ಕೋಲು ಪದ (ಬೆಂಕಿಗೆ ಬಂದ)

ಬೆಂಕಿಗೆ ಬಂದ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ ಹೋದನೇ || ೧ ||

ಸೊಣ್ಣಕ್ಕೆ ಬಂದ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೨ ||

ನೀರಿಗೆ ಬಂದಾ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೩ ||

ಅಡಕೊಳ್ಕ್ ಬಂದಾ ನಮನ ಮಾಡ್ದ
ಕಂಚನ ರೊಕ್ಕ ಕಯ್ಯಲ್ ಕೊಟ್ಟೆ
ಡುಂಕ ವೈಕೊಂಡ್ ಹೋದನೇ || ೪ ||

ಕರ್‍ಯ ಕಾಗನ ಶೀರೀ ಉಟ್ಟಿಕೊಂಡ್
ಕೊಂಡಿ ಮೇನ್ ಶಿಟ್ಟು ಇಟ್ಟಿಕೊಂಡಿ
ಬಂದಳವ್ವಾ ಬಂದಳೇ
ಸೂಲಗಿರತೀ ಬಂದಳೇ || ೫ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೨೫
Next post ಅಂದಿಲ್ಲದ ಕಷ್ಟವಿಂದ್ಯಾಕೆ ಉಣ್ಣಲಿಕೆ?

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…