Home / ಕವನ / ಕವಿತೆ / ರಾಮನೇನು ಗೊತ್ತು

ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ
ತ್ಯಾಗರಾಜರಿಲ್ಲದೆ
ಕೃಷ್ಣನೇನು ಗೊತ್ತು
ಪುರಂದರ ದಾಸರಿಲ್ಲದೆ

ಶಿವನೇನು ಗೊತ್ತು ನಮಗೆ
ಅಲ್ಲಮರಿಲ್ಲದೆ
ದಿವವೇನು ಗೊತ್ತು ನಮಗೆ
ಸೂರ್‍ಯಚಂದ್ರರಿಲ್ಲದೆ

ಭಕ್ತಿಯೇನು ಗೊತ್ತು ಆ-
ನಂದವೇನು ಗೊತ್ತು
ಅನುಭವವೇನು ಗೊತ್ತು ಅನು-
ಭಾವವೇನು ಗೊತ್ತು

ಸಂಗೀತವೇನು ಗೊತ್ತು
ನಾದವೇನು ಗೊತ್ತು
ತಾಳಲಯವೇನು ಗೊತ್ತು
ಸಂಸ್ಕಾರವಿಲ್ಲದೆ

ಬುದ್ಧಿಯೇನು ಗೊತ್ತು
ಗಾದೆಯಿಲ್ಲದೆ
ಕಲ್ಪನೆಯೇನು ಗೊತ್ತು
ಕತೆಯಿಲ್ಲದೆ

ಕನಸೇನು ಗೊತ್ತು
ಜೋಗುಳವಿಲ್ಲದೆ
ಆಟವೇನು ಗೊತ್ತು
ಪುಟ್ಟ ಮಕ್ಕಳಿಲ್ಲದೆ

ಋತುವೇನು ಗೊತ್ತು ಬೇ-
ಸಾಯವಿಲ್ಲದೆ
ದಿನ ತಿಥಿಗಳೇನು ಗೊತ್ತು
ಹಬ್ಬಗಳಿಲ್ಲದೆ

ರಾಮಾಯಣ ಮಹಾಭಾರತಗಳೇನು ಗೊತ್ತು
ಕಬ್ಬಗಳಿಲ್ಲದೆ
ಬಂಧುಗಳೇನು ಗೊತ್ತು ಮದುವೆ
ಮುಂಜಿಗಳಿಲ್ಲದೆ

ಮಮತೆಯೇನು ಗೊತ್ತು
ಮಾತೆಯಿಲ್ಲದೆ
ಪ್ರೀತಿಯೇನು ಗೊತ್ತು
ಸಂಸಾರವಿಲ್ಲದೆ

ಅಂದವೇನು ಗೊತ್ತು
ಹೆಣ್ಣಿಲ್ಲದೆ
ಕಲೆಗಳೇನು ಗೊತ್ತು ಒಳ-
ಗಣ್ಣಿಲ್ಲದೆ

ಯಾವುದೇನು ಗೊತ್ತು ತಾ-
ಯ್ನುಡಿಯಿಲ್ಲದೆ
ಜಗವೇನು ಗೊತ್ತು ಜಗ-
ನ್ಮಾತೆಯಿಲ್ಲದೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...