ಯರಲವವೆಂಬುದು ಸತ್ಯ

ಯರಲವವೆಂಬುದು ಸತ್ಯ
ಯರಲವವೆಂಬುದೆ ನಿತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಅ ಆ ಇ ಈ ಮಿಥ್ಯ
ಎ ಏ ಐಯೂ ಮಿಥ್ಯ
ಋ ೠ ಎಂಬುದು ಮಿಥ್ಯ
ಒ ಓ ಔವೂ ಮಿಥ್ಯ
ಅಂ ಅಃ ಭಾರೀ ಮಿಥ್ಯ
ಯರಲವವೆಂಬುದೆ ಸತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಕ ಖ ಗ ಘ ಮಿಥ್ಯ
ಚ ಛ ಜ ಝ ಮಿಥ್ಯ
ಟ ಠ ಡ ಢ ಮಿಥ್ಯ
ತ ಥ ದ ಧ ಮಿಥ್ಯ
ಪ ಫ ಬ ಭ ಮಿಥ್ಯ
ಜ ಞ ಣ ನ ಮ ಎಂಬುದು ಭೀಕರ ಮಿಥ್ಯ
ಯರಲವವೆಂಬುದೆ ಸತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಹ ಳ ಕ್ಷ ಜ್ಞ‌ ಅಂತಿಮ ಮಿಥ್ಯ
ಯ ರ ಲ ವ ಆದಿಮ ಸತ್ಯ
ಸ ಎಂಬುದು ಸತ್ಯ
ಶ ಷ ಎಂಬುದಪಥ್ಯ
ಯರಲವವೆಂಬುದೆ ಸತ್ಯ
ಯರಲವವೆಂಬುದೆ ನಿತ್ಯ
ಹರಿ ಶಂಭೋಶಂಕರ
ಯರಲವ ಯರಲವ ಯರಲವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಡುತಿಹನದೊ
Next post ಉಮರನ ಒಸಗೆ – ೨೮

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…