Home / ಕವನ / ಕವಿತೆ / ರಾಮನೇನು ಗೊತ್ತು

ರಾಮನೇನು ಗೊತ್ತು

ರಾಮನೇನು ಗೊತ್ತು ನಮಗೆ
ತ್ಯಾಗರಾಜರಿಲ್ಲದೆ
ಕೃಷ್ಣನೇನು ಗೊತ್ತು
ಪುರಂದರ ದಾಸರಿಲ್ಲದೆ

ಶಿವನೇನು ಗೊತ್ತು ನಮಗೆ
ಅಲ್ಲಮರಿಲ್ಲದೆ
ದಿವವೇನು ಗೊತ್ತು ನಮಗೆ
ಸೂರ್‍ಯಚಂದ್ರರಿಲ್ಲದೆ

ಭಕ್ತಿಯೇನು ಗೊತ್ತು ಆ-
ನಂದವೇನು ಗೊತ್ತು
ಅನುಭವವೇನು ಗೊತ್ತು ಅನು-
ಭಾವವೇನು ಗೊತ್ತು

ಸಂಗೀತವೇನು ಗೊತ್ತು
ನಾದವೇನು ಗೊತ್ತು
ತಾಳಲಯವೇನು ಗೊತ್ತು
ಸಂಸ್ಕಾರವಿಲ್ಲದೆ

ಬುದ್ಧಿಯೇನು ಗೊತ್ತು
ಗಾದೆಯಿಲ್ಲದೆ
ಕಲ್ಪನೆಯೇನು ಗೊತ್ತು
ಕತೆಯಿಲ್ಲದೆ

ಕನಸೇನು ಗೊತ್ತು
ಜೋಗುಳವಿಲ್ಲದೆ
ಆಟವೇನು ಗೊತ್ತು
ಪುಟ್ಟ ಮಕ್ಕಳಿಲ್ಲದೆ

ಋತುವೇನು ಗೊತ್ತು ಬೇ-
ಸಾಯವಿಲ್ಲದೆ
ದಿನ ತಿಥಿಗಳೇನು ಗೊತ್ತು
ಹಬ್ಬಗಳಿಲ್ಲದೆ

ರಾಮಾಯಣ ಮಹಾಭಾರತಗಳೇನು ಗೊತ್ತು
ಕಬ್ಬಗಳಿಲ್ಲದೆ
ಬಂಧುಗಳೇನು ಗೊತ್ತು ಮದುವೆ
ಮುಂಜಿಗಳಿಲ್ಲದೆ

ಮಮತೆಯೇನು ಗೊತ್ತು
ಮಾತೆಯಿಲ್ಲದೆ
ಪ್ರೀತಿಯೇನು ಗೊತ್ತು
ಸಂಸಾರವಿಲ್ಲದೆ

ಅಂದವೇನು ಗೊತ್ತು
ಹೆಣ್ಣಿಲ್ಲದೆ
ಕಲೆಗಳೇನು ಗೊತ್ತು ಒಳ-
ಗಣ್ಣಿಲ್ಲದೆ

ಯಾವುದೇನು ಗೊತ್ತು ತಾ-
ಯ್ನುಡಿಯಿಲ್ಲದೆ
ಜಗವೇನು ಗೊತ್ತು ಜಗ-
ನ್ಮಾತೆಯಿಲ್ಲದೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...