Home / ಕವನ / ಕವಿತೆ / ಮುನಿಯನ್ ಮೊಕ್ಕ್ ಮೂರ್ ನೀರು

ಮುನಿಯನ್ ಮೊಕ್ಕ್ ಮೂರ್ ನೀರು

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ
ಕಪ್ಪೇಗ್ ಆವು ಕಾಯ್ಕೊಂಡಂಗೆ
ನಿಂತ್ಕಂಡೌನೆ ಮುನ್ಯ!
ಯೆಂಡಾ ಮಾರೋ ಗೆಣ್ಯ!
ಕುಡಿಯೋರ್‍ನ್ ಇಡದಿ ಸುಲದಾಕೋಕೆ
ಮಡಗೌನ್ ಎಂಡದ್ ಮನೆಯ! ೧

ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ
ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್
ನೀರ್ ಗೀರ್ ಬೆರಸಿ ಮಾರಿ
ತೊಟ್ ತೊಟ್ಗೂನೆ ವೋರಿ
ಬಡವನ್ ಜೀತದ್ ಪುಡಿಕಾಸ್ನೆಲ್ಲ
ಕೆರಕೋಂತೌನೆ ಗೋರಿ! ೨

ಮೈಯಿನ್ ರಕ್ತ ನೀರ್ ಮಾಡ್ಕೊಂಡಿ
ಬೆವರಿನ್ ಮಳೇಲ್ ಕಾಸ್ ಕೆರಕೊಂಡಿ
ನೆಟ್ಗೆ ಬಂದ್ರೆ ಇಲ್ಗೆ
ಮೋಸಮಾಡ್ತ ಮೆಲ್ಗೆ
ಬತ್ಕೊಂಡ್ ಒಟ್ಟೇನ್ ಬಗದಿರಕೋಳೊ
ಡೊಳ್ಳೀನ್ ಆಕ್ಬೇಕ್ ಗಲ್ಗೆ! ೩

ಕೊಟ್ಟಿದ್ನೆ ಯಿಂದಕ್ ಕೊಟ್ಟೋನು
ಕೊಟ್ಟಿದ್ಕಿಂತ ಯೆಚ್ ಕೊಟ್ಟೋನು
ಮನ್ಸಾನೆ ಅಂತಂದ್ರೆ-
ದೇವ್ರೆ ಔನ್ ಅಂತಂದ್ರೆ-
ಕೊಟ್ಟಿದ್ನೂನೆ ಕೊಡದಿದ್ದೋನ್ಗೆ
ಯೆಸರ್ ಇಕ್ಕೋದೆ ತೊಂದ್ರೆ! ೪

ಕಾಸ್ ಈಸ್ಕೊಂಡಿ ಕಸ ಕೊಟ್ಟಿ
ದರ್‍ಮ ಗಿರ್‍ಮ ಮೂಲೇಗ್ ಇಟ್ಟಿ
ದುಡ್ ಕೂಡಾಕೋನ್ ಯಾರು?
ಬೋಗಳ ತಿನ್ನೋನ್ ಯಾರು?
ಎಲ್ಲಾರೂನೆ ಯೋಳಾದಂದ್ರೆ
‘ಮುನಿಯನ್ ಮೊಕ್ಕ್ ಮೂರ್ ನೀರು!’ ೫

ಯಿಂದ್ ಇಬೀಸ್ನ ಕೈ ಕೈ ಮುಗದಿ
ರಾವಣಂಗ್ ಏಳ ಕಡೇಗ್ ಉಗದಿ
ಅನ್ಯಾಯ ಬೇಡಾಂತ!
ನ್ಯಾಯಾನೆ ಮಾಡಂತ!
ತಿಳದೋನ್ ಮಾತ್ರ ಮೂಲೇಗ್ ಆಕ್ದೋನ್
ಗತಿ ಏನಾಯ್ತೂಂತ! ೬

ಬಡವನ್ ತಿನ್ನೊ ಸಿರಿಮಂತಮ್ಮ
ಮುನಿಯಂಗ್ ಅಕ್ಕ! ಇವನೆ ತಮ್ಮ!
ಮುನಿಯಂಗ್ ಅಕ್ಕನ ಚಾಳಿ
ಮನೇ ಮುರಿಯೋ ಗಾಳಿ!
ಯೋಳಿದ್ ಕೇಳ್ದಿದ್ರ್ ಯಾರ್‍ಗೇನಂತೆ?
ಎಕ್ಕ ವುಟ್ಟೋಗ್ಲೇಳಿ! ೭
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...