Home / ಕವನ / ಕವಿತೆ / ಇದೆಂತಹ ಗಡಿಗಳು

ಇದೆಂತಹ ಗಡಿಗಳು

ಇದೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು
ಕಾವೇರಿಯ ತಟದಲಿ
ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ
ಕೂಡಿ ಬೆಳೆದವಳು ನಾನು
ಇಲ್ಲಿ ಮುಹಾಜಿರಳಾಗಿರುವೆ.

ಅಲ್ಲಿ ಮಾಮರಗಳ ಹತ್ತಿ
ಮರಕೋತಿ ಆಡಿದ್ದವಳು
ಆ ನದಿ, ಬೆಟ್ಟ, ಗಿಳಿ, ಕೋಗಿಲೆ
ಹಿಂಡು ಹಿಂಡು ಗೆಳತಿಯರನು
ಅಲ್ಲಿಯೇ ಬಿಟ್ಟು ಬಂದಿರುವೆ,
ಅಲ್ಲಿ ಕಾವೇರಿಯ ತಟದಲ್ಲಿಯೇ.

ನೋಟು ಬುಕ್ಕಿನ ಪುಟಗಳ ಮಧ್ಯೆ
ಅಂದು ಬಚ್ಚಿಟ್ಟ ಆ ನವಿಲುಗರಿಯಿದೆ
ಚಾಚಾನ ಪುಟ್ಟ ಮಗಳೀಗ
ಬೆಳೆದು ದೊಡ್ಡವಳಾಗಿರಬೇಕು
ಮರ್‍ಯಾದೆಯ ದುಪಟ್ಟಾ
ತಲೆ ಮೇಲೆ ಹೊದೆಯುತ್ತಿರಬೇಕು.

ಅಲಿಂದ ಬಿಟ್ಟು ಬರುವಾಗ
ಅವಳಿನ್ನೂ ಪುಟ್ಟ ಮಗು
ತೊಟ್ಟಿಲ್ಲಲಿ ಒಂದೇ ಸಮ ಅಳುತ್ತಿದ್ದಳು.
ಅಮ್ಮನ ಜಹಾಜಿನಾಕಾರದ ಪಾನ್‌ದಾನ್‌೧
ಸುಂದರ ಉಗಾಲ್ದಾನ್೨
ಅಪ್ಪನ ಸುರಾಯಿಯಾಕಾರದ
ಕುಸುರಿ ಕೆತ್ತನೆಯ ಮುರಾದಾಬಾದಿ ಹುಕ್ಕಾ
ಎಲ್ಲ ಅಲ್ಲಿಯೇ ಬಿಟ್ಟು ಬಂದಿರುವೆ.

ಆ ಪಡಸಾಲೆ ನನಗಿನ್ನೂ ನೆನಪಿದೆ
ಮುಂದಿರುವ ಛಪ್ಪರದಲ್ಲಿಯೇ ಬಿಟ್ಟು ಬಂದಿದ್ದೆ
ನನ್ನ ಪುಟ್ಟ ಪುಟ್ಟ ಚಪ್ಪಲಿಗಳು
ಒಮ್ಮೆಲೇ ಏನಾಯಿತೋ ಗೊತ್ತಿಲ್ಲ
ದೇಶ ವಿಭಜನೆಯಾಗುತ್ತದೆಯೆಂದರು.
ಅಪ್ಪ ದಡದಡ್ಡನೇ ರೈಲು ಹತ್ತಿಸಿದ್ದರು
ನನ್ನೊಡನೆ ಆಡುತ್ತಿದ್ದ ಗೆಳತಿಯರ
ಕೈ ಕೊಸರಿ ಅಪ್ಪನ ಕೈ ಹಿಡಿದಿದ್ದೆ.

ರೈಲಿನ ಡಬ್ಬ ಹಿಡಿದು ಅಳುತ್ತಿದ್ದ
ಅಜ್ಜಿಯನು ಅಲ್ಲಿಯೇ ಬಿಟ್ಟು ಬಂದಿದ್ದೆ
ಅಮ್ಮಿ, ಅಬ್ಬಾ, ಭಯ್ಯಾನೊಂದಿಗೆ
ಕರಾಚಿಯ ರೈಲು ಹತ್ತಿದ್ದೆ.
ಅಲ್ಲಿಂದ ಯಾರಾದರೂ ಬಂದರೆ ಸಾಕು
ನನ್ನ ಹಳೆಯ ನೆನಪಿನ ಬುತ್ತಿ ಬಿಚ್ಚಿಕೊಳ್ಳುವೆ

ಕಾವೇರಿಯ ತಟದ ಆ ಮನೆ ಕಿಟಕಿಯಲಿ
ಬಿಟ್ಟು ಬಂದಿರುವ ನನ್ನ ಪುಟ್ಟಗೊಂಬೆ
ಅಮ್ಮನ ಪಾನದಾನ, ಅಪ್ಪನ ಹುಕ್ಕಾ
ನೋಟುಬುಕ್ಕಿನಲ್ಲಿನ ನವಿಲುಗರಿ
ಗೆಳತಿಯರ ದಂಡು, ಅವರ ಮದುವೆ
ಮಕ್ಕಳು, ಇತರೇ ಕುಶಲ ವಿಚಾರಿಸುವೆ.

ಮೊಹರಂ ಬಂದಿತೆಂದರೆ ಸಾಕು
ನನ್ನೂರು ಮದುಮನೆಯಂತೆ ಕಂಗೊಳಿಸುತ್ತಿತ್ತು
ಪಶ್ಚಿಮ ಘಟ್ಟದಿಂದ ಹರಿಯುವ
ಪ್ರತಿಯೊಂದು ನದಿಯೂ ನನಗೆ
ವಜು ಮಾಡು ಬಾ ಎಂದು ಕರೆಯುತ್ತಿದ್ದವು
ಚಿನಾಬ್ ನದಿಯ ನೀರನ್ನು ಮುಟ್ಟದಿರು
ನೀನು ಮುಹಾಜಿರಳು ಎಂದಾಗ
ನೋವಿನಿಂದ ಮನಸು ಮಿಡಿಯುತ್ತಿತ್ತು

ಗಾಲಿಬ್, ಇಕ್ಬಾಲ್, ಸೂರ್, ಕಬೀರ,
ಸಂತ ಶರಣರ ಗ್ರಂಥಗಳೆಲ್ಲ
ಅಲ್ಲಿಯೇ ಬಿಟ್ಟು ಬಂದಿರುವೆ
ನನ್ನ ಜೀವವೆಲ್ಲ ಅಲ್ಲಿಯೇ ಇದೆ
ದೇಹ ಮಾತ್ರ ಇಲ್ಲಿದೆ ಸುಮ್ಮನೆ
ಮನಸಿಗೆಂತಹ ಗಡಿಗಳು
ಎಂತಹ ವಿಭಾಜಕ ರೇಖೆಗಳು?
*****
೧ ಎಲೆ ಅಡಿಕೆ ಇಡುವ ಪುಟ್ಟ ಪೆಟ್ಟಿಗೆ
೨ ಉಗುಳುವ ಪೀಕದಾನಿ

Tagged:

Leave a Reply

Your email address will not be published. Required fields are marked *

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...