ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ
ತ್ಯಾಗರಾಜರಿಲ್ಲದೆ
ಕೃಷ್ಣನೇನು ಗೊತ್ತು
ಪುರಂದರ ದಾಸರಿಲ್ಲದೆ

ಶಿವನೇನು ಗೊತ್ತು ನಮಗೆ
ಅಲ್ಲಮರಿಲ್ಲದೆ
ದಿವವೇನು ಗೊತ್ತು ನಮಗೆ
ಸೂರ್‍ಯಚಂದ್ರರಿಲ್ಲದೆ

ಭಕ್ತಿಯೇನು ಗೊತ್ತು ಆ-
ನಂದವೇನು ಗೊತ್ತು
ಅನುಭವವೇನು ಗೊತ್ತು ಅನು-
ಭಾವವೇನು ಗೊತ್ತು

ಸಂಗೀತವೇನು ಗೊತ್ತು
ನಾದವೇನು ಗೊತ್ತು
ತಾಳಲಯವೇನು ಗೊತ್ತು
ಸಂಸ್ಕಾರವಿಲ್ಲದೆ

ಬುದ್ಧಿಯೇನು ಗೊತ್ತು
ಗಾದೆಯಿಲ್ಲದೆ
ಕಲ್ಪನೆಯೇನು ಗೊತ್ತು
ಕತೆಯಿಲ್ಲದೆ

ಕನಸೇನು ಗೊತ್ತು
ಜೋಗುಳವಿಲ್ಲದೆ
ಆಟವೇನು ಗೊತ್ತು
ಪುಟ್ಟ ಮಕ್ಕಳಿಲ್ಲದೆ

ಋತುವೇನು ಗೊತ್ತು ಬೇ-
ಸಾಯವಿಲ್ಲದೆ
ದಿನ ತಿಥಿಗಳೇನು ಗೊತ್ತು
ಹಬ್ಬಗಳಿಲ್ಲದೆ

ರಾಮಾಯಣ ಮಹಾಭಾರತಗಳೇನು ಗೊತ್ತು
ಕಬ್ಬಗಳಿಲ್ಲದೆ
ಬಂಧುಗಳೇನು ಗೊತ್ತು ಮದುವೆ
ಮುಂಜಿಗಳಿಲ್ಲದೆ

ಮಮತೆಯೇನು ಗೊತ್ತು
ಮಾತೆಯಿಲ್ಲದೆ
ಪ್ರೀತಿಯೇನು ಗೊತ್ತು
ಸಂಸಾರವಿಲ್ಲದೆ

ಅಂದವೇನು ಗೊತ್ತು
ಹೆಣ್ಣಿಲ್ಲದೆ
ಕಲೆಗಳೇನು ಗೊತ್ತು ಒಳ-
ಗಣ್ಣಿಲ್ಲದೆ

ಯಾವುದೇನು ಗೊತ್ತು ತಾ-
ಯ್ನುಡಿಯಿಲ್ಲದೆ
ಜಗವೇನು ಗೊತ್ತು ಜಗ-
ನ್ಮಾತೆಯಿಲ್ಲದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿ
Next post ಉಮರನ ಒಸಗೆ – ೨೧

ಸಣ್ಣ ಕತೆ

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…