Home / ಕವನ / ಕವಿತೆ / ಮುನಿಯನ್ ಮೊಕ್ಕ್ ಮೂರ್ ನೀರು

ಮುನಿಯನ್ ಮೊಕ್ಕ್ ಮೂರ್ ನೀರು

ಕೊಕ್ರೆ ಮೀನ್ಗೆ ವೊಂಚ್ ಆಕ್ದಂಗೆ
ಕಪ್ಪೇಗ್ ಆವು ಕಾಯ್ಕೊಂಡಂಗೆ
ನಿಂತ್ಕಂಡೌನೆ ಮುನ್ಯ!
ಯೆಂಡಾ ಮಾರೋ ಗೆಣ್ಯ!
ಕುಡಿಯೋರ್‍ನ್ ಇಡದಿ ಸುಲದಾಕೋಕೆ
ಮಡಗೌನ್ ಎಂಡದ್ ಮನೆಯ! ೧

ಕುಡಿಯೋರ್‍ಗ್ ಎಂಗಿದ್ರೇನು! ಬುಂಡೆ
ತುಂಬಿದರಾಯ್ತ್ ಅಂದ್ ಮುನ್ಯ ಯೆಂಡಕ್
ನೀರ್ ಗೀರ್ ಬೆರಸಿ ಮಾರಿ
ತೊಟ್ ತೊಟ್ಗೂನೆ ವೋರಿ
ಬಡವನ್ ಜೀತದ್ ಪುಡಿಕಾಸ್ನೆಲ್ಲ
ಕೆರಕೋಂತೌನೆ ಗೋರಿ! ೨

ಮೈಯಿನ್ ರಕ್ತ ನೀರ್ ಮಾಡ್ಕೊಂಡಿ
ಬೆವರಿನ್ ಮಳೇಲ್ ಕಾಸ್ ಕೆರಕೊಂಡಿ
ನೆಟ್ಗೆ ಬಂದ್ರೆ ಇಲ್ಗೆ
ಮೋಸಮಾಡ್ತ ಮೆಲ್ಗೆ
ಬತ್ಕೊಂಡ್ ಒಟ್ಟೇನ್ ಬಗದಿರಕೋಳೊ
ಡೊಳ್ಳೀನ್ ಆಕ್ಬೇಕ್ ಗಲ್ಗೆ! ೩

ಕೊಟ್ಟಿದ್ನೆ ಯಿಂದಕ್ ಕೊಟ್ಟೋನು
ಕೊಟ್ಟಿದ್ಕಿಂತ ಯೆಚ್ ಕೊಟ್ಟೋನು
ಮನ್ಸಾನೆ ಅಂತಂದ್ರೆ-
ದೇವ್ರೆ ಔನ್ ಅಂತಂದ್ರೆ-
ಕೊಟ್ಟಿದ್ನೂನೆ ಕೊಡದಿದ್ದೋನ್ಗೆ
ಯೆಸರ್ ಇಕ್ಕೋದೆ ತೊಂದ್ರೆ! ೪

ಕಾಸ್ ಈಸ್ಕೊಂಡಿ ಕಸ ಕೊಟ್ಟಿ
ದರ್‍ಮ ಗಿರ್‍ಮ ಮೂಲೇಗ್ ಇಟ್ಟಿ
ದುಡ್ ಕೂಡಾಕೋನ್ ಯಾರು?
ಬೋಗಳ ತಿನ್ನೋನ್ ಯಾರು?
ಎಲ್ಲಾರೂನೆ ಯೋಳಾದಂದ್ರೆ
‘ಮುನಿಯನ್ ಮೊಕ್ಕ್ ಮೂರ್ ನೀರು!’ ೫

ಯಿಂದ್ ಇಬೀಸ್ನ ಕೈ ಕೈ ಮುಗದಿ
ರಾವಣಂಗ್ ಏಳ ಕಡೇಗ್ ಉಗದಿ
ಅನ್ಯಾಯ ಬೇಡಾಂತ!
ನ್ಯಾಯಾನೆ ಮಾಡಂತ!
ತಿಳದೋನ್ ಮಾತ್ರ ಮೂಲೇಗ್ ಆಕ್ದೋನ್
ಗತಿ ಏನಾಯ್ತೂಂತ! ೬

ಬಡವನ್ ತಿನ್ನೊ ಸಿರಿಮಂತಮ್ಮ
ಮುನಿಯಂಗ್ ಅಕ್ಕ! ಇವನೆ ತಮ್ಮ!
ಮುನಿಯಂಗ್ ಅಕ್ಕನ ಚಾಳಿ
ಮನೇ ಮುರಿಯೋ ಗಾಳಿ!
ಯೋಳಿದ್ ಕೇಳ್ದಿದ್ರ್ ಯಾರ್‍ಗೇನಂತೆ?
ಎಕ್ಕ ವುಟ್ಟೋಗ್ಲೇಳಿ! ೭
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...