Home / ಕವನ / ಕವಿತೆ / ಮುನಿಯನ್ ಮೊಕ್ಕ್ ಮೂರ್ ನೀರು

ಮುನಿಯನ್ ಮೊಕ್ಕ್ ಮೂರ್ ನೀರು

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ
ಕಪ್ಪೇಗ್ ಆವು ಕಾಯ್ಕೊಂಡಂಗೆ
ನಿಂತ್ಕಂಡೌನೆ ಮುನ್ಯ!
ಯೆಂಡಾ ಮಾರೋ ಗೆಣ್ಯ!
ಕುಡಿಯೋರ್‍ನ್ ಇಡದಿ ಸುಲದಾಕೋಕೆ
ಮಡಗೌನ್ ಎಂಡದ್ ಮನೆಯ! ೧

ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ
ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್
ನೀರ್ ಗೀರ್ ಬೆರಸಿ ಮಾರಿ
ತೊಟ್ ತೊಟ್ಗೂನೆ ವೋರಿ
ಬಡವನ್ ಜೀತದ್ ಪುಡಿಕಾಸ್ನೆಲ್ಲ
ಕೆರಕೋಂತೌನೆ ಗೋರಿ! ೨

ಮೈಯಿನ್ ರಕ್ತ ನೀರ್ ಮಾಡ್ಕೊಂಡಿ
ಬೆವರಿನ್ ಮಳೇಲ್ ಕಾಸ್ ಕೆರಕೊಂಡಿ
ನೆಟ್ಗೆ ಬಂದ್ರೆ ಇಲ್ಗೆ
ಮೋಸಮಾಡ್ತ ಮೆಲ್ಗೆ
ಬತ್ಕೊಂಡ್ ಒಟ್ಟೇನ್ ಬಗದಿರಕೋಳೊ
ಡೊಳ್ಳೀನ್ ಆಕ್ಬೇಕ್ ಗಲ್ಗೆ! ೩

ಕೊಟ್ಟಿದ್ನೆ ಯಿಂದಕ್ ಕೊಟ್ಟೋನು
ಕೊಟ್ಟಿದ್ಕಿಂತ ಯೆಚ್ ಕೊಟ್ಟೋನು
ಮನ್ಸಾನೆ ಅಂತಂದ್ರೆ-
ದೇವ್ರೆ ಔನ್ ಅಂತಂದ್ರೆ-
ಕೊಟ್ಟಿದ್ನೂನೆ ಕೊಡದಿದ್ದೋನ್ಗೆ
ಯೆಸರ್ ಇಕ್ಕೋದೆ ತೊಂದ್ರೆ! ೪

ಕಾಸ್ ಈಸ್ಕೊಂಡಿ ಕಸ ಕೊಟ್ಟಿ
ದರ್‍ಮ ಗಿರ್‍ಮ ಮೂಲೇಗ್ ಇಟ್ಟಿ
ದುಡ್ ಕೂಡಾಕೋನ್ ಯಾರು?
ಬೋಗಳ ತಿನ್ನೋನ್ ಯಾರು?
ಎಲ್ಲಾರೂನೆ ಯೋಳಾದಂದ್ರೆ
‘ಮುನಿಯನ್ ಮೊಕ್ಕ್ ಮೂರ್ ನೀರು!’ ೫

ಯಿಂದ್ ಇಬೀಸ್ನ ಕೈ ಕೈ ಮುಗದಿ
ರಾವಣಂಗ್ ಏಳ ಕಡೇಗ್ ಉಗದಿ
ಅನ್ಯಾಯ ಬೇಡಾಂತ!
ನ್ಯಾಯಾನೆ ಮಾಡಂತ!
ತಿಳದೋನ್ ಮಾತ್ರ ಮೂಲೇಗ್ ಆಕ್ದೋನ್
ಗತಿ ಏನಾಯ್ತೂಂತ! ೬

ಬಡವನ್ ತಿನ್ನೊ ಸಿರಿಮಂತಮ್ಮ
ಮುನಿಯಂಗ್ ಅಕ್ಕ! ಇವನೆ ತಮ್ಮ!
ಮುನಿಯಂಗ್ ಅಕ್ಕನ ಚಾಳಿ
ಮನೇ ಮುರಿಯೋ ಗಾಳಿ!
ಯೋಳಿದ್ ಕೇಳ್ದಿದ್ರ್ ಯಾರ್‍ಗೇನಂತೆ?
ಎಕ್ಕ ವುಟ್ಟೋಗ್ಲೇಳಿ! ೭
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...