೇ ಮಾಡಿದ
ನಿತ್ಯದಂತೆ ದೇವರ ಪೂಜ್ಯೇ || ೧೧ ||

ಪೂಜೆನಲಾದರೆ ಮಾಡ್ಯಾನ ಲರಸ
ಊಟಕೆಲಾದರೆ ನಡೆದನು ಲರಸ || ೧೨ ||

ನಡೆದನೋ ಲರಸ ನೋಡಿರಿ ಶಿವನೆ
ಚಿನ್ನದ ಗುದುರೇ ಗೊಲ್ಲರ ಹುಡುಗಾ || ೧೩ ||

ಲರಸಗೆ ನೋಡಿ ಹೇಳ್ಯಾ ನೆಲಾದರೆ
ಬಟ್ಟಲದೊಳಗೆ ಹಾಕ್ಯಾನು ಲಿನ್ನೆ || ೧೪ ||

ಊಟದ ರುಚಿಯೇ ನೋಡ್ಯಾನು ಲರಸಾ
ಪಕವನಲಾದರೆ ಆಗಿದೊಶೀವನೆ || ೧೫ ||

ಊಟಕೆ ಆದರೆ ಬೆರಗ್ಯಾನೋ ಲರಸು
ಚಿನ್ನದ ಗುದುರೆ ಗೊಲ್ಲರ ಹುಡುಗಾ
ಬೇಕಾದ ಊಟ ಉಪಚಾರ ಮಾಡುತ್ಯಾ || ೧೬ ||
*****
ಹೇಳಿದವರು: ಢಾಕು ದೇವು ನಾಯ್ಕ, ಅರಗಾ ತಾಲೂಕು, ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...