ಸನ್ನಿದ್ಧಿ

ಬದುಕು ಎಲ್ಲರದು ಬೆಳಕಾಗಲಿ
ಅವರ ಅಂತಃಕರಣ ಶುದ್ಧವಾಗಲಿ
ಹೃದಯ ಮಲೀನತೆ ಹೋಮ ಗೈಯಲಿ
ಸದಾ ನಾಲಿಗೆ ಮೇಲೆ ರಾಮ ನಾಮವಿರಲಿ

ಕ್ಷಣದ ಬಾಳಿದು ನಶ್ವರ ಜೀವನ
ಈ ಜೀವನವೊಂದೇ ಸುವರ್‍ಣಾವಕಾಶ
ನರ ಜನುಮದಲಿ ನಾಮ ಸಂಕೀರ್‍ತನ ಗೈಯಲಿ
ಈ ಬಾಳಿನಲ್ಲೆ ಪಡೆಯಲಿ ಮುಕ್ತಿ ವಿಶೇಷ

ನಮ್ಮ ಲಕ್ಷವು ಹರಿದಿದೆ ಆನಂದದಲಿ
ಆದರೆ ಆನಂದದ ಅರಿವು ನಮಗಿಲ್ಲ
ಸುಣ್ಣದ ನೀರೆಲ್ಲ ಹಾಲೆಂದು ನಂಬಿದಂತೆ
ಅಲ್ಪ ಸುಖದನುಭೂತಿ ಆನಂದವಲ್ಲ

ಜನಿಸಿ ಬಂದಾಗ ಸುದೈವಕ್ಕೆ ಲಭಿಸಿತ್ತು ದೇಹ
ಮತ್ತೆ ತಿಳಿಯಿತು ನನ್ನವರೆಂಬುವ ಮೋಹ
ನಾನು ನನ್ನದೆಂಬ ಬರೀ ಅಹಂಕಾರ ದಾಹ
ಎಸುಗುತ್ತಿದ್ದೇವೆ ಆ ಪರಮಾತ್ಮನಿಗೆ ದ್ರೋಹ

ನಮ್ಮ ಜ್ಞಾನವೆಲ್ಲ ಕೇವಲ ಉಳಿದಿದೆ ಸ್ವಾರ್‍ಥಕ್ಕೆ
ಮತ್ತೆ ಆಸ್ತಿ ಅಂತಸ್ತುಗಳ ಗಳಿಕೆಯಲಿ
ಹೋಗುವಾಗ ಬಾರದು ಈ ಮಾನವ ದೇಹ
ಭಜಿಸು ಮಾಣಿಕ್ಯ ವಿಠಲನ ಸನ್ನಿದ್ಧಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೯
Next post ಮಲ್ಲಿ – ೭

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…